Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫಿಲಂ ಚೇಂಬರ್ಗೆ ಮತದಾನ ಮುಕ್ತಾಯ, ಫಲಿತಾಂಶಕ್ಕೆ ಕ್ಷಣಗಣನೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆ ಮುಗಿದಿದ್ದು, ಮತ ಎಣಿಕೆ ಪ್ರಾರಂಭವಾಗಿದೆ. ಕೆಲವೇ ನಿಮಿಷಗಳಲ್ಲಿ ಫಲಿತಾಂಶ ಘೋಷಣೆ ಸಹ ಆಗಲಿದೆ.
ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಮತದಾನ ಪ್ರಕ್ರಿಯೆ ನಡೆದಿದ್ದು, ಖ್ಯಾತನಾಮ ನಿರ್ಮಾಪಕರು, ವಿತರಕರು, ನಟ-ನಟಿಯರು ಆಗಮಿಸಿ ಮತದಾನ ಮಾಡಿದ್ದಾರೆ.
ನಿರ್ಮಾಪಕರ ವಲಯದಿಂದ 910 ವೋಟ್ ಆಗಿವೆ, ವಿತರಕರಿಂದ 200ಆಸುಪಾಸು ವೋಟ್ ಆಗಿವೆ, ಪೇಪರ್ ಹರಿಯದೇ ಮತ ಏಣಿಕೆ ಮಾಡ್ತೀವಿ, 8 ಆಫೀಸರ್ ಈ ಕೆಲಸ ಮಾಡ್ತಾರೆ, ಯಾರಿಗೆ ಎಷ್ಟು ವೋಟ್ ಬರುತ್ತೆ ಅಂತ ಗ್ರಾಫ್ ಮೂಲಕ ಗೊತ್ತಾಗುತ್ತೆ, ಒಳಗೆ ಸ್ಪರ್ಧಿಸಿರೋ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶವಿರುತ್ತೆ, 10:30ಕ್ಕೆ ಫಲಿತಾಂಶ ಪ್ರಕಟವಾಗುತ್ತೆ ಎಂದು ಚುನಾವಣಾಧಿಕಾರಿ ಥಾಮಸ್ ಹೇಳಿದ್ದಾರೆ.
7 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿದೆ, ಮೂರು ವಲಯಗಳ ಮತಎಣಿಕೆ ನಡೆಸಲಾಗುತ್ತಿದೆ. ಮತ ಎಣಿಕೆ ನಂತರ ಅಧ್ಯಕ್ಷರ ಆಯ್ಕೆಯಾಗುತ್ತದೆ. ಫಿಲಂ ಚೇಂಬರ್ ಚುನಾವಣೆಯ ಇತಿಹಾಸದಲ್ಲೇ ದಾಖಲೆ ಮತದಾನ ಈ ಬಾರಿ ಆಗಿದ್ದು, ಒಟ್ಟು 86% ರಷ್ಟು ಮತದಾನವಾಗಿದೆ.
ರಾಘವೇಂದ್ರ ರಾಜ್ ಕುಮಾರ್, ವಿಜಯ್ ರಾಘವೇಂದ್ರ, ನಾದಬ್ರಹ್ಮ ಹಂಸಲೇಖ, ನಾಗೇಂದ್ರ ಪ್ರಸಾದ್, ಇಂದ್ರಜಿತ್ ಲಂಕೇಶ್, ಸೃಜನ್ ಲೋಕೇಶ್, ಹಿರಿಯ ನಟಿ ಲೀಲಾವತಿ ಸೇರಿದಂತೆ ಅನೇಕ ನಟರು, ನಿರ್ದೇಶಕರು, ನಿರ್ಮಾಪಕರು ಆಗಮಿಸಿ ಮತದಾನ ಮಾಡಿದ್ದಾರೆ. ''ಯಾರಿಗೆ ಅದೃಷ್ಟ, ಅರ್ಹತೆ ಇದೆಯೋ ಅವರು ಗೆಲ್ಲುತ್ತಾರೆ'' ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.
ಚುನಾವಣೆಗೆ ಸ್ಪರ್ಧಿಸಿರುವ ಬಾ.ಮಾ.ಹರೀಶ್ ಮಾತನಾಡಿ, ''ಹೊಸ ಬದಲಾವಣೆಯ ಸಂಕೇತ ಇದು, ವಾತಾವರಣ ನಮ್ಮ ಪರವಾಗಿದೆ, ಜಿದ್ದಾಜಿದ್ದಿ ಏನಿಲ್ಲ, ಫಲಿತಾಂಶ ಬರಲಿ, ನಿರ್ಮಾಪಕರ ವಲಯದಲ್ಲಿ ಸ್ಪರ್ಧೆ ಸಹಜ, ಕಂಪಿಟೇಷನ್ ಇರಲೇಬೇಕು, ವೋಟಿಂಗ್ ನಲ್ಲೂ ಈ ಬಾರಿ ತುಂಬಾ ಸ್ಪೆಷಲ್, ರಾಕ್ ಲೈನ್ ವೆಂಕಟೇಶ್, ಜಯಮಾಲಾ ಸೇರಿದಂತೆ ಎಲ್ಲರ ಬೆಂಬಲ ನನಗಿದೆ, ಉತ್ಸಾಹಿ ತಂಡವೊಂದು ನನ್ನ ಶಕ್ತಿ. ಈ ಬಾರಿ ಗೆಲುವು ನಮ್ಮದೇ'' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.