ಸ್ತ್ರೀಯೊಂದಿಗೆ ಚಿತ್ರಗುಪ್ತರ ಅಶ್ಲೀಲ ಸಂಬಂಧ ಸರಿಯೇ?
3. ಉಪೇಂದ್ರನು ಯಮಧರ್ಮರಾಜನನ್ನು 'ದ್ರೋಹಿ, ಮೋಸಗಾರ' ಎಂದು ಸಂಬೋಧಿಸಿದ್ದಾರೆ. ಅಲ್ಲದೇ ಚಿತ್ರಗುಪ್ತನೊಂದಿಗೆ ಸ್ತ್ರೀಯೊಬ್ಬಳ ಅಶ್ಲೀಲ ದೇಹಸಂಬಂಧದ ಚಿತ್ರೀಕರಣ ಮಾಡಿ ಆ ಮೂಲಕ ನಾಯಕನಟನು ಚಿತ್ರಗುಪ್ತನನ್ನು ಬ್ಲ್ಯಾಕ್ಮೇಲ್ ಮಾಡುವುದು. ಸ್ವರ್ಗದಲ್ಲಿನ ಇಂದ್ರನ ಮಗಳನ್ನು ಪ್ರೀತಿಸುವ ನೆಪದಲ್ಲಿ ಹೀನ ಮಟ್ಟದಲ್ಲಿ ಸಂಬೋಧಿಸುವುದು.
4. ನರಕದಲ್ಲಿ ಯಮಧರ್ಮನನ್ನು ಸ್ಥಾನದಿಂದ ಕೆಳಗಿಳಿಸಲು ಚುನಾವಣೆ ನಡೆಸುವುದು ಅಲ್ಲದೇ ಇದರ ಪ್ರಚಾರದ ವೇಳೆ ನಾಯಕನಟನು ತಾನು ಗೆದ್ದರೆ ನಿಮ್ಮ ಶಿಕ್ಷೆಯನ್ನು ಕಡಿತಗೊಳಿಸುತ್ತೇನೆ ಎನ್ನುವುದು, ಅದರ ವಿರುದ್ಧ ಯಮಧರ್ಮನು ರಂಭೆ, ಊರ್ವಶಿಯನ್ನು ಪ್ರಚಾರಕ್ಕೆ ಕರೆಯುವುದು...ಹೀಗೆ ಎಷ್ಟೋ ಪ್ರಸಂಗಗಳ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯುಂಟು ಮಾಡಲಾಗಿದೆ.
ಹಿಂದೂ ದೇವತೆಗಳು ಬಹುಸಂಖ್ಯಾತ ಹಿಂದೂಗಳ ಶ್ರದ್ಧಾಕೇಂದ್ರವಾಗಿವೆ. ಅವರನ್ನು ಮನೆ ಮನೆಗಳಲ್ಲಿ ಪೂಜಿಸಲಾಗುತ್ತದೆ. ಹೀಗಿರುವಾಗ ಇಂತಹ ಕಾಲ್ಪನಿಕ ಪಾತ್ರಗಳ ಮೂಲಕ ಈ ಶ್ರದ್ಧಾಕೇಂದ್ರದ ಮೇಲೆ ಆಘಾತ ಮಾಡಲಾಗಿದೆ. ಧಾರ್ಮಿಕ ಭಾವನೆಯನ್ನು ಹೀಗೆ ನೋಯಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಇಂತಹ ಚಲನಚಿತ್ರವನ್ನು ತೀವ್ರವಾಗಿ ಖಂಡಿಸುತ್ತದೆ. ಈ ಕೂಡಲೇ ಈ ಆಕ್ಷೇಪಾರ್ಹ ಚಿತ್ರವನ್ನು ಸಂಬಂಧಪಟ್ಟವರು ನಿಲ್ಲಿಸಬೇಕು ಎಂದು ಸಮಿತಿ ಆಗ್ರಹಿಸಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











