Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಚಂಬಲ್' ತಡೆಗೆ ಹೈಕೋರ್ಟ್ ನಿರಾಕರಣೆ : ನಾಳೆ ಸಿನಿಮಾ ಬಿಡುಗಡೆ
ಐ ಪಿ ಎಸ್ ಅಧಿಕಾರಿ ಡಿ ಕೆ ರವಿ ಅವರಿಗೆ ಸಂಬಂಧಿಸಿದ ಕಥೆ ಹೊಂದಿದೆ ಎನ್ನುವ ಕಾರಣಕ್ಕೆ 'ಚಂಬಲ್' ಸಿನಿಮಾದ ಬಿಡುಗಡೆಗೆ ವಿಘ್ನ ಎದುರಾಗಿತ್ತು. ಚಿತ್ರ ರಿಲೀಸ್ ಆಗಬಾರದು ಎಂದು ಡಿಕೆ ರವಿ ತಾಯಿ ಹೈಕೋರ್ಟ್ ಮೇರೆ ಹೋಗಿದ್ದರು. ಆದರೆ, 'ಚಂಬಲ್' ಬಿಡುಗಡೆಯ ತಡೆಗೆ ಹೈಕೋರ್ಟ್ ನಿರಾಕರಿಸಿದೆ.
'ಚಂಬಲ್' ಇದು ಡಿಕೆ ರವಿ ಲೈಫ್ ಸ್ಟೋರಿ ಚಿತ್ರವೇ?
ನಾಳೆ ಸಿನಿಮಾ ಬಿಡುಗಡೆ ಮಾಡಲು ಕೋರ್ಟ್ ಅವಕಾಶ ನೀಡಿದೆ. ಶನಿವಾರದವರೆಗೆ ಸಿನಿಮಾ ಪ್ರದರ್ಶನ ಮಾಡಬಹುದಾಗಿದೆ. ಆದರೆ, ಸೋಮವಾರ ಚಿತ್ರವನ್ನು ವೀಕ್ಷಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದಂತೆ. ಇತ್ತ ಸಿನಿಮಾ ಬಿಡುಗಡೆಗೆ ತಡೆ ನೀಡಿಲ್ಲ ಎಂದು ಡಿ ಕೆ ರವಿ ತಾಯಿ ಇಂದು ಕೋರ್ಟ್ ಮುಂದೆಯೇ ಬೇಸರ ವ್ಯಕ್ತ ಪಡಿಸಿದ್ದಾರೆ.
ಇತ್ತ ಫೇಸ್ ಬುಕ್ ಲೈವ್ ಬಂದಿದ್ದ ನಟ ನೀನಾಸಂ ಸತೀಶ್ ಸಿನಿಮಾಗೆ ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ಆದರೆ, ನಾವು ಈ ಚಿತ್ರವನ್ನು ಒಳ್ಳೆಯ ಉದ್ದೇಶದಿಂದ ಮಾಡಿದ್ದೇವೆ. ಡಿ ಕೆ ರವಿ ಅವರಿಗೆ ಸಂಬಂಧಪಟ್ಟ ಕೆಲವು ದೃಶ್ಯಗಳು ಚಿತ್ರದಲ್ಲಿವೆ. ಆ ರೀತಿಯ ಒಬ್ಬ ಅಧಿಕಾರಿ ಅನೇಕರಿಗೆ ಸ್ಪೂರ್ತಿ ಆಗಲಿ ಅಂತ ಈ ಚಿತ್ರ ಮಾಡಿದ್ದೇವೆ. ಎಲ್ಲರೂ ಸಿನಿಮಾ ನೋಡಿ. ಬೆಂಬಲಿಸಿ ಎಂದಿದ್ದಾರೆ ಸತೀಶ್.
ನಾಳೆ 'ಚಂಬಲ್' ಸಿನಿಮಾ ಗಾಂಧಿನಗರದ ಮೂವಿಲ್ಯಾಂಡ್ ಚಿತ್ರಮಂದಿರ ಸೇರಿದಂತೆ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಜೇಕಬ್ ವರ್ಗೀಸ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಸತೀಶ್ ನೀನಾಸಂ, ಪವನ್ ಕುಮಾರ್, ಕಿಶೋರ್ ಹಾಗೂ ಸೋನುಗೌಡ ತಾರಬಳಗದಲ್ಲಿ ಇದ್ದಾರೆ.