Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಶೀನಾಥ್ ಅವರ ಕೊನೆಯ ಸಿನಿಮಾ ನಾಳೆ ಬಿಡುಗಡೆ
Recommended Video
ನಟ ಕಾಶೀನಾಥ್ ದೈಹಿಕವಾಗಿ ಎಲ್ಲರನ್ನು ಬಿಟ್ಟು ಅಗಲಿದ್ದಾರೆ. ಆದರೆ ಅವರ ಸಿನಿಮಾಗಳು ಎಂದಿಗೂ ಅಭಿಮಾನಿಗಳ ಮನಸಿನಲ್ಲಿ ಉಳಿದಿರುತ್ತದೆ. ಕನ್ನಡ ಚಿತ್ರರಂಗ ಎಂದು ಮರೆಯದ ಅಪೂರ್ವ ವ್ಯಕ್ತಿ ಅವರು. ಇಂತಹ ಮಹಾನ್ ನಟನ ಕೊನೆಯ ಸಿನಿಮಾ ನಾಳೆ ರಿಲೀಸ್ ಆಗುತ್ತಿರುವುದು ವಿಶೇಷ.
'ಓಳ್ ಮುನಿಸ್ವಾಮಿ' ಕಾಶೀನಾಥ್ ಅವರ 50ನೇ ಸಿನಿಮಾವಾಗಿದ್ದು, ಅದೇ ಅವರ ಕೊನೆಯ ಸಿನಿಮಾ ಆಗುವ ಹಾಗೆ ಆಯ್ತು. ಈ ಸಿನಿಮಾ ಬಿಡುಗಡೆಗೆ ಮೊದಲೇ ಕಾಶೀನಾಥ್ ನಿಧನ ಹೊಂದಿದರು.ಇನ್ನು 'ಓಳ್ ಮುನಿಸ್ವಾಮಿ' ಚಿತ್ರದಲ್ಲಿ 'ಮುನಿಸ್ವಾಮಿ'ಯಾಗಿ ಕಾಶೀನಾಥ್ ನಟಿಸಿದ್ದಾರೆ. ಬೇಜಾನ್ ಸುಳ್ಳು ಹೇಳುವ ಪಾತ್ರ ಇದಾಗಿದೆ. ಈ ಹಿಂದೆ ಈ ರೀತಿಯ ಪಾತ್ರವನ್ನು ಕಾಶೀನಾಥ್ ಮಾಡಿರಲಿಲ್ಲ.
ಕಾಶೀನಾಥ್ 50 ನಾಟೌಟ್: ಕನ್ನಡ ಸಿನಿ ಪ್ರೇಮಿಗಳಿಂದ ಸಲ್ಯೂಟ್
'ಓಳ್ ಮುನಿಸ್ವಾಮಿ' ಸಿನಿಮಾವನ್ನ ನಿರ್ದೇಶಕ ಆನಂದ್ ಪ್ರಿಯ ನಿರ್ದೇಶನ ಮಾಡಿದ್ದಾರೆ. 'ಜಲ್ಸಾ' ಸಿನಿಮಾದ ನಾಯಕ ನಿರಂಜನ್ ನಟನೆಯ ಎರಡನೇ ಸಿನಿಮಾ ಇದಾಗಿದ್ದು, ನಾಯಕಿಯಾಗಿ ಅಖಿಲಾ ಎನ್ನುವ ಹೊಸ ಹುಡುಗಿ ಕಾಣಿಸಿಕೊಂಡಿದ್ದಾರೆ. ಸಮೂಹ ಬ್ಯಾನರ್ ನ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.
ಇದೊಂದು ಸಮಾಜದ ವಿಡಂಬನಾತ್ಮಕ, ಭಾವನೆಗಳ ತೊಳಲಾಟದ ಜೊತೆಗೆ ದೇವರು, ನಂಬಿಕೆ, ಪ್ರೀತಿ ಬದುಕಿನ ಕಥೆಯನ್ನ ಹೊಂದಿದೆಯಂತ್ತೆ. ಸಮಾಜ ಈಗ ಬದುಕನ್ನು ನೋಡುವ ದೃಷ್ಠಿಕೋನ ಬದಲಾಗಿದೆ ಎನ್ನುವ ನಿರ್ದೇಶಕರು ಅದೇ ವಿಷಯವನ್ನ ಹೈಲೈಟ್ ಮಾಡಿ ಸಿನಿಮಾದಲ್ಲಿ ತೋರಿಸಿದ್ದಾರಂತೆ. ಅಂದಹಾಗೆ, 'ಓಳ್ ಮುನಿಸ್ವಾಮಿ' ಸಿನಿಮಾ ಇದೇ ಶುಕ್ರವಾರ ಅಂದರೆ ನಾಳೆ ರಾಜ್ಯಾದಂತ್ಯ ಬಿಡುಗಡೆಯಾಗಲಿದೆ.