Don't Miss!
- News Rain Alert: ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ: ಈ ಜಿಲ್ಲೆಗಳಲ್ಲಿ ಭಾರಿ ಬಿಸಿಲು
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಶೀನಾಥ್ ಅವರ ಕೊನೆಯ ಸಿನಿಮಾ ನಾಳೆ ಬಿಡುಗಡೆ
Recommended Video
ನಟ ಕಾಶೀನಾಥ್ ದೈಹಿಕವಾಗಿ ಎಲ್ಲರನ್ನು ಬಿಟ್ಟು ಅಗಲಿದ್ದಾರೆ. ಆದರೆ ಅವರ ಸಿನಿಮಾಗಳು ಎಂದಿಗೂ ಅಭಿಮಾನಿಗಳ ಮನಸಿನಲ್ಲಿ ಉಳಿದಿರುತ್ತದೆ. ಕನ್ನಡ ಚಿತ್ರರಂಗ ಎಂದು ಮರೆಯದ ಅಪೂರ್ವ ವ್ಯಕ್ತಿ ಅವರು. ಇಂತಹ ಮಹಾನ್ ನಟನ ಕೊನೆಯ ಸಿನಿಮಾ ನಾಳೆ ರಿಲೀಸ್ ಆಗುತ್ತಿರುವುದು ವಿಶೇಷ.
'ಓಳ್ ಮುನಿಸ್ವಾಮಿ' ಕಾಶೀನಾಥ್ ಅವರ 50ನೇ ಸಿನಿಮಾವಾಗಿದ್ದು, ಅದೇ ಅವರ ಕೊನೆಯ ಸಿನಿಮಾ ಆಗುವ ಹಾಗೆ ಆಯ್ತು. ಈ ಸಿನಿಮಾ ಬಿಡುಗಡೆಗೆ ಮೊದಲೇ ಕಾಶೀನಾಥ್ ನಿಧನ ಹೊಂದಿದರು.ಇನ್ನು 'ಓಳ್ ಮುನಿಸ್ವಾಮಿ' ಚಿತ್ರದಲ್ಲಿ 'ಮುನಿಸ್ವಾಮಿ'ಯಾಗಿ ಕಾಶೀನಾಥ್ ನಟಿಸಿದ್ದಾರೆ. ಬೇಜಾನ್ ಸುಳ್ಳು ಹೇಳುವ ಪಾತ್ರ ಇದಾಗಿದೆ. ಈ ಹಿಂದೆ ಈ ರೀತಿಯ ಪಾತ್ರವನ್ನು ಕಾಶೀನಾಥ್ ಮಾಡಿರಲಿಲ್ಲ.
ಕಾಶೀನಾಥ್ 50 ನಾಟೌಟ್: ಕನ್ನಡ ಸಿನಿ ಪ್ರೇಮಿಗಳಿಂದ ಸಲ್ಯೂಟ್
'ಓಳ್ ಮುನಿಸ್ವಾಮಿ' ಸಿನಿಮಾವನ್ನ ನಿರ್ದೇಶಕ ಆನಂದ್ ಪ್ರಿಯ ನಿರ್ದೇಶನ ಮಾಡಿದ್ದಾರೆ. 'ಜಲ್ಸಾ' ಸಿನಿಮಾದ ನಾಯಕ ನಿರಂಜನ್ ನಟನೆಯ ಎರಡನೇ ಸಿನಿಮಾ ಇದಾಗಿದ್ದು, ನಾಯಕಿಯಾಗಿ ಅಖಿಲಾ ಎನ್ನುವ ಹೊಸ ಹುಡುಗಿ ಕಾಣಿಸಿಕೊಂಡಿದ್ದಾರೆ. ಸಮೂಹ ಬ್ಯಾನರ್ ನ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.
ಇದೊಂದು ಸಮಾಜದ ವಿಡಂಬನಾತ್ಮಕ, ಭಾವನೆಗಳ ತೊಳಲಾಟದ ಜೊತೆಗೆ ದೇವರು, ನಂಬಿಕೆ, ಪ್ರೀತಿ ಬದುಕಿನ ಕಥೆಯನ್ನ ಹೊಂದಿದೆಯಂತ್ತೆ. ಸಮಾಜ ಈಗ ಬದುಕನ್ನು ನೋಡುವ ದೃಷ್ಠಿಕೋನ ಬದಲಾಗಿದೆ ಎನ್ನುವ ನಿರ್ದೇಶಕರು ಅದೇ ವಿಷಯವನ್ನ ಹೈಲೈಟ್ ಮಾಡಿ ಸಿನಿಮಾದಲ್ಲಿ ತೋರಿಸಿದ್ದಾರಂತೆ. ಅಂದಹಾಗೆ, 'ಓಳ್ ಮುನಿಸ್ವಾಮಿ' ಸಿನಿಮಾ ಇದೇ ಶುಕ್ರವಾರ ಅಂದರೆ ನಾಳೆ ರಾಜ್ಯಾದಂತ್ಯ ಬಿಡುಗಡೆಯಾಗಲಿದೆ.