Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಸಾಲೆ ದೊಸೆ, ಮೈಸೂರ್ ಪಾಕ್ ಪಾರ್ಟಿ ಮಾಡಿದ 'ಕವಲುದಾರಿ' ಟೀಮ್
ನಿನ್ನೆ (ಶುಕ್ರವಾರ) ಬಿಡುಗಡೆಯಾದ 'ಕವಲುದಾರಿ' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಪುನೀತ್ ರಾಜ್ ಕುಮಾರ್ ನಿರ್ಮಾಣ ಮೊದಲ ಸಿನಿಮಾವನ್ನು ಪ್ರೇಕ್ಷಕರು ಸ್ವಾಗತ ಮಾಡಿದ್ದಾರೆ. ಇದು ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ. ಸಿನಿಮಾದ ಮೊದಲ ಗೆಲುವಿನ ಸಂಭ್ರಮದಲ್ಲಿ ಚಿತ್ರತಂಡ ಭಾಗಿಯಾಗಿದೆ.
ಮಸಾಲೆ ದೊಸೆ, ಮೈಸೂರ್ ಪಾಕ್ ಸವಿಯುವ ಮೂಲಕ ತಮ್ಮ ಖುಷಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಚಿತ್ರದ ನಾಯಕ ರಿಷಿ, ಅನಂತ್ ನಾಗ್, ನಿರ್ದೇಶಕ ಹೇಮಂತ್ ರಾವ್ ಹಾಗೂ ಅನಂತ್ ನಾಗ್ ಪತ್ನಿ ಗಾಯತ್ರಿ ಈ ಸಂತಸದ ಕ್ಷಣದಲ್ಲಿ ಭಾಗಿಯಾಗಿದ್ದಾರೆ.
'ಕವಲುದಾರಿ' ನೋಡಿಬಂದ ವಿಮರ್ಶಕರು ಥ್ರಿಲ್ ಆದ್ರಾ?
ನಟ ರಿಷಿ ಟ್ವಿಟ್ಟರ್ ಮೂಲಕ ಫೋಟೋ ಹಂಚಿಕೊಂಡಿದ್ದು, '' ನಮ್ಮ' ಕವಲುದಾ'ರಿ ಸಿನಿಮಾದ ಗೆಲುವು ಎಷ್ಟೋ ಮಹತ್ವಾಕಾಂಕ್ಷೆ ನಿರ್ದೇಶಕರ ಗೆಲುವು.'' ಎಂದು ಬರೆದುಕೊಂಡಿದ್ದಾರೆ.
This huge success of our film #Kavaludaari is a victory to many aspiring filmmakers and artists who worry about the commercial viability of an honest idea. We had mysore pak and masala dosa to celebrate :). Congratulations to everyone :) pic.twitter.com/9ijLBtbQDT
— Rishi (@Rishi_vorginal) April 13, 2019
Kavaludaari Review : ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗೆ ಸಲ್ಲುವ ಸಿನಿಮಾ
ಹೇಗಿದೆ 'ಕವಲುದಾರಿ' ?
ಕ್ರೈಮ್ ಥ್ರಿಲ್ಲರ್ ಇಷ್ಟ ಪಡುವವರಿಗೆ 'ಕವಲುದಾರಿ' ಸಿನಿಮಾ ಖುಷಿ ನೀಡಬಹುದು. ರಿಷಿ, ಅನಂತ್ ನಾಗ್, ಸಂಪತ್ ಕುಮಾರ್ ಹಾಗೂ ಅಚ್ಚುತ್ ಕುಮಾರ್ ನಟನೆ ಸೂಪರ್ ಆಗಿದೆ. ನಿರ್ದೇಶಕ ಹೇಮಂತ್ ರಾವ್ ಮೇಕಿಂಗ್ ಸ್ಟೈಲ್ ಇಷ್ಟ ಆಗುತ್ತದೆ. ಚಿತ್ರದ ಅವಧಿ ಕೊಂಚ ಜಾಸ್ತಿ ಆಗಿದೆ ಅನಿಸುತ್ತದೆ. ಕೊಲೆಯ ಜೊತೆಗೆ ರಾಜಕೀಯ ಹಿನ್ನಲೆಯಲ್ಲಿ ಸಿನಿಮಾದ ಕಥೆ ಇದೆ.