ಯಾವುದಕ್ಕೂ ಭಯ ಪಡಬೇಡ.. ಮುನ್ನುಗ್ಗು..!: ಕಾಂತಾರ ಶೂಟಿಂಗ್ ಬೆನ್ನಲ್ಲೇ ರಿಷಬ್ ಶೆಟ್ಟಿಗೆ ದೈವದ ಆಶೀರ್ವಾದ..!

ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಮೂಲಕ ಮನೆ ಮಾತಾಗಿದ್ದಾರೆ. ದೈವ, ಕೋಲ, ತುಳುನಾಡ ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ಬಂದ ಕಾಂತಾರ ಸೂಪರ್ ಹಿಟ್ ಆಗಿದೆ. ಈಗ ಅದರ ಬೆನ್ನಲ್ಲೇ 'ಕಾಂತಾರ ಅಧ್ಯಾಯ 1' ಘೋಷಣೆಯಾಗಿದ್ದು, ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇವುಗಳ ನಡುವೆಯೂ ಬಿಡುವು ಮಾಡಿಕೊಂಡು ಆಗಾಗ್ಗೆ ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ.

ನಟ ರಿಷಬ್ ಶೆಟ್ಟಿ ಮಂಗಳೂರು ವಜ್ರದೇಹಿ ಮಠದ ದೈವ ಕೋಲದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದಿದ್ದಾರೆ. ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರುನಟ ರಿಷಬ್ ಶೆಟ್ಟಿಯನ್ನು ಕೋಲಕ್ಕೆ ಆಗಮಿಸುವಂತೆ ಈ ಹಿಂದೆ ಆಹ್ವಾನಿಸಿದ್ದರು. ಅವರ ಆಹ್ವಾನದ ಬೆನ್ನಲ್ಲೇ ರಿಷಬ್ ಶೆಟ್ಟಿ ವಜ್ರದೇಹಿ ಮಠದಲ್ಲಿ ನಡೆದ ನೇಮೋತ್ಸವದಲ್ಲಿ ಭಾಗಿ ಆಗಿದ್ದಾರೆ.

Kantara Actor Rishabh Shetty Participates In Mangaluru Gurupur Vajradehi Kola

ಕಾಂತಾರ ಅಧ್ಯಾಯ 1ಕ್ಕೆ ಅಡಿಗಲ್ಲು, ದೈವದ ಮೊರೆ ಹೋದ ರಿಷಬ್ ಶೆಟ್ಟಿ!

ಈ ಹಿಂದೆ ನಟ ರಿಷಬ್ ಶೆಟ್ಟಿ ವಜ್ರದೇಹಿ ಮಠದ ದೈವ ಕೋಲ ವೀಕ್ಷಿಸುವ ಆಸೆ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ರಿಷಬ್ ಶೆಟ್ಟಿಯನ್ನು ಆಹ್ವಾನ ನೀಡಿದ್ದಾರೆ. ಜನವರಿ 5 ರಂದು ನಡೆದ ಕೋಲಾದಲ್ಲಿ ಭಾಗಿಯಾಗಿ ದೈವದ ಅನುಗ್ರಹ ಪಡೆದುಕೊಂಡ ಅವರಿಗೆ "ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡಿ, ನಾನಿದ್ದೇನೆ" ಎಂದು ದೈವ ಅಭಯ ನೀಡಿದೆ.

"ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡ. ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ" ಎಂದು ಸನ್ನೆ ಮಾಡಿ ದೈವ ಆಶೀರ್ವದಿಸಿದೆ. ದೈವಾರಾಧನೆಯ ಕಟ್ಟುಪಾಡು ಅಧ್ಯಾಯನ ಮಾಡಿಕೊಂಡು, ದೈವದ ನೆಲೆಯನ್ನ ಅರಿತು ಸಿನಿಮಾದ ಮೂಲಕ ಜನರ ಮುಂದಿಡಬೇಕು ಎಂದು ನಟ ರಿಷಬ್ ಶೆಟ್ಟಿ ತೋರಿಸಬೇಕು ಎಂದು ವಜ್ರದೇಹಿ ಮಠದ ದೈವ ಕೋಲಕ್ಕೆ ಬಂದಿದ್ದರು.

Kantara Actor Rishabh Shetty Participates In Mangaluru Gurupur Vajradehi Kola

ನಟ ರಿಷಬ್ ಶೆಟ್ಟಿ ತಲೆ ಸವರಿ ಆಶೀರ್ವಾದಿಸಿದ ದೈವ

ಕೋಲದಲ್ಲಿ ನಟ ರಿಷಭ್ ಶೆಟ್ಟಿಗೆ ದೈವ ಅಭಯ ನೀಡಿದೆ. ಗುರುಪುರ ವಜ್ರದೇಹಿ ಮಠದಲ್ಲಿ ನಡೆದ ಜಾತ್ರೆಯ ಮೈಸಂದಾಯ ಕೋಲದಲ್ಲಿ ದೈವ ರಿಷಬ್ ಶೆಟ್ಟಿ ತಲೆ ಸವರಿ ಆಶೀರ್ವಾದಿಸಿದೆ. ಇದು ನಟನಿಗೆ ಮತ್ತಷ್ಟು ಹುರುಪು ನೀಡಿದೆ. ಈಗಾಗಲೇ ಕೋಲಾ, ದೈವಗಳ ಹಿನ್ನಲೆಯಲ್ಲಿ ಸಿನಿಮಾ ಮಾಡಿರುವ ಅವರಿಗೆ ದೈವದ ಆಶೀರ್ವಾದ ಸಿಕ್ಕಿರುವುದು ಅದೃಷ್ಟವೇ ಸರಿ.

ಕಾಂತಾರ ಮತ್ತು ಕಾಂತಾರ ಚಾಪ್ಟರ್ 1

ಅಪ್ಪಟ ಕನ್ನಡದ ಸಿನಿಮಾ 'ಕಾಂತಾರ' ಬಿಡುಗಡೆಯಾದ ಮೇಲೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ಸದ್ದು ಮಾಡಿತ್ತು. ನಟ ರಿಷಬ್ ಶೆಟ್ಟಿ ನಟನೆ-ನಿರ್ದೇಶನಕ್ಕೆ ಫುಲ್ ಮಾರ್ಕ್ಸ್ ಸಿಕ್ಕಿತ್ತು. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ 400 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಬಳಿಕ ಈ ಸಿನಿಮಾದ ಸೀಕ್ವೆಲ್ ನಿರೀಕ್ಷಿಸುತ್ತಿದ್ದವರಿಗೆ ರಿಷಬ್ ಶೆಟ್ಟಿ ಪ್ರಿಕ್ವೇಲ್ ಘೋಷಿಸಿ ಶಾಕ್ ನೀಡಿದ್ದರು.

ಈ ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1' ಘೋಷಿಸಿದ್ದಾರೆ. ಇದಕ್ಕೂ ಅವರದ್ದೇ ನಿರ್ದೇಶನ ಇರಲಿದೆ. 'ಕಾಂತಾರ'ಗೂ ಮುನ್ನ ಏನಾಗಿತ್ತು ಅನ್ನೋದನ್ನ 'ಕಾಂತಾರ ಚಾಪ್ಟರ್ 1' ರಲ್ಲಿ ಹೇಳಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾಕ್ಕೂ ಬಂಡವಾಳ ಹಾಕುತ್ತಿದೆ. ಕಳೆದ ನವೆಂಬರ್ 27 ರಂದು ಸಿನಿಮಾಕ್ಕೆ ಆನೆಗುಡ್ಡೆ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ. 'ಕಾಂತಾರ' ಅಧ್ಯಾಯ 1 ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಇಂಗ್ಲಿಷ್ ಸೇರಿದಂತೆ ಏಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Rishabh Shetty attends Mangaluru gurupur vajradehi kola.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X