Don't Miss!
- Lifestyle ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಜಮಾನ ಯಶಸ್ಸಿಗೆ ಹಾರೈಸಿದ ಸ್ಯಾಂಡಲ್ ವುಡ್ ಸಿನಿತಾರೆಯರು
Recommended Video
ಬೇರೆ ನಟರ ಚಿತ್ರಗಳಿಗೆ, ಹೊಸ ನಟರ ಸಿನಿಮಾಗಳಿಗೆ ಸದಾ ಬೆಂಬಲ ನೀಡುವ ನಟ ದರ್ಶನ್. ಈಗ ದರ್ಶನ್ ನಟನೆಯ ಯಜಮಾನ ಸಿನಿಮಾ ತೆರೆಕಂಡಿದೆ. ಯಜಮಾನ ಚಿತ್ರ ದೊಡ್ಡ ಯಶಸ್ಸು ಕಾಣಲಿ ಎಂದು ಸ್ಯಾಂಡಲ್ ವುಡ್ ಸಿನಿತಾರೆಯರು ವಿಶ್ ಮಾಡಿದ್ದಾರೆ.
ಅಭಿಮಾನಿಗಳಂತೆ ಕೆಲವು ಸ್ಟಾರ್ ಗಳು ಕೂಡ ದರ್ಶನ್ ಚಿತ್ರ ನೋಡಲು ಕಾಯ್ತಾರೆ. ಅದರಲ್ಲೂ ಒಂದೂವರೆ ವರ್ಷದ ನಂತರ ದರ್ಶನ್ ಸಿನಿಮಾವೊಂದು ಚಿತ್ರಮಂದಿರಕ್ಕೆ ಬಂದಿರುವುದು ಸಹಜವಾಗಿ ಇಂಡಸ್ಟ್ರಿಯಲ್ಲಿ ಕುತೂಹಲ ಹೆಚ್ಚಿಸಿದೆ.
Yajamana First Review: ಮೊದಲ ಶೋ ನೋಡಿದವರ ಟ್ವಿಟ್ಟರ್ ಪ್ರತಿಕ್ರಿಯೆ
ಬಿಡುಗಡೆಗೆ ಮುಂಚೆ ಹಲವು ದಾಖಲೆಗಳನ್ನ ನಿರ್ಮಿಸಿರುವ ಯಜಮಾನ ಗೆಲುವಿನ ನಗೆ ಬೀರಲಿ ಎಂದು ಸಿನಿ ಸ್ಟಾರ್ಸ್ಟ ಟ್ವೀಟ್ ಮಾಡಿದ್ದಾರೆ. ಯಜಮಾನನಿಗೆ ಶುಭಕೋರಿರುವ ತಾರೆಯರು ಯಾರು? ಮುಂದೆ ಓದಿ.....
|
ನನಗೆ ನಂಬಿಕೆ ಇದೆ.....
''ನನಗೆ ನಂಬಿಕೆ ಇದೆ, ಯಜಮಾನ ಚಿತ್ರವನ್ನ ಎಲ್ಲರೂ ಪ್ರೀತಿಸುತ್ತಾರೆ ಮತ್ತು ಇಷ್ಟಪಡ್ತಾರೆ. ದರ್ಶನ್ ಸದಾ ಉತ್ತಮ, ಹರಿಕೃಷ್ಣ ಅವರು ಅದ್ಭುತ ಕೆಲಸ ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ'' ಎಂದು ನಟ ಚಿರಂಜೀವಿ ಸರ್ಜಾ ಟ್ವೀಟ್ ಮಾಡಿದ್ದಾರೆ.
Yajamana Review : ಮನೆಗೆ ಯಜಮಾನ.. ಮಾರ್ಕೆಟ್ ಗೆ ಸುಲ್ತಾನ..
|
ನೀನು ಮತ್ತೆ ಬಾಕ್ಸ್ ಆಫೀಸ್ ಗೆ ಸುಲ್ತಾನ
''ದರ್ಶನ್ ನಿನಗೆ ಬಹುದೊಡ್ಡ ಯಶಸ್ಸು ಸಿಗಲಿ. ಯಜಮಾನ ಚಿತ್ರದ ಮೂಲಕ ನೀನು ಮತ್ತೆ ಬಾಕ್ಸ್ ಆಫೀಸ್ ಗೆ ಸುಲ್ತಾನ ಆಗಿ ನಿಲ್ಲು'' ಎಂದು ನಟಿ ಸುಮಲತಾ ಶುಭ ಕೋರಿದ್ದಾರೆ.
'ಯಜಮಾನ'ನ ಜೊತೆ ಮಿಂಚುತ್ತಿದೆ ಯುವರಾಣಿ ರಶ್ಮಿಕಾ ಕಟೌಟ್
|
ಬಾಕ್ಸ್ ಆಫೀಸ್ ಯಜಮಾನ
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ಸಿಂಪಲ್ ಸುನಿ ಡಿ ಬಾಸ್ ಚಿತ್ರಕ್ಕೆ ವಿಶ್ ಮಾಡಿದ್ದು, ಬಾಕ್ಸ್ ಅಫೀಸ್ ಯಜಮಾನ....ನಾಳೆಯಿಂದ ಅಭಿಮಾನಿಗಳ ಜಮಾನ. ಜಮಾಯ್ಸಿ'' ಎಂದು ಟ್ವೀಟ್ ಮಾಡಿದ್ದಾರೆ.
ವಿಂಗ್ ಕಮಾಂಡರ್ ಅಭಿನಂದನ್ ನಿಜವಾದ ಹೀರೋ, ನಾವು ಡಮ್ಮಿ: ದರ್ಶನ್
|
ಯಜಮಾನ ಸಕ್ಸಸ್ ಆಗಲಿ
ಯಜಮಾನ ಚಿತ್ರಕ್ಕೆ ನಟ ದರ್ಶನ್ ಅವರಿಗೆ, ನಿರ್ದೇಶಕ ಹರಿಕೃಷ್ಣ ಅವರಿಗೆ ದೊಡ್ಡ ಯಶಸ್ಸು ಸಿಗಲಿ' ಎಂದು ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದಾರೆ. ಸಂತೋಷ್ ಆನಂದ್ ರಾಮ್ ಯಜಮಾನ ಚಿತ್ರದ ಟೈಟಲ್ ಹಾಡು ಬರೆದಿದ್ದಾರೆ.
ದರ್ಶನ್ ಶಿಷ್ಯ ಧನ್ವೀರ್
ಬಜಾರ್ ಚಿತ್ರದ ನಾಯಕ ಹಾಗೂ ದರ್ಶನ್ ಅವರ ಶಿಷ್ಯ ಎಂದೇ ಗುರುತಿಸಿಕೊಂಡಿರುವ ನಟ ಧನ್ವೀರ್, ಯಜಮಾನ ಚಿತ್ರಕ್ಕೆ ವಿಶ್ ಮಾಡಿದ್ದಾರೆ. ''ನಮ್ಮಂತ ಯುವನಟರಿಗೆ ಪ್ರೋತ್ಸಾಹಿಸುವ ದರ್ಶನ್ ಅವರ ಸಿನಿಮಾ ಗೆಲ್ಲಬೇಕು'' ಎಂದು ವಿಶ್ ಮಾಡಿದ್ದಾರೆ.
ಜೈ ಯಜಮಾನ, ಜೈ ದರ್ಶನ್
ಇನ್ನು ನಿರ್ದೇಶಕ ಯೋಗರಾಜ್ ಭಟ್ ಅವರು ತಮ್ಮದೇ ಸ್ಟೈಲ್ ನಲ್ಲಿ ಯಜಮಾನ ಚಿತ್ರಕ್ಕೆ ವಿಶ್ ಮಾಡಿದ್ದಾರೆ. ''ಜೈ ಯಜಮಾನ, ಜೈ ದರ್ಶನ್ ಸಾಹೆಬ್ರು...ಜೈ ಹರಿಕೃಷ್ಣ, ಜೈ ಪೊನ್ನು...ಜೈ ಶೈಲಜಾ ದೊಡ್ಡಮ್ಮ, ಜೈ ಬಿ ಸುರೇಶ್ ಸಾರ್..ಜೈ ಯಜಮಾನ ಟೀಂ..ಅತಿ ದೊಡ್ಡ ಯಶಸ್ಸು ಸಿಗಲಿ'' ಎಂದು ಶುಭಕೋರಿದ್ದಾರೆ.