ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಚುನಾವಣೆ ಫಲಿತಾಂಶ ಪ್ರಕಟ
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ನಟ, ನಿರ್ದೇಶಕ, ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಇಂದು (ಆಗಸ್ಟ್ 12) ಬೆಳಗ್ಗೆ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಚುನಾವಣೆ ಪ್ರಕ್ರಿಯೆಗೆ ಚಾಲನೆ ಕೊಡಲಾಯಿತು.
ಮಧ್ಯಾಹ್ನದವರೆಗೂ ನಡೆದ ಚುನಾವಣೆಯಲ್ಲಿ ಸ್ಯಾಂಡಲ್ ವುಡ್ ನ ನಿರ್ದೇಶಕರು ಮತದಾನ ಮಾಡಿದರು. ಇದೀಗ ಚುನಾವಣೆಯ ಫಲಿತಾಂಶ ಹೊರಬಂದಿದ್ದು, ಅಧ್ಯಕ್ಷ ಸ್ಥಾನದಲ್ಲಿ ವಿ.ನಾಗೇಂದ್ರ ಪ್ರಸಾದ್ ಮುಂದುವರೆಯಲಿದ್ದಾರೆ.

ಉಪಾಧ್ಯಕ್ಷರ ಸ್ಥಾನಕ್ಕೆ ನಿರ್ದೇಶಕಿ ರೂಪಾ ಅಯ್ಯರ್ ಹಾಗೂ ಸಾಧು ಕೋಕಿಲ ಆಯ್ಕೆಯಾಗಿದ್ದಾರೆ. ನಿರ್ದೇಶಕರಾದ ಶರಣ್ ಕಬ್ಬೂರ್ ಹಾಗೂ ನಾಗೇಂದ್ರ ಮಾಗಡಿ ಕಾರ್ಯದರ್ಶಿಗಳಾದರೆ, ಟಿ.ಎನ್.ನಾಗೇಶ್ ಖಜಾಂಚಿಯಾಗಿದ್ದಾರೆ.
More from Filmibeat
English summary
Karnataka Director's Association election results are out. Director V.Nagendra Prasad has been elected as President for second time.
v nagendra prasad roopa iyer director sandalwood ವಿ ನಾಗೇಂದ್ರ ಪ್ರಸಾದ್ ರೂಪ ಅಯ್ಯರ್ ನಿರ್ದೇಶಕ ಸ್ಯಾಂಡಲ್ ವುಡ್


Click it and Unblock the Notifications











