twitter
    For Quick Alerts
    ALLOW NOTIFICATIONS  
    For Daily Alerts

    ಆರ್ಥಿಕ ಸಂಕಷ್ಟ: ಯುವ ಕಲಾನಿರ್ದೇಶಕ ಲೋಕೇಶ್ ಆತ್ಮಹತ್ಯೆಗೆ ಶರಣು

    |

    ಕೊರೊನಾ ಸಂಕಷ್ಟದಿಂದಾಗಿ ಸಿನಿಮಾ ಉದ್ಯಮ ಅಕ್ಷರಶಃ ತತ್ತರಿಸಿದೆ. ಸಿನಿಮಾವನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಸಿಬ್ಬಂದಿ ಆಕಾಶ ನೋಡುವಂತಾಗಿದೆ.

    ಆರಂಭದಲ್ಲಿ ಸಿನಿಮಾ ಉದ್ಯಮದ ಕೆಲ ಸಂಘಟನೆಗಳು ಕೆಲವರಿಗೆ ಸಹಾಯ ಮಾಡಿತಾದರೂ ಆ ಸಹಾಯ ಎಷ್ಟು ದಿನ ಜೀವ ಉಳಿಸೀತು. ಈಗ ಕನ್ನಡದ ಪ್ರತಿಭಾವಂತ ಯುವ ಕಲಾನಿರ್ದೇಶಕನೊಬ್ಬ ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಕೊರೊನಾ ಪಾಸಿಟಿವ್ ಬಂದ ಕನ್ನಡದ ನಟಿ ನವ್ಯಾ ಸ್ವಾಮಿ ಹೇಳುವುದೇನು? ಇಲ್ಲಿದೆ ನವ್ಯಾ ಮಾತುಕೊರೊನಾ ಪಾಸಿಟಿವ್ ಬಂದ ಕನ್ನಡದ ನಟಿ ನವ್ಯಾ ಸ್ವಾಮಿ ಹೇಳುವುದೇನು? ಇಲ್ಲಿದೆ ನವ್ಯಾ ಮಾತು

    ಬೆಲ್ ಬಾಟಂ, ಅವನೇ ಶ್ರೀಮನ್ನಾರಾಯಣ ಸೇರಿ ಇನ್ನೂ ಕೆಲವು ಸಿನಿಮಾಗಳಿಗೆ ಕಲಾ ನಿರ್ದೇಶಕರಾಗಿ ಛಾಪು ಮೂಡಿಸುವ ಹಾದಿಯಲ್ಲಿದ್ದ ಯುವ, ಪ್ರತಿಭಾವಂತ ಕಲಾ ನಿರ್ದೇಶಕ ಲೋಕೇಶ್ ತಾವಿದ್ದ ಬಾಡಿಗೆ ರೂಂ ನಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ನೆಲಮಂಗಲ ಮೂಲದ ಲೋಕೇಶ್

    ನೆಲಮಂಗಲ ಮೂಲದ ಲೋಕೇಶ್

    ನೆಲಮಂಗಲ ಮೂಲದ ಲೋಕೇಶ್‌ ಅವರಿಗೆ ಪೋಷಕರು ಇರಲಿಲ್ಲ, ಅಣ್ಣನ ನೆರಳಲ್ಲಿ ಬೆಳೆದಿದ್ದ ಲೋಕೇಶ್ ಸಿನಿಮಾದಲ್ಲಿ ಹೆಸರು ಗಳಿಸುವ ಪ್ರಯತ್ನದಲ್ಲಿದ್ದರು. ಕಲಾ ನಿರ್ದೇಶನದ ಜೊತೆಗೆ ಸಣ್ಣ-ಪುಟ್ಟ ಪಾತ್ರಗಳಲ್ಲಿಯೂ ನಟಿಸಿದ್ದರು ಎನ್ನಲಾಗಿದೆ.

    ಬೆಲ್ ಬಾಟಂ ನಿರ್ಮಾಪಕರ ಮಾತು

    ಬೆಲ್ ಬಾಟಂ ನಿರ್ಮಾಪಕರ ಮಾತು

    ಈ ಘಟನೆ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಬೆಲ್ ಬಾಟಂ ನಿರ್ಮಾಪಕ ಸಂತೋಷ್, ಲೋಕೇಶ್ ಬಹಳ ಒಳ್ಳೆಯ ಹುಡುಗ, ಪ್ರತಿಭಾವಂತ, ನಮ್ಮ ಕುಟುಂಬಕ್ಕೆ ಬಹಳ ಆಪ್ತ. ಆತ ಸಹಾಯ ಕೇಳಿದ್ದರೆ ನಾನೇ ಮಾಡುತ್ತಿದ್ದೆ' ಎಂದಿದ್ದಾರೆ.

    ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೊನಾ ವೈರಸ್ ಪಾಸಿಟಿವ್ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೊನಾ ವೈರಸ್ ಪಾಸಿಟಿವ್

    ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಲೋಕೇಶ್

    ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಲೋಕೇಶ್

    ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಲೋಕೇಶ್ ಹಗಲು ರಾತ್ರಿಗಳೆಲ್ಲದೆ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಬಹಳ ಸ್ವಾಭಿಮಾನಿ ಸಹ ಆಗಿದ್ದರು, ಹಾಗಾಗಿ ಬೇರೆಯವರ ಬಳಿ ನೆರವು ಕೇಳಲು ಹಿಂಜರಿದಿರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬೆಲ್ ಬಾಟಂ 2 ನಲ್ಲೂ ಅಭಿನಯಿಸುವವರಿದ್ದರು

    ಬೆಲ್ ಬಾಟಂ 2 ನಲ್ಲೂ ಅಭಿನಯಿಸುವವರಿದ್ದರು

    ಬೆಲ್ ಬಾಟಂ 2 ಸಿನಿಮಾಕ್ಕೂ ಲೋಕೇಶ್ ಕಲಾನಿರ್ದೇಶನ ಮಾಡುವವರಿದ್ದರು. ಸಿನಿಮಾದ ಕಲಾ ವಿಭಾಗದಲ್ಲಿಯೇ ಮತ್ತಷ್ಟು ಎತ್ತರಕ್ಕೆ ಬೆಳೆಯುವ ಹುಮ್ಮಸ್ಸಿನವರಾಗಿದ್ದರು. ಆದರೆ ಕೊರೊನಾ ಸ್ಥಿತಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

    ತಬ್ಬಿಕೊಳ್ಳಲು, ಮುತ್ತಿಕ್ಕಲು ಭಯವಾಗುತ್ತಿದೆ ಎಂದ ಹಾಟ್ ನಟಿತಬ್ಬಿಕೊಳ್ಳಲು, ಮುತ್ತಿಕ್ಕಲು ಭಯವಾಗುತ್ತಿದೆ ಎಂದ ಹಾಟ್ ನಟಿ

    English summary
    Kannada movie industries young art director Lokesh commit suicide today due to financial crisis.
    Thursday, July 2, 2020, 15:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X