ಬಹುಮುಖ ಪ್ರತಿಭೆ ಅಂಕಿತ ಅಮರ್ , ಜ್ಯೂನಿಯರ್ ಸಾಯಿ ಪಲ್ಲವಿ ಎಂದ ಅಭಿಮಾನಿಗಳು
ನಮ್ಮನೆ ಯುವರಾಣಿ ಧಾರಾವಾಹಿಯ ಮೂಲಕ ಎಲ್ಲರ ಮನ ಗೆದ್ದ ನಟಿ ಅಂಕಿತ ಅಮರ್. ಅಭಿಮಾನಿಗಳ ಮನಸ್ಸನ್ನು ಅದಾಗಲೇ ಕಡ್ಡುಬಿಟ್ಟಿದ್ದರು. ಚಿಟ ಪಟ ಮಾತುಗಳಿಂದಲೇ ಎಲ್ಲರ ಮನಗೆದ್ದ ಚೆಲುವೆ ಅಂಕಿತ ಎಂದು ಹೇಳಿದರೆ ತಪ್ಪಾಗದು. ಇದೀಗ ಇಬ್ಬನಿ ತಬ್ಬಿದ ಇಳೆಯಲೀ ಸಿನಿಮಾ ಮೂಲಕ ಎಲ್ಲರ ಮನಸ್ಸನ್ನೂ ಗೆದ್ದ ಚೋರಿ ಈಕೆ. ಆದರೆ ಅಂಕಿತ ಅಮರ್ ಎಲ್ಲರಿಗೂ ಇಷ್ಟ ಆಗುವ ನಟಿ ಯಾಕೆಂದರೆ ಈಕೆಯ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ ಹಾಗೆಯೇ ಬಹಳ ಸಿಂಪಲ್ ಆಗಿರುವ ನಟಿ.
ಜಾಸ್ತಿ ಮೇಕಪ್ ಮಾಡಿಕೊಳ್ಳದೆ ತನಗೇನು ಚೆನ್ನಾಗಿ ಕಾಣಿಸುತ್ತದೆ. ಯಾವ ಥರ ಇದ್ದರೆ ಅಭಿಮಾನಿಗಳಿಗೆ ನಾನು ಚೆನ್ನಾಗಿ ಕಾಣಿಸುತ್ತೇನೆ ಎಂದೆಲ್ಲವು ಕೂಡ ಬಹಳ ಚೆನ್ನಾಗಿಯೇ ತಿಳಿದಿದೆ ಎಂದು ಹೇಳಿದರೆ ತಪ್ಪಾಗದು. ಬಹಳ ಚೆನ್ನಾಗಿ ಹಾಡು ಹಾಡುತ್ತಾರೆ ಹಾಗೆಯೇ ಎಲ್ಲರ ಜೊತೆ ಮಾತು ಕೂಡ ಚೆನ್ನಾಗಿ ಆಡುತ್ತಾರೆ. ಇದೆಲ್ಲವನ್ನೂ ನೋಡಿದ ಅಭಿಮಾನಿಗಳಿಗೆ ಮಾತ್ರ ಈಕೆ ಬಹಳ ಹತ್ತಿರ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗದು. ಇನ್ನು ರಕ್ಷಿತ್ ಶೆಟ್ಟಿ ಅವರು ನಿರ್ಮಾಣ ಮಾಡಿರುವ ಚಿತ್ರ. ಇಬ್ಬನಿ ತಬ್ಬಿದ ಇಳೆಯಲಿ ಚಿತ್ರಕ್ಕೆ ಬಹಳಷ್ಟು ರೆಸ್ಪಾನ್ಸ್ ಬಂದಿದ್ದು ಅಂಕಿತ ಅಭಿನಯಕ್ಕೆ ಜನರು ಮಾರು ಹೋಗಿದ್ದಾರೆ.

ಭವಿಷ್ಯದಲ್ಲಿ ಅಂಕಿತ ಬಹಳ ಉತ್ತಮ ನಟಿ ಆಗಬಹುದು ಹಾಗೆಯೇ ಆಕೆಯ ಸಿಂಪ್ಲಿಸಿಟಿ ಗೆ ಅನೇಕರು ಆಕೆಯನ್ನು ಸಾಯಿ ಪಲ್ಲವಿ ಅವರಿಗೆ ಹೋಲಿಕೆ ಮಾಡಿದ್ದಾರೆ. ಇತ್ತೀಚಿಗೆ ಅಂಕಿತ ಅಪರ್ಣಾ ಅವರಿಗಾಗಿಯೇ ಹಾಡನ್ನು ಕೂಡ ಹಾಡಿದ್ದರು. ಈ ಹಾಡಿಗೆ ಅಭಿಮಾನಿಗಳಿಗೆ ಬಹಳಷ್ಟು ಖುಷಿ ನೀಡಿದೆ. ಇನ್ನು ಅಂಕಿತ ಅವರು ಬಹುಮುಖ ಪ್ರತಿಭೆ ಎಂದು ಹೇಳಿದರೆ ತಪ್ಪಾಗದು. ನಟನೆ ಮಾಡುವುದು, ಹಾಡು ಗಾರಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ
ಸಿನಿಮಾದಲ್ಲಿ ಮನೋಜ್ಞವಾಗಿ ನಟನೆ ಮಾಡಿದ ನಟಿ
ಯಾವುದೇ ಆಂಕರಿಂಗ್ ಇರಲೀ ಅದೆಲ್ಲವನ್ನೂ ಲೀಲಾಜಾಲವಾಗಿ ನಿಭಾಯಿಸಿಕೊಂಡು ಹೋಗುವ ಕೆಪಾಸಿಟಿ ಅವರಿಗಿದೆ. ಇನ್ನು ಕನ್ನಡದ ಕಿರುತೆರೆಯಲ್ಲಿ ಮೊದಲಿಗೆ ಅಂಕಿತ ಅಮರ್ ಅವರು ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಮೀರಾ ಪಾತ್ರಕ್ಕೆ ಜೀವ ತುಂಬಿದರು. ಅದಾದ ಬಳಿಕ ಬೇರೆ ಭಾಷೆಯಲ್ಲಿ ಕೂಡ ನಟನೆ ಮಾಡುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಇದಾದ ಬಳಿಕ ಇವರಿಗೆ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದಲ್ಲಿ ನಟನೆ ಮಾಡಲು ಅವಕಾಶ ಸಿಕ್ಕಿತು.

ಹಲವು ಸಿನಿಮಾಗಳಲ್ಲಿ ನಟನೆ ಮಾಡುತ್ತಿರುವ ನಟಿ
ಇನ್ನು ಅಂಕಿತ ಅಮರ್ ಅವರು ಜಸ್ಟ್ ಮ್ಯಾರೀಡ್ ಸಿನಿಮಾದಲ್ಲಿ ನಟನೆ ಮಾಡಿ ಸುದ್ದಿಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಶೈನ್ ಶೆಟ್ಟಿ ಜೊತೆ ಇವರು ಆಕ್ಟ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರ ಆಗಿದ್ದಾರೆ ಇನ್ನೂ ಮೈ ಹೀರೋ ಸಿನಿಮಾದಲ್ಲಿ ಕೂಡ ಇವರು ನಟನೆಯನ್ನು ಮಾಡುತ್ತಿದ್ದಾರೆ .


Click it and Unblock the Notifications











