Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸರಳತೆಯ ಸಾಹುಕಾರರು' : ಸಣ್ಣ ಅಂಗಡಿಯಲ್ಲಿ ಸಿಗೋ ರುಚಿ ಸ್ಟಾರ್ ಹೋಟೆಲ್ ನಲ್ಲೂ ಸಿಗಲ್ಲ
Recommended Video
ಕನ್ನಡದ ನಟರಾದ ಶಿವರಾಜ್ ಕುಮಾರ್, ಉಪೇಂದ್ರ, ಪುನೀತ್ ರಾಜ್ ಕುಮಾರ್, ದರ್ಶನ್, ಸುದೀಪ್ ಅವರ ಸಂಭಾವನೆ ಕೋಟಿ ಕೋಟಿ ಇದೆ. ಆದರೆ ಕೋಟಿ ದುಡಿಯುವ ಈ ನಟರು ತಮ್ಮ ದುಡ್ಡಿನ ಮೂಲಕ ಮಾತ್ರವಲ್ಲದೆ, ತಮ್ಮ ಸರಳತೆಯ ಮೂಲಕ ಸಾಹುಕಾರರಾಗಿದ್ದಾರೆ.
ದೊಡ್ಡ ಹೋಟೆಲ್, ಪಾರ್ಟಿ, ಹತ್ತಾರು ವೆರೈಟಿ ಊಟ ಎಲ್ಲ ಇದ್ದರೂ ಈ ನಟರು ಮಾತ್ರ ರಸ್ತೆ ಬದಿಯ ಪುಟ್ಟ ಅಂಗಡಿಯ ತಿಂಡಿಗಳನ್ನು ಸವಿಯುತ್ತಿದ್ದಾರೆ. 'ಶ್ರೀಮಂತರ ಮನೆ ನೋಟ ಚೆಂದ, ಬಡವರ ಮನೆ ಊಟ ಚೆಂದ' ಎನ್ನುವ ಮಾತಿನ ಹಾಗೆ ಸಣ್ಣ ಅಂಗಡಿಯ ಊಟದ ರುಚಿಯನ್ನು ಆನಂದಿಸುತ್ತಿದ್ದಾರೆ.
ಅಂದಹಾಗೆ, ಕನ್ನಡದ ಕೆಲವು ನಟರ ಅಂತಹ ಫೋಟೋಗಳು ಮುಂದಿದೆ ಓದಿ...
ರಾಧಕ್ಕನ ಹೋಟೆಲ್ ನಲ್ಲಿ ಕಿಚ್ಚ ಉಪಹಾರ
ಚುನಾವಣಾ ಪ್ರಚಾರದಲ್ಲಿ ಬಿಜಿ ಆಗಿದ್ದ ನಟ ಸುದೀಪ್ ಮೊಳಕಾಲ್ಮೂರು ಗೆ ತೆರಳುವ ಮುನ್ನ ಆಂಧ್ರ ಗಡಿಭಾಗದ ಒಬಳಾಪುರಂ ಬಳಿಯ ರೋಡ್ ಬದಿಯಲ್ಲಿರುವ ಹೋಟೆಲ್ ನಲ್ಲಿ ತಿಂಡಿ ತಿಂದು ಟೀ ಕುಡಿದಿದ್ದಾರೆ. ರಾಧಾ ಎನ್ನುವ ಬಡ ಮಹಿಳೆ ಚಪ್ಪರ ಹಾಕಿಕೊಂಡು ಹೋಟೆಲ್ ನಡೆಸುತ್ತಿದ್ದು, ಅದೇ ಹೋಟೆಲ್ ನಲ್ಲಿ ಸುದೀಪ್ ಚಿತ್ರಾನ್ನ ತಿಂದು ಟೀ ಕುಡಿದಿದ್ದಾರೆ. ಬಳಿಕ ರಾಧಕ್ಕನಿಗೆ 10 ಸಾವಿರ ರೂಪಾಯಿ ಹಣ ನೀಡಿದ್ದಾರೆ.
ರಸ್ತೆ ಬದಿ ತಿಂಡಿ ತಿಂದ ಕಿಚ್ಚ ಮಾಲೀಕರಿಗೆ ಕೊಟ್ಟ ಹಣ ಎಷ್ಟು?
ಪೆಟ್ಟಿಗೆ ಅಂಗಡಿಯಲ್ಲಿ ಅಪ್ಪು ಟೀ ಪಾರ್ಟಿ
ನಟ ಪುನೀತ್ ರಾಜ್ ಕುಮಾರ್ ಕೂಡ ಅನೇಕ ಬಾರಿ ಈ ರೀತಿ ರಸ್ತೆ ಬದಿಯ ಅಂಗಡಿಗಳಲ್ಲಿ ಊಟ ಮಾಡಿದ್ದಾರೆ. ಇನ್ನು 'ರಾಜಕುಮಾರ' ಚಿತ್ರದ ವಿಜಯ ಯಾತ್ರೆಯ ಸಮಯದಲ್ಲಿ ಪುನೀತ್ ರಸ್ತೆ ಮಧ್ಯೆ ಇದ್ದ ಒಂದು ಚಿಕ್ಕ ಪೆಟ್ಟಿಗೆ ಅಂಗಡಿಯಲ್ಲಿ ಟೀ ಕುಡಿಯುವ ಮೂಲಕ ನಾನೊಬ್ಬ ಸರಳತೆಯ ರಾಜಕುಮಾರ ಎನ್ನುವುದನ್ನು ತೋರಿಸಿದ್ದಾರೆ.
ಸರಳತೆಯ ಶ್ರೀಮಂತರು: ಅಂದು ಅಣ್ಣಾವ್ರು, ಇಂದು ಅಣ್ಣಾವ್ರ ಮಗ
ರಸ್ತೆ ಬದಿಯ ಅಂಗಡಿಗಳಲ್ಲಿ ಶಿವಣ್ಣ ಲಂಚ್, ಡಿನ್ನರ್
ಸಿಂಪ್ಲಿಸಿಟಿ ಅಂದರೆ ಶಿವಣ್ಣ, ಶಿವಣ್ಣ ಅಂದರೆ ಸಿಂಪ್ಲಿಸಿಟಿ ಎನ್ನುವ ಮಾತಿದೆ. ಅದೇ ಕಾರಣಕ್ಕೆ ಶಿವರಾಜ್ ಕುಮಾರ್ ಎಲ್ಲರಿಗೆ ಇಷ್ಟ ಆಗುತ್ತಾರೆ. ಶಿವಣ್ಣ ಅನೇಕ ಬಾರಿ ರಸ್ತೆ ಬದಿಯ ಸಣ್ಣ ಸಣ್ಣ ಅಂಗಡಿಗಳಲ್ಲಿ ಪಾನಿಪೂರಿ ತಿಂದಿದ್ದಾರೆ. ಇತ್ತೀಚಿಗಷ್ಟೆ 'ಕವಚ' ಚಿತ್ರದ ಶೂಟಿಂಗ್ ವೇಳೆ ಶಿವಮೊಗ್ಗ ಜಿಲ್ಲೆಯ ಪುಟ್ಟ ಹಳ್ಳಿಯ ಪುಟ್ಟ ಅಂಗಡಿಯಲ್ಲಿ ಶಿವಣ್ಣ ಊಟ ಮಾಡಿದ್ದರು.
ಅನ್ನಕ್ಕೆ ಬೆಲೆ ಕೊಡುವ ದರ್ಶನ್
ದೊಡ್ಡ ಅಭಿಮಾನಿ ಬಳಗವನ್ನೆ ಹೊಂದಿರುವ ನಟ ದರ್ಶನ್ ಸಾಕಷ್ಟು ಬಾರಿ ತಮ್ಮ ಸರಳತೆ ಮೂಲಕ ಇಷ್ಟ ಆಗುತ್ತಾರೆ. ಎಷ್ಟೇ ದೊಡ್ಡ ನಟನಾದರು ಅವರು ಅನ್ನಕ್ಕೆ ಗೌರವ ನೀಡುತ್ತಾರೆ. ಅನೇಕ ಕಾರ್ಯಕ್ರಮಗಳಲ್ಲಿ ದರ್ಶನ್ ಅಭಿಮಾಗಳ ಜೊತೆಗೆ ಕುಳಿತು ಸಾಮಾನ್ಯನಂತೆ ಊಟ ಮಾಡಿದ್ದಾರೆ.
ಚಿತ್ರನ್ನಾ ಅಂದರೆ ಉಪ್ಪಿಗೆ ಪ್ರಾಣ
ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಚಿತ್ರಾನ್ನ ಅಂದರೆ ಪ್ರಾಣ. ಊಟದ ಮೆನುವಿನಲ್ಲಿ ಅದೇನೇ ಪದಾರ್ಥಗಳು ಇದ್ದರೂ ಮೊದಲು ಉಪ್ಪಿ ಕೈ ಹಾಕುವುದು ಚಿತ್ರನ್ನಾಗೆ. ಸಣ್ಣ ಹೋಟೆಲ್ ಗಳಲ್ಲಿ ಸಿಗುವ ರುಚಿ ಯಾವ ಸ್ಟಾರ್ ಹೋಟೆಲ್ ನಲ್ಲಿ ಸಿಗಲ್ಲ ಎನ್ನುವುದು ಉಪ್ಪಿ ಮಾತು.