Don't Miss!
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- News Samsung: ಮಾರುಕಟ್ಟೆ ಗ್ರ್ಯಾಂಡ್ ಎಂಟ್ರಿ ನೀಡಿದೆ ನ್ಯೂ ಫೋನ್
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೊಡ್ಡ ಕಸನು ಕಂಡಿದ್ದವನ ಬಾಳಲ್ಲಿ 'ಅನಾಹುತ' ಆಗೋಯ್ತು
ಅಮ್ಮನಗೆ ಚಿನ್ನದ ಸರ ಕೊಡಿಸಬೇಕು. ಅಪ್ಪನನ್ನ ವಿಮಾನದಲ್ಲಿ ಸುತ್ತಾಡಿಸಬೇಕು ಎಂಬ ಆಸೆ. ಅದೇ ಟೈಂನಲ್ಲಿ ನನಗೊಂದು ಕೆಲಸ ಸಿಕ್ತು. ಈ ಎಲ್ಲ ಖುಷಿಯನ್ನ ಸಂಭ್ರಮಿಸುವುದಕ್ಕೆ ನನ್ನ ಬರ್ತಡೇ ಬೇರೆ ಬಂತು. ಫ್ರೆಂಡ್ಸ್ ಜೊತೆ ಸೇರಿ ಎಂಜಾಯ್ ಮಾಡಿದೆ. ಕುಡಿದು ಪಾನಮತ್ತನಾದೇ. ಸಮಯ ತುಂಬಾ ಆಗಿತ್ತು. ಮನೆಗೆ ಹೋಗಲು ಬೈಕ್ ಹತ್ತಿದೆ. ಸ್ನೇಹಿತರು ಇಷ್ಟೋತ್ತಲ್ಲಿ ಬೈಕ್ ಚಾಲನೆ ಮಾಡುವುದು ಬೇಡ ಅಂದ್ರು. ನಾನು ಕೇಳಲಿಲ್ಲ. ಹೊರಟು ಹೋದೆ. ಆಗಲೇ ಆಗಿದ್ದು 'ಅನಾಹುತ'.
'ನಮ್ದು ಕೆ' ಪ್ರೊಡಕ್ಷನ್ ನಲ್ಲಿ ತಯಾರಾಗಿರುವ ಹೊಸ ಕಿರುಚಿತ್ರ. ಈ ಚಿತ್ರದ ಹೆಸರೇ 'ಅನಾಹುತ'. ಮಧ್ಯಪಾನ ಮಾಡಿ ಬೈಕ್ ಚಾಲನೆ ಮಾಡುವುದು ಎಷ್ಟು ಅಪಾಯ ಮತ್ತು ಅದರಿಂದ ಏನೆಲ್ಲಾ ಅನಾಹುತ ಆಗುತ್ತೆ ಎಂಬುದನ್ನ ಸರಳವಾಗಿ, ಚೊಕ್ಕವಾಗಿ ನಿರೂಪಣೆ ಮಾಡಿದ್ದಾರೆ.
ಇಡೀ ಕಿರುಚಿತ್ರದಲ್ಲಿ ಬರುವುದು ಒಂದೇ ಪಾತ್ರ. ಒಂದು ಪಾತ್ರವನ್ನಿಟ್ಟು ಸಮಾಜಕ್ಕೊಂದು ಒಳ್ಳೆಯ ಸಂದೇಶ ನೀಡಿದ್ದಾರೆ. ಅಂದ್ಹಾಗೆ, ಆ ಒಂದು ಪ್ರಮುಖ ಪಾತ್ರ ನಿರ್ವಹಿಸಿರುವುದು ರಾಕೇಶ್ ಮೈಯ್ಯ.
ಇನ್ನುಳಿದಂತೆ ಕಥೆ-ಸಂಭಾಷಣೆ ಮತ್ತು ನಿರ್ದೇಶನ ಮಾಡಿರುವುದು ಶ್ರವಣ್ ನಾರಾಯಣ್. ಮನಸ ಶರ್ಮಾ ಛಾಯಾಗ್ರಹಣ, ಮಹೇಶ್ ಜುಡಿ ಸಂಗೀತವನ್ನ ಒಳಗೊಂಡಿದೆ. ಈ ಅದ್ಭುತವಾದ ಕಿರುಚಿತ್ರವನ್ನ ಒಮ್ಮೆ ನೋಡಿ, ಪ್ರೋತ್ಸಾಹಿಸಿ.