Just In
Don't Miss!
- Sports
ಐಪಿಎಲ್ 2021: ಸಿಎಸ್ಕೆ ಉಳಿಸಿಕೊಂಡಿರುವ, ಕೈ ಬಿಟ್ಟಿರುವ ಆಟಗಾರರ ಪಟ್ಟಿ
- Automobiles
ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್
- News
ಕೃಷಿ ಕಾಯ್ದೆಗಳ ಕಥೆ: ರೈತರಿಗೆ ಸಮಾಧಾನ ನೀಡದ "ಸಂಧಾನ" ಸಭೆಗಳ ಸಾಲು!
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 20ರ ಚಿನ್ನ, ಬೆಳ್ಳಿ ದರ
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಲೈವ್ ಶೋ'ನಲ್ಲಿ 'ಪದ್ಮಾವತಿ' ವಿರುದ್ಧ ಖಡ್ಗ ಹೊರ ತೆಗೆದ ರಜಪೂತ
'ಪದ್ಮಾವತಿ' ಚಿತ್ರದ ವಿರುದ್ಧ ದೇಶಾದ್ಯಂತ ರಜಪೂತ ಕರಣಿ ಸೇನೆ ಸದಸ್ಯರು ಹೋರಾಟ, ಪ್ರತಿಭಟನೆ ನಡೆಸುತ್ತಿದ್ದಾರೆ. ದಿನದಿಂದ ದಿನಕ್ಕೆ ರಜಪೂತರ ಆಕ್ರೋಶ ವಿಕೋಪಕ್ಕೆ ಹೋಗುತ್ತಿದ್ದು, ಭಯ ಹುಟ್ಟಿಸುವಂತಹ ಹೇಳಿಕೆಗಳು ನೀಡುತ್ತಿದ್ದಾರೆ.
ಈ ಮಧ್ಯೆ ಗುಜರಾತಿನ ರಜಪೂತ ಕರಣಿ ಸೇನೆ ಸದಸ್ಯರೊಬ್ಬ ಟಿವಿಯ ಲೈವ್ ಕಾರ್ಯಕ್ರಮದಲ್ಲಿ ತಮ್ಮ ಖಡ್ಗ ಹೊರ ತೆಗೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
'ಪದ್ಮಾವತಿ' ವಿವಾದಕ್ಕೆ ಟ್ವಿಸ್ಟ್: ರಿಲೀಸ್ ದಿನಾಂಕ ಮುಂದಕ್ಕೆ ಹೋಯ್ತು.!
'ಪದ್ಮಾವತಿ' ಚಿತ್ರವನ್ನ ವಿರೋಧಿಸುತ್ತಿರುವುದೇಕೆ? ಎಂಬ ವಿಷ್ಯಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿಯಲ್ಲಿ ಚರ್ಚೆ ನಡೆಸಲಾಗುತ್ತಿತ್ತು. ಕಾರ್ಯಕ್ರಮದ ಮಧ್ಯೆ ರಜಪೂತ ವ್ಯಕ್ತಿ ತಾನು ತಂದಿದ್ದ ಖಡ್ಗ ಹೊರ ತೆಗೆದು ದೀಪಿಕಾ ಪಡುಕೋಣೆಯ ವಿರುದ್ಧ ಕಿಡಿ ಕಾರಿದರು. ಈ ನಡವಳಿಕೆಯನ್ನ ಪ್ರಶ್ನಿಸಿದ ನಿರೂಪಕ ನಂತರ ಖಡ್ಗವನ್ನ ಕೆಳಗೆ ಇಡಲು ಸೂಚಿಸಿ ಕಾರ್ಯಕ್ರಮ ಮುನ್ನಡೆಸಿದರು.
ದೀಪಿಕಾ ಪಡುಕೋಣೆ ತಲೆ ಕತ್ತರಿಸಿದ್ರೆ 5 ಕೋಟಿ ಬಹುಮಾನ
ಒಂದು ಕಡೆ 'ಪದ್ಮಾವತಿ' ಸಿನಿಮಾ ಅಭಿನಯಸಿದ್ದು ಹೆಮ್ಮೆ ಎಂದು ದೀಪಿಕಾ ಹೇಳುತ್ತಿದ್ದರೇ, ಮತ್ತೊಂದೆಡೆ ರಜಪೂತರು ದೀಪಿಕಾ ತಲೆಗೆ 5 ಕೋಟಿ ಬೆಲೆ ಕಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನ ಅರಿತ ಪೊಲೀಸರು ದೀಪಿಕಾ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಭದ್ರತೆ ನೀಡಿದ್ದಾರೆ.