Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ 'ತೂಗುದೀಪ ಶ್ರೀನಿವಾಸ್'
ನಟ ತೂಗುದೀಪ ಶ್ರೀನಿವಾಸ್, ಅಭಿಮಾನಿಗಳನ್ನ ಅಗಲಿ ಸಾಕಷ್ಟು ವರ್ಷಗಳೇ ಕಳೆದರೂ ಕೂಡ ಇಂದಿಗೂ ಅದೆಷ್ಟೋ ಜನರ ಮನಸ್ಸಿನಲ್ಲಿ ಹಚ್ಚೆಯಾಗಿ ಅಚ್ಚಳಿಯದೇ ಉಳಿದು ಬಿಟ್ಟಿದ್ದಾರೆ. ತೂಗುದೀಪ ಶ್ರೀನಿವಾಸ್ ಅವರ ಸ್ಥಾನದಲ್ಲಿ ಅಭಿಮಾನಿಗಳು ಅವರ ಮಗನಾದ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ರನ್ನ ನೋಡುತ್ತಿದ್ದಾರೆ. ನಮ್ಮಿಂದ ಮರೆಯಾಗಿರುವ ನಟನ ಚಿತ್ತಾರವನ್ನ ಮೈಮೇಲೆ ಹಚ್ಚೆ ಹಾಕಿಸಿಕೊಳ್ಳೊ ಮೂಲಕ ಇಂದಿಗೂ ತೂಗುದೀಪ ಶ್ರೀನಿವಾಸರನ್ನ ನೆನಪಿನಲ್ಲಿರಿಸಿದ್ದಾರೆ.
ಇತ್ತೀಚಿಗಷ್ಟೆ ಅಭಿಮಾನಿಯೊಬ್ಬರು ನಟ ದಿವಂಗತ ತೂಗುದೀಪ ಶ್ರೀನಿವಾಸ್ ರ ಟ್ಯಾಟೂ ವನ್ನ ಹಾಕಿಸಿಕೊಂಡಿದ್ದಾರೆ. ಆ ಪೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದಷ್ಟೇ ಅಲ್ಲದೇ ಟ್ಯಾಟೂ ಮತ್ತು ಹಾಕಿಸಿಕೊಂಡಿರೋ ಅಭಿಮಾನಿಯ ಭಾವಚಿತ್ರ ವಾಟ್ಸ್ ಆಪ್ ಗಳ ಪ್ರೊಫೈಲ್ ಪೋಟೋಗಳಾಗಿ ಬದಲಾಗಿದೆ.
ಸಾಮಾನ್ಯವಾಗಿ ಈಗ ಬಂದಿರೋ ಹಾಗೂ ಸ್ಯಾಂಡಲ್ ವುಡ್ ನಲ್ಲಿ ನಂಬರ್ ಒನ್ ಪಟ್ಟದಲ್ಲಿರೋ ಸ್ಟಾರ್ ಗಳ ಫೋಟೋ ಗಳನ್ನ ಟ್ಯಾಟೂ ಹಾಕಿಸಿಕೊಳ್ಳೊದು ಕಾಮನ್ ವಿಚಾರ, ಆದರೆ ಈ ಅಭಿಮಾನಿ ತೂಗುದೀಪ ಶ್ರೀನಿವಾಸರ ಅಪ್ಪಟ ಅಭಿಮಾನಿ, ಆದ್ದರಿಂದ ಓಲ್ಡ್ ಇಸ್ ಗೋಲ್ಡ್ ಅನ್ನೋ ರೀತಿಯಲ್ಲಿ ತೂಗುದೀಪ ಅವರ ಮುಖವನ್ನ ತಮ್ಮ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ಅಭಿಮಾನಿ ಆಗಿರೋ ಈ ವ್ಯಕ್ತಿ ಎಲ್ಲರಿಗಿಂದಲೂ ವಿಭಿನ್ನವಾಗಿ ಯೋಚನೆ ಮಾಡಬೇಕು ಅನ್ನೂ ಉದ್ದೇಶದಿಂದ ಈ ರೀತಿ ಮಾಡಿದ್ದಾರಂತೆ. ದರ್ಶನ್ ಫೋಟೋ ಹಾಕಿಸಿಕೊಳ್ಳೊದು ಮಾಮೂಲಿ ಆದರೆ ಮಗನಿಗೆ ಮತ್ತು ತಂದೆಗೆ ಇಬ್ಬರಿಗೂ ಅಭಿಮಾನಿ ಆಗೋದೇ ಸ್ಪೆಷಲ್ ಅನ್ನೋ ರೀತಿ ಬಿಂಬಿತವಾಗ್ತಿದೆ ಈ ಟ್ಯಾಟೂ ಫೋಟೋ.