ಕಠಾರಿವೀರ ಪೋಸ್ಟರ್ ಹರಿದು ಬೆಂಕಿ ಹಚ್ಚಿ ಪ್ರತಿಭಟನೆ
ಕಠಾರಿವೀರ ಸುರಸುಂದರಾಂಗಿ ಚಿತ್ರದ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆಯ ಕಾವು ರಾಜ್ಯದಾದ್ಯಂತ ಭುಗಿಲೆದ್ದಿದೆ. ಮಂಗಳೂರು ಮತ್ತು ಉಡುಪಿಯಲ್ಲಿ ವಿಹೆಚ್ಪಿ ಹಾಗೂ ಭಜರಂಗದಳದ ಕಾರ್ಯಕರ್ತರು ಶನಿವಾರ (ಮೇ 12)ಚಿತ್ರದ ಪೋಸ್ಟರ್ಗಳನ್ನು ಹರಿದು ಬೆಂಕಿ ಹಚ್ಚಿ ಪ್ರತಿಭಟಿಸಿದರು.
ಮಂಗಳೂರಿನ ಸುಚಿತ್ರ ಚಿತ್ರಮಂದಿರದಲ್ಲಿ ಪೋಸ್ಟರ್ಗಳನ್ನು ಹರಿದು ಪ್ರತಿಭಟಿಸಲಾಯಿತು. ಹಾಗೆಯೇ ಉಡುಪಿಯ ಗೀತಾಂಜಲಿ ಚಿತ್ರಮಂದಿರದಲ್ಲೂ ಚಿತ್ರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಚಿತ್ರದಲ್ಲಿ ಹಿಂದೂ ದೇವಾನು ದೇವತೆಗಳನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು ಸಂಘಟನೆಗಳನ್ನು ಆಕ್ಷೇಪ ವ್ಯಕ್ತಪಡಿಸಿವೆ.
ಏತನ್ಮಧ್ಯೆ ಪೇಜಾವರ ಶ್ರೀಗಳು, ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು, ಆಯುರ್ವೇದ ವೈದ್ಯರಾದ ಸಂತೊಷ್ ಗುರೂಜಿ ಸೇರಿದಂತೆ ನಾಡಿನ ಸ್ವಾಮೀಜಿಗಳು 'ಕಠಾರಿವೀರ' ಚಿತ್ರದ ವಿರುದ್ಧ ತಿರುಗಿಬಿದ್ದಿದ್ದಾರೆ. (ಒನ್ಇಂಡಿಯಾ ಕನ್ನಡ)
More from Filmibeat
English summary
Upendra and Ramya lead Kannada mythological film Katari Veera Surasundarangi landed into a serious trouble. The Hindu organisations tears down the movie posters in Mangalore at Suchitra theater. The organisations alleges that the scenes in the film is disrespectful towards Hindu deities and it has hurt Hindu religious sentiments.
ಉಪೇಂದ್ರ ರಮ್ಯಾ ಮುನಿರತ್ನ ಪ್ರಮೋದ್ ಮುತಾಲಿಕ್ ಶ್ರೀರಾಮಸೇನೆ ವಿವಾದ upendra 3d ramya pramod muthalik munirathna controversy sri ram sene


Click it and Unblock the Notifications











