Don't Miss!
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- News Samsung: ಮಾರುಕಟ್ಟೆ ಗ್ರ್ಯಾಂಡ್ ಎಂಟ್ರಿ ನೀಡಿದೆ ನ್ಯೂ ಫೋನ್
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜರ ಹಿರಿಮಗನಿಗಾಗಿ ಹಾಡು ಹಾಡಿದ ಅಂಧ ಮಕ್ಕಳು
ರಾತ್ರಿ ಐದು ನಿಮಿಷ ಕರೆಂಟ್ ಹೋದರೆನೇ ನಮಗೆ ಏನ್ ಮಾಡಬೇಕು ಅಂತ ತಿಳಿಯಲ್ಲ. ಯಾವಾಗ ಕತ್ತಲು ಕಳೆದು ಬೆಳಕು ಬರುತ್ತೋ ಅಂತ ಕಾಯುತ್ತೇವೆ. ಆದರೆ, ಕೆಲವರು ಜೀವನ ಪೂರ್ತಿ ಕತ್ತಲೆಯಲ್ಲಿ ಇರಬೇಕಾಗುತ್ತದೆ.
ನಟ ಶಿವರಾಜ್ ಕುಮಾರ್ ಈಗ ಕತ್ತಲ ಜೀವನದ ಅನುಭವ ಪಡೆದಿದ್ದಾರೆ. ಅರ್ಥಾತ್ ಅವರು 'ಕವಚ' ಸಿನಿಮಾದಲ್ಲಿ ಅಂಧನ ಪಾತ್ರ ಮಾಡಿದ್ದಾರೆ. ಶಿವಣ್ಣನ ವೃತ್ತಿ ಜೀವನದ ಮತ್ತೊಂದು ಮಹತ್ವದ ಪಾತ್ರದ ಸಿನಿಮಾ ಇದಾಗಿದೆ.
ಶಿವರಾಜ್ ಕುಮಾರ್ 'ಕವಚ' ಚಿತ್ರಕ್ಕೆ ಹೊಸ ನಾಯಕಿಯ ಆಗಮನ
ಅಂದಹಾಗೆ, ನಿನ್ನೆ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಅಂಧ ಮಕ್ಕಳ ಜೊತೆಗೆ ಶಿವಣ್ಣ ಕೆಲ ಕಾಲ ಕಳೆದರು. ಮುಂದೆ ಓದಿ...
'ಕವಚ' ಟೀಸರ್ ರಿಲೀಸ್
ಶಿವಣ್ಣನ 'ಕವಚ' ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿದೆ. ಬೆಂಗಳೂರಿನ ಜಿ ಪಿ ನಗರದ ರಮಣ ಮಹರ್ಷಿ ಅಂಧ ಶಾಲೆಯಲ್ಲಿ ಟೀಸರ್ ಅನಾವರಣ ಮಾಡಲಾಗಿದೆ. ಶಿವಣ್ಣ ಸೇರಿದಂತೆ ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ನಟ ಧನಂಜಯ್ ಕೂಡ ಹಾಜರಿದ್ದರು.
ರಾಜರ ಹಿರಿಮಗನಿಗಾಗಿ ಹಾಡು
ಶಿವಣ್ಣ ತಮ್ಮ ಶಾಲೆಗೆ ಬಂದಿದ್ದು, ಅಲ್ಲಿನ ಅಂಧ ಮಕ್ಕಳಿಗೆ ಬಹಳ ಖುಷಿ ನೀಡಿತ್ತು. ಶಿವರಾಜ್ ಕುಮಾರ್ ಅವರಿಗೆ ಅವರ ನಟನೆಯ 'ವಜ್ರಕಾಯ' ಸಿನಿಮಾದ 'ಉಸಿರೇ ಉಸಿರೇ...' ಹಾಡು ಹಾಡುವ ಮೂಲಕ ಶುಭಾಶಯ ತಿಳಿಸಿದರು. ಮಕ್ಕಳ ಹಾಡು ಶಿವಣ್ಣನಿಗೆ ಸಂತೋಷ ನೀಡಿತು.
ಮೊದಲ ಬಾರಿಗೆ ಅಂಧನ ಪಾತ್ರ
ಶಿವರಾಜ್ ಕುಮಾರ್ ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಅಂಧನ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಮಲೆಯಾಳಂ ಭಾಷೆಯ 'ಒಪ್ಪಂ' ಸಿನಿಮಾದ ರಿಮೇಕ್ ಆಗಿದೆ. ಶಿವರಾಜ್ ಕುಮಾರ್ 14 ವರ್ಷದ ಬಳಿಕ ರಿಮೇಕ್ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ.
ಜಿ ವಿ ಆರ್ ವಾಸು ನಿರ್ದೇಶನ
ಜಿ ವಿ ಆರ್ ವಾಸು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೆಚ್ ಎಂ ಎ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶಿವರಾಜ್ ಕುಮಾರ್ ಜೊತೆಗೆ ಇಶಾ ಕೊಪಿಕರ್, ಕೃತಿಕ, ವಸಿಷ್ಟ, ಜಯಪ್ರಕಾಶ್, ರವಿ ಕಾಳೆ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ಶಿವಣ್ಣ ಅಭಿಮಾನಿಗಳಿಗೆ ಇಷ್ಟವಾಗಿದೆ.