Don't Miss!
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಸಂಗೀತಾ ಭಟ್ ಪತಿಗೆ ಯಶ್ ಅಭಿಮಾನಿಗಳಿಂದ ಜೀವ ಬೆದರಿಕೆ!
Recommended Video
ಕನ್ನಡದ ಸ್ಯಾಂಡ್ ಅಪ್ ಕಾಮಿಡಿಯನ್ ಸುದರ್ಶನ್ ರಂಗಪ್ರಸಾದ್ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಂದ ಜೀವ ಬೆದರಿಕೆ ಬಂದಿದೆಯಂತೆ. ಈ ಸಂಗತಿಯನ್ನು ಅವರೇ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.
ಸ್ಯಾಂಡ್ ಅಪ್ ಕಾಮಿಡಿಯನ್ ಆಗಿರುವ ಸುದರ್ಶನ್ ರಂಗಪ್ರಸಾದ್ ಕನ್ನಡದ ನಟಿ ಸಂಗೀತಾ ಭಟ್ ಪತಿ. ಯೂ ಟ್ಯೂಬ್ ನಲ್ಲಿ ಇರುವ ಸುದರ್ಶನ್ ಸ್ಯಾಂಡ್ ಅಪ್ ಕಾಮಿಡಿ ವಿಡಿಯೋ ವಿರುದ್ಧ ಯಶ್ ಅಭಿಮಾನಿಗಳು ಕೋಪಗೊಂಡಿದ್ದಾರೆ. ಈ ವಿಡಿಯೋದಲ್ಲಿ ಯಶ್ ಡೈಲಾಗ್ ಉಪಯೋಗಿಸಿಕೊಂಡಿದ್ದು, 'ಬಿಲ್ಡಪ್ ಡೈಲಾಗ್' ಎಂಬ ಪದ ಬಳಸಲಾಗಿದೆ.
ಭಯಬಿದ್ದು ಅಮೆರಿಕದಿಂದ ಓಡಿ ಬಂದಿದ್ದೇಕೆ ರಾಕಿಂಗ್ ಸ್ಟಾರ್?
ಯಶ್ ಗೆ 'ಬಿಲ್ಡಪ್ ಡೈಲಾಗ್' ಎಂಬ ಪದ ಬಳಕೆ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಯಶ್ ಅಭಿಮಾನಿಗಳು ಸುದರ್ಶನ್ ರಂಗಪ್ರಸಾದ್ ರಿಗೆ ಟ್ರೋಲ್ ಮಾಡುತ್ತಿದ್ದಾರೆ. ಕೆಟ್ಟ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ. ಅಲ್ಲದೆ ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸುದರ್ಶನ್ ರಂಗಪ್ರಸಾದ್ ಆರೋಪ ಮಾಡಿದ್ದಾರೆ.
'ಬಿಲ್ಡಪ್ ಡೈಲಾಗ್' ಎಂಬ ಪದ ಬಳಕೆ
''ನಾವು ಸೆಕೆಂಡ್ ಪಿಯುಸಿ ಇದ್ದಾಗ ಮನೆಯವರು, ಸಂಬಂಧಿಗಳು ಬರೀ 'ಬಿಲ್ಡಪ್ ಡೈಲಾಗ್' ಹೊಡೆಯುತ್ತಿದ್ದರು. ಅದೇ ನಮ್ ರಾಕಿಂಗ್ ಸ್ಟಾರ್ ಯಶ್ ತರ'' ಎಂದು ಸುದರ್ಶನ್ ರಂಗಪ್ರಸಾದ್ ಹೇಳಿದ್ದಾರೆ. ಜೊತೆಗೆ ಇದೇ ವಿಡಿಯೋದಲ್ಲಿ 'ಅಣ್ತಾಮ್ಮ', 'ಹವಾ' ಎಂದು ಯಶ್ ಡೈಲಾಗ್ ಅನ್ನು ಇಮಿಟೇಟ್ ಮಾಡಿದ್ದರು. ಈ ವಿಡಿಯೋದಲ್ಲಿ ಯಶ್ ಬಗ್ಗೆ 'ಬಿಲ್ಡಪ್ ಡೈಲಾಗ್' ಎಂದು ಬಳಸಿದ್ದು, ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಕಿಂಗ್ ಸ್ಟಾರ್ ಗೆ ಆವಾಜ್ ಹಾಕಿದ ರಾಧಿಕಾ ಪಂಡಿತ್
ಘಟನೆ ಬಗ್ಗೆ ಸುದರ್ಶನ್ ರಂಗಪ್ರಸಾದ್ ಸ್ಪಷ್ಟನೆ
ಈ ಘಟನೆ ಬಗ್ಗೆ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿರುವ ಸುದರ್ಶನ್ ರಂಗಪ್ರಸಾದ್ '' ಎರಡು ವರ್ಷದ ಹಳೇ ವಿಡಿಯೋದಲ್ಲಿ ನಾನು ಯಶ್ ಅವರ ಡೈಲಾಗ್ ಉಪಯೋಗಿಸಿ ನಮ್ಮ ಕಾಲೇಜ್ ಹಾಗೂ ಕುಟುಂಬದವರು ಯಾವ ರೀತಿ ಮಾತಾಡ್ತಾರೆ ಅನ್ನೋ ಬಗ್ಗೆ ಹಾಸ್ಯ ನಾಟಕ ಮಾಡಿದೀನಿ ವಿನಃ ಯಶ್ ಅವರನ್ನು ಟೀಕೆ ಮಾಡುವ ಯಾವ ಉದ್ದೇಶವೂ ನನಗೂ ಹಾಗೂ lolbagh ಗೂ ಇಲ್ಲ. ಕ್ಷಮೆ ಇರಲಿ.'' ಎಂದಿದ್ದಾರೆ.
ಜೀವ ಬೆದರಿಕೆಗಳು ಬರುತ್ತಿವೆ
''ಈ ವೀಡಿಯೋವನ್ನು ಅಪಾರ್ಥ ಮಾಡಿಕೊಂಡು ಅದನ್ನು ಕೆಟ್ಟದಾಗಿ ಟ್ರೊಲ್ ಮಾಡುತ್ತಿದ್ದಾರೆ, ಇದರಲ್ಲಿ ನನ್ನ ತಪ್ಪಿಲ್ಲ, ಹಾಸ್ಯವನ್ನು ಹಾಸ್ಯವಾಗಿ ತೆಗೆದುಕೊಳ್ಳಿ ಎಂದು ವಿನಂತಿಸುತ್ತೇನೆ ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಕೇಳಿಕೊಳ್ಳುತ್ತೇನೆ. ಯಶ್ ಫ್ಯಾನ್ಸ್ ಕಡೆಯಿಂದ ನನಗೆ ಹಾಗೂ ನನ್ನ ಕುಟುಂಬದವರಿಗೆ ಕೆಟ್ಟ ರೀತಿಯಲ್ಲಿ ಎಸ್ ಎಂ ಎಸ್ ಹಾಗೂ ಜೀವ ಬೆದರಿಕೆಗಳು ಬರುತ್ತಿವೆ. ಕಂಡಿತವಾಗಿಯು ಯಶ್ ಅವರು ಸಹ ಅವರ ಫ್ಯಾನ್ಸ್ ಗಳಿಂದ ಇಂಥ ನಡುವಳಿಕೆಗಳನ್ನು ಮೆಚ್ಚುವುದಿಲ್ಲ.'' ಎಂದು ತಿಳಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಂತಸದ ಸುದ್ದಿ
ಸೈಬರ್ ಕ್ರೈಮ್ ಪೊಲೀಸರ ಮೊರೆ
ಯಶ್ ಅಭಿಮಾನಿಗಳ ಕೆಟ್ಟ ಕಾಮೆಂಟ್ಸ್ ಗಳನ್ನು, ಟ್ರೋಲ್ ಗಳನ್ನು, ಜೀವ ಬೆದರಿಕೆ ಸಂದೇಶಗಳ ಸ್ಕ್ರೀನ್ ಶಾಟ್ ಗಳನ್ನು ಸುದರ್ಶನ್ ರಂಗಪ್ರಸಾದ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಘಟನೆ ಬಗ್ಗೆ ಬೆಂಗಳೂರು ಸಿಟಿ ಸೈಬರ್ ಕ್ರೈಮ್ ಪೊಲೀಸರ ಮೊರೆ ಹೋಗಿದ್ದಾರೆ. ''ದಯವಿಟ್ಟು, ಅಪಾರ್ಥ ಮಾಡಿಕೊಂಡ ಯಶ್ ಫ್ಯಾನ್ಸ್, ಯಾರನ್ನು ನೋಯಿಸುವ ಅಥವಾ disrespect ಮಾಡುವ ಉದ್ದೇಶ ನನ್ನದಲ್ಲ.'' ಎಂದು ಹೇಳಿದ್ದಾರೆ.