Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರರಂಗದಿಂದ ಟ್ವಿಟ್ಟರ್ ನಲ್ಲಿ ಕಾಶಿನಾಥ್ ಗೆ ಅಶ್ರುತರ್ಪಣ
ಕನ್ನಡ ಸಿನಿಮಾರಂಗದ ಅಜಾತಶತ್ರು, ಸ್ವಂತಿಕೆಯಿಂದ ಮೆರೆದ ನಿರ್ದೇಶಕ, ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ ಮಾಡಿದ ನಟ ಕಾಶಿನಾಥ್ ಅವರ ಅಗಲಿಕೆ ಕನ್ನಡ ಸಿನಿಮಾರಂಗಕ್ಕೆ ತುಂಬಲಾರದಂತ ನಷ್ಟವನ್ನ ಉಂಟು ಮಾಡಿದೆ.
ಸಾಕಷ್ಟು ಕಲಾವಿದರನ್ನ ಚಿತ್ರರಂಗಕ್ಕೆ ಪರಿಚಯಿಸುವ ಮೂಲಕ ಇಂದಿಗೂ ಕೂಡ ವಿಭಿನ್ನ ಸಿನಿಮಾಗಳನ್ನ ಪ್ರೇಕ್ಷಕರಿಗೆ ನೋಡಲು ಸಿಗುವಂತೆ ಮಾಡಿದ ಕೀರ್ತಿ ಕಾಶಿನಾಥ್ ಅವರಿಗೆ ಸಲ್ಲುತ್ತದೆ.
ಅಪಾರ ಅಭಿಮಾನಿ ಬಳಗವನ್ನ ಬಿಟ್ಟು ಹೋಗಿರುವ ಕಾಶಿನಾಥ್ ಇನ್ನು ಮುಂದೆ ನೆನಪು ಮಾತ್ರ. ಕಾಶಿನಾಥ್ ಅವರ ನಿಧನಕ್ಕೆ ಇಡೀ ಕನ್ನಡ ಸಿನಿಮಾರಂಗ ಕಣ್ಣಿರಿಟ್ಟಿದ್ದು ಟ್ವಿಟ್ಟರ್ ಮೂಲಕ ಅಗಲಿದ ನಟನಿಗೆ ಶ್ರದ್ಧಾಂಜಲಿ ಅರ್ಪಿಸಿದೆ.
ಆಘಾತವಾಗಿದೆ ಎಂದ ಪ್ರಿಯಾಂಕ ಉಪೇಂದ್ರ
ಕಾಶಿನಾಥ್ ಅವರ ನಿಧನ ವಾರ್ತೆ ತಿಳಿದ ತಕ್ಷಣ "ನಿಜಕ್ಕೂ ಈ ವಿಚಾರ ಆಘಾತಕಾರಿ ಆಗಿದೆ ಮತ್ತು ತುಂಬಾ ದುಃಖ ತರುತ್ತಿದೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಕಾಶಿನಾಥ್ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ ಪ್ರಿಯಾಂಕ ಉಪೇಂದ್ರ
ಕಣ್ಮರೆಯಾದ ಕಲಾಯೋಗಿ ಕಾಶಿನಾಥ್ ಅಪರೂಪದ ಚಿತ್ರಸಂಪುಟ
ಪ್ರತಿಭಾವಂತ ನಟನಿಗೆ ನಮನ ಎಂದ ಪುನೀತ್ ರಾಜ್ ಕುಮಾರ್
ಕಾಶಿನಾಥ್ ಅವರ ಬಗ್ಗೆ ಟ್ವೀಟ್ ಮಾಡಿರುವ ನಟ ಪುನೀತ್ ರಾಜ್ ಕುಮಾರ್ 'ವಿಭಿನ್ನ ಹಾಗೂ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ ಇನ್ನು ನೆನಪು ಮಾತ್ರ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ' ಎಂದಿದ್ದಾರೆ.
ಕಲಾವಿದನಿಗೆ ಸಾವು ದೇಹಕ್ಕೆ ಮಾತ್ರ ಎಂದ ಜಗ್ಗೇಶ್
ಅಪಾರ ಅಭಿಮಾನಿಗಳ ಸಮೂಹವನ್ನ ಅಗಲಿದ ಕಾಶಿನಾಥ್ ಅವರ ಬಗ್ಗೆ ನಟ ಜಗ್ಗೇಶ್ ಅರ್ಥಪೂರ್ಣವಾಗಿ ಟ್ವೀಟ್ ಮಾಡಿದ್ದಾರೆ. ''ಕಲಾವಿದನಿಗೆ ಸಾವು ದೇಹಕ್ಕೆ ಮಾತ್ರ. ಮಿಕ್ಕಂತೆ ಅವರ ಉಳಿವು ಅಭಿಮಾನಿಗಳ ಹೃದಯದಲ್ಲಿ ಅಜರಾಮರ. ಕಲಾವಿದ ಸತ್ತರೂ ಅವನ ಕಾಯಕ ಜೀವಂತ. ನಿಮ್ಮ ಕಾಯಕ ಬಿಟ್ಟು ಹೋಗಿದ್ದೀರಿ. ನಿಮ್ಮನ್ನ ಕಳೆದುಕೊಂಡ ನೋವು ಭರಿಸುವ ಶಕ್ತಿ ನಿಮ್ಮ ಕುಟುಂಬಕ್ಕೆ ರಾಯರು ನೀಡಲಿ..we all love u sir" ಎಂದಿದ್ದಾರೆ.
ಹಾಸ್ಯಕ್ಕೆ ಹೊಸ ರಂಗು ನೀಡಿದ ಗುರುವಿಗೆ ನಮನ
"ಹಾಸ್ಯಕ್ಕೆ ಹೊಸ ರಂಗು ತಂದ ಕಾಶಿನಾಥ್ ನಿರ್ದೇಶಕ ಗುರುಗಳ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ನಿರ್ದೇಶಕ ಸಿಂಪಲ್ ಸುನಿ ಟ್ವಿಟ್ ಮಾಡಿದ್ದಾರೆ.
ತಲೆಮಾರುಗಳಿಗೆ ನಗಲು ಕಲಿಸಿದ ಚೈತನ್ಯ
ನಟಿ ಮಾಳವಿಕ ಅವಿನಾಶ್ "A trendsetter of sorts, he created History with his Anubhava, Guru to several. ಹಲವು ತಲೆಮಾರುಗಳಿಗೆ ನಗಲು ಕಲಿಸಿದ ಚೈತನ್ಯ! Om Shanti" ಎಂದು ಟ್ವೀಟ್ ಮಾಡಿದ್ದಾರೆ.