Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೇಘನಾ ರಾಜ್ ನಂತರ ಚಿರು ಸರ್ಜಾಗೆ ಕಾಂತ ಕನ್ನಲ್ಲಿ ಆಕ್ಷನ್ ಕಟ್
ನಟಿ ಮೇಘನಾ ರಾಜ್ ಇತ್ತೀಚಿಗಷ್ಟೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದರು. 'ಇರುವುದೆಲ್ಲವ ಬಿಟ್ಟು' ಸಿನಿಮಾ ಅವರಿಗೆ ಈ ಪ್ರಶಸ್ತಿ ತಂದು ಕೊಟ್ಟಿತ್ತು. ಇದೀಗ ಈ ಸಿನಿಮಾದ ನಿರ್ದೇಶಕ ಕಾಂತ ಕನ್ನಲ್ಲಿ ಹೊಸ ಸಿನಿಮಾ ಪ್ರಾರಂಭ ಮಾಡಿದ್ದಾರೆ.
ತಮ್ಮ ಎರಡನೇ ಸಿನಿಮಾವನ್ನು ಮೇಘನಾ ರಾಜ್ ರೊಂದಿಗೆ ಮಾಡಿದ್ದ ಕಾಂತ ಕನ್ನಲ್ಲಿ ಈಗ ಮೂರನೇ ಸಿನಿಮಾವನ್ನು ಚಿರಂಜೀವಿ ಸರ್ಜಾರೊಂದಿಗೆ ಶುರು ಮಾಡಿದ್ದಾರೆ. ಈ ಸಿನಿಮಾದ ವಿವರವನ್ನು 'ಫಿಲ್ಮಿಬೀಟ್ ಕನ್ನಡ'ದೊಂದಿಗೆ ಕಾಂತ ಕನ್ನಲ್ಲಿ ಹಂಚಿಕೊಂಡಿದ್ದಾರೆ.
ರಾಜ್ಯ ಪ್ರಶಸ್ತಿ ಗೆದ್ದ ಮೇಘನಾ ರಾಜ್ ಗೆ ಪತಿ ಚಿರು ಸರ್ಜಾ ಹೇಳಿದ್ದೇನು?
ಚಿರಂಜೀವಿ ಸರ್ಜಾ ಸಿನಿಮಾದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಕಥೆ ತುಂಬ ಇಷ್ಟ ಆಗಿದ್ದು, ಪಾತ್ರಕ್ಕಾಗಿ ಚಿರು ವರ್ಕೌಟ್ ಮಾಡಲಿದ್ದಾರಂತೆ. ಲವ್ ಹಾಗೂ ಆಕ್ಷನ್ ಹೊಂದಿರುವ ಕಮರ್ಷಿಯಲ್ ಕಥೆಯನ್ನು ಬೇರೆ ಶೈಲಿಯಲ್ಲಿ ಹೊಸದಾಗಿ ತೋರಿಸಬೇಕು ಎನ್ನುವುದು ನಿರ್ದೇಶಕರ ಆಸೆಯಾಗಿದೆ.
ಸದ್ಯ ಕೊನೆಯ ಹಂತದ ಕಥೆ, ಚಿತ್ರಕಥೆ ಕೆಲಸಗಳು ನಡೆಯುತ್ತಿದ್ದು, ಏಪ್ರಿಲ್ ನಂತರ ಈ ಸಿನಿಮಾದ ಚಿತ್ರೀಕರಣ ಶುರು ಆಗಲಿದೆಯಂತೆ. ಸಿನಿಮಾದ ಟೈಟಲ್, ಹೀರೋಯಿನ್ ಹಾಗೂ ತಾಂತ್ರಿಕ ವರ್ಗವನ್ನು ಮುಂದಿನ ದಿನದಲ್ಲಿ ತಿಳಿಸಲಾಗುವುದು ಎಂದು ಕಾಂತ ಕನ್ನಲ್ಲಿ ಹೇಳಿದ್ದಾರೆ.
ಪತಿಯ ಸಿನಿಮಾಗೆ ಧ್ವನಿಯಾದ ನಟಿ ಮೇಘನಾ ರಾಜ್
ತಿರುಪತಿ ಪಿಚ್ಚರ್ ಬ್ಯಾನರ್ ಚಂದ್ರಕಲಾ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗುರುಪ್ರಸಾದ್ ಸಹ ನಿರ್ಮಾಪಕರಾಗಿದ್ದಾರೆ.