Don't Miss!
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಸ್ತುತ ಚಿತ್ರಮಂದಿರದಲ್ಲಿ ಪ್ರದರ್ಶನವಾಗ್ತಿರುವ ಕನ್ನಡ ಸಿನಿಮಾಗಳ ಪಟ್ಟಿ
ಪರಭಾಷೆ ಚಿತ್ರಗಳ ಹಾವಳಿಯಲ್ಲೂ ಕನ್ನಡ ಸಿನಿಮಾಗಳು ಸದ್ದು ಮಾಡ್ತಿದೆ. ಸ್ಟಾರ್ ನಟರ ಚಿತ್ರಗಳ ಮಧ್ಯೆಯೂ ಹೊಸಬರ ಸಿನಿಮಾಗಳು ರಿಲೀಸ್ ಆಗಿ ಪ್ರದರ್ಶನವಾಗುತ್ತಿದೆ. ಕನ್ನಡ ಸಿನಿಮಾ ನೋಡಲು ಕಾಯುತ್ತಿರುವ ಪ್ರೇಕ್ಷಕರಿಗೆ ಅಗತ್ಯವಾದ ಮಾಹಿತಿ ಇಲ್ಲಿದೆ.
ಸದ್ಯ ಕರ್ನಾಟಕದಲ್ಲಿ ಪ್ರದರ್ಶನವಾಗುತ್ತಿರುವ ಕನ್ನಡ ಸಿನಿಮಾಗಳು ಯಾವುದು, ಯಾವ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದೆ ಎಂಬುದಕ್ಕೆ ಉತ್ತರ ಇಲ್ಲಿದೆ. ಡಿಸೆಂಬರ್ 27 ರಂದು ತೆರೆಕಂಡಿದ್ದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಹಲವು ಚಿತ್ರಮಂದಿರಗಳಲ್ಲಿ ಶೋ ಕಾಣ್ತಿದೆ. ಯಶಸ್ವಿ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ.
ಶ್ರೀಮನ್ನಾರಾಯಣನ ಮೇಲೆ ಮುನಿಸಿಕೊಂಡ ಫ್ಯಾನ್ಸ್: ಇದ್ದಕ್ಕಿದ್ದಂತೆ ಪ್ರೋಮೋ ಮಾಯವಾಗಿದ್ದೇಕೆ?
ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ನಟಿಸಿರುವ 'ಶ್ರೀ ಭರತ ಬಾಹುಬಲಿ' ಸಿನಿಮಾ ಕಳೆದ ವಾರ ಬಿಡುಗಡೆಯಾಗಿತ್ತು. ಈ ಚಿತ್ರವೂ ಹಲವು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣ್ತಿದೆ.
ಪಿ ಶೇಷಾದ್ರಿ ನಿರ್ದೇಶನದ 'ಮೂಕಜ್ಜಿಯ ಕನಸುಗಳು' ಚಿತ್ರ ಬೆಂಗಳೂರಿನ ಗೋಪಾಲನ್ ಮಾಲ್ ನಲ್ಲಿ ಒಂದು ಶೋ ಇದೆ. ಕಳೆದ ಬಿಡುಗಡೆಯಾಗಿದ್ದ 'ಜನ್ ಧನ್' ಸಿನಿಮಾವೂ ಕೆಲವು ಚಿತ್ರಮಂದಿರದಲ್ಲಿ ಶೋ ಕಾಣ್ತಿದೆ.
ಜಿಲ್ಕ ಚಿತ್ರಕ್ಕಾಗಿ ಕವೀಶ್ ಶೆಟ್ಟಿ ಸಾಹಸ: ಚಿತ್ರರಂಗದಲ್ಲೇ ಇಂತಹ ಪ್ರಯತ್ನ ಮೊದಲ ಸಲ!
ಜಗ್ಗೇಶ್, ಮೇಘನಾ ಗಾಂವ್ಕರ್ ನಟಿಸಿದ್ದ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ರಾಜ್ ಕುಮಾರ್ ರಸ್ತೆಯಲ್ಲಿರುವ ಒರೆಯಾನ್ ಮಾಲ್ ನಲ್ಲಿ ಒಂದು ಶೋ ಇದೆ. ಇನ್ನು ಕಳೆದ ವಾರ ರಿಲೀಸ್ ಆಗಿದ್ದ 'ಗುಡುಮನ ಅವಾಂತರ' ಚಿತ್ರವೂ ಒಂದು ಚಿತ್ರಮಂದಿರದಲ್ಲಿದೆ.
ಸುದೀಪ್ ಮತ್ತು ಸಲ್ಮಾನ್ ನಟಿಸಿರುವ ದಬಾಂಗ್ 3 ಸಿನಿಮಾ ಕನ್ನಡ ವರ್ಷನ್ ಕೆಂಗೇರಿ ಉಪನಗರದ ರಾಬಿನ್ ಚಿತ್ರಮಂದಿರದಲ್ಲಿ ನಾಲ್ಕು ಶೋ ಕಾಣ್ತಿದೆ. ಶ್ರೀಮುರಳಿಯ 'ಭರಾಟೆ' ಸಿನಿಮಾ ಮೆಜಿಸ್ಟಿಕ್ ನ ಸ್ವಪ್ನ ಚಿತ್ರಮಂದಿರದಲ್ಲಿ ಎರಡು ಶೋ ಪ್ರದರ್ಶನ ಕಾಣ್ತಿದೆ.
ನಟ ಚೇತನ್ ಮದುವೆ ದಿನಾಂಕ ಬಹಿರಂಗ: ಅನಾಥಾಶ್ರಮದಲ್ಲಿ ನಡೆಯಲಿದೆ ವಿವಾಹ
ಡಿಸೆಂಬರ್ 6 ರಂದು ತೆರೆಕಂಡಿದ್ದ 'ಅಳಿದು ಉಳಿದವರು' ಸಿನಿಮಾ ಮೆಜಿಸ್ಟಿಕ್ ನ ಸ್ವಪ್ನ ಚಿತ್ರಮಂದಿರದಲ್ಲಿ ಎರಡು ಶೋ ಹೋಗ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಒಡೆಯ' ಸಿನಿಮಾ ಯಶವಂತಪುರದ ಚಿತ್ರಮಂದಿರದಲ್ಲಿ ಎರಡು ಶೋ ಪ್ರದರ್ಶನವಾಗ್ತಿದೆ.
ಈ ಚಿತ್ರಗಳ ಜೊತೆಗೆ ಮುಂದಿನ ವಾರ ಅಂದ್ರೆ ಜನವರಿ 24 ರಂದು, ಚಿರು ಸರ್ಜಾ ನಟನೆಯ 'ಖಾಕಿ', ಶಿವರಾಜ್ ಕೆ ಆರ್ ಪೇಟೆ ನಟನೆಯ 'ನಾನು ಮತ್ತು ಗುಂಡ', ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರಗಳು ತೆರೆಕಾಣ್ತಿದೆ.