ತೂಗುದೀಪ ಹೆಸರನ್ನು ಜೀವಂತ ಗೊಳಿಸಿದ ಹಾಸನ ಅಭಿಮಾನಿಗಳು
Recommended Video

ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟುಹಾಕಿರುವ ನಟ. ಡಿ ಬಾಸ್ ಅಭಿಮಾನಿ ದರ್ಶನ್ ಅವರ ಪ್ರತಿ ಬೆಳವಣಿಗೆಯನ್ನು ಹಿಂಬಾಲಿಸಿ ಅದನ್ನು ಮತ್ತಷ್ಟು ಜನರಿಗೆ ತಲಿಪಿಸುವ ಕೆಲಸವನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ.
ದರ್ಶನ್ ಅವರ ತಂದೆ ಕೂಡ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಇಂದಿಗೂ ಕೂಡ ಅದೆಷ್ಟೋ ಜನರಿಗೆ ತೂಗುದೀಪ ಶ್ರೀನಿವಾಸ್ ಎಂದರೆ ಎಲ್ಲಿಲ್ಲದ ಪ್ರೀತಿ
ಖಳನಟ ಎಂದರೆ ಹೀಗೆ ಇರಬೇಕು ಎನ್ನುವ ಟ್ರೆಂಡ್ ಸೆಟ್ ಮಾಡಿದ ಕಲಾವಿದ ಅವರು.

ಇಂದು ತೂಗುದೀಪ ಶ್ರೀನಿವಾಸ್ ನಮ್ಮ ಜೊತೆ ಇಲ್ಲದೇ ಇದ್ದರೂ ಕೂಡ ಅವರು ಕೊಟ್ಟಿರುವ ಸಿನಿಮಾಗಳು ಮಾತ್ರ ಎಲ್ಲರ ಮನಸ್ಸಿನಲ್ಲಿ ಉಳಿದುಕೊಂಡು ಬಿಟ್ಟಿದೆ. ಹಾಗೇ ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಅವರನ್ನು ಸದಾ ನೆನಪಿಸುತ್ತಲೇ ಇರುತ್ತಾರೆ.
ಹಾಸನ ಜಿಲ್ಲೆಯಲ್ಲಿರುವ ವಿವೇಕ ನಗರದ ಉದ್ಬವ ಗಣಪತಿ ಮುಖ್ಯ ರಸ್ತೆಯ 1ನೇ ಕ್ರಾಸ್ ಗೆ ಅಭಿಮಾನಿಗಳು ತೂಗುದೀಪ ರಸ್ತೆ ಎಂದು ಹೆಸರನ್ನು ಇಟ್ಟಿದ್ದಾರೆ. ಸದ್ಯ ಈ ರಸ್ತೆಯ ಬೋರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ರಸ್ತೆಗೆ ತೂಗುದೀಪ ಶ್ರೀನಿವಾಸ್ ಅವರ ಹೆಸರಿಟ್ಟಿರುವುದು ಅಭಿಮಾನಿಗಳಿಗೆ ಖುಷಿ ತಂದಿದ್ದು ಈ ವಿಚಾರವನ್ನು ಸೋಷಿಯಲ್ ನೆಟ್ವರ್ಕ್ ನಲ್ಲಿ ಅಭಿಮಾನಿಗಳು ಸಂಭ್ರಮದಿಂದ ಹಂಚಿಕೊಳ್ಳುತ್ತಿದ್ದಾರೆ.


Click it and Unblock the Notifications











