Don't Miss!
- News Namma Metro Service Extend: ಲೋಕಸಭಾ ಚುನಾವಣೆಗಾಗಿ ಮೆಟ್ರೋ ಸೇವೆ ವಿಸ್ತರಣೆ, ಗಮನಿಸಿ
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಸರಾ, ದೀಪಾವಳಿ ಅಪಭ್ರಂಶ: ಸಿನಿಸಾಹಿತಿ ಕವಿರಾಜ್ ಆಕ್ರೋಶ
ಇದೀಗ ದಸರಾ ಸಂಭ್ರಮ, ಕೆಲವೇ ದಿನಗಳಲ್ಲಿ ದೀಪಾವಳಿ ಸಹ ಬರಲಿದೆ. ದಸರಾ ಸಂದರ್ಭ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಮಂದಿ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಹೀಗೆ ಸಾಮಾಜಿಕ ಜಾಲತಾಣದಲ್ಲಿ ದಸರಾ ಶುಭಾಶಯ ಕೋರುವ ಸಂದರ್ಭದಲ್ಲಿ ದಸರಾ ವನ್ನು ದಶೆರಾ ಎಂಥಲೂ ದೀಪಾವಳಿ ಯನ್ನು ದಿವಾಲಿ ಎಂಥಲೂ ಕರೆಯುವುದು ಸಾಮಾನ್ಯವಾಗಿಬಿಟ್ಟಿದೆ.
'ಹಿಂದಿ ದಿವಸಕ್ಕೆ ನನ್ನ ವಿರೋಧವಿದೆ'- ಚಿತ್ರ ಸಾಹಿತಿ ಕವಿರಾಜ್
ಹೀಗೆ ದಶರಾ, ದಿವಾಲಿ ಎಂದು ಕರೆದು ನಮ್ಮ ಹಬ್ಬದ ಹೆಸರನ್ನು ಅಪಭ್ರಂಶ ಮಾಡುವುದು ದೊಡ್ಡ್ ತಪ್ಪೇನೂ ಅಲ್ಲ ಎಂಬುದು ಬಹುತೇಕರ ಭಾವನೆ. ದಶೆರಾ, ದಿವಾಲಿ ಎಂದು ಕರೆಯುವುದೇ ಸರಿ ಎಂಬ ಭಾವನೆಯೂ ಸಹ ಹಲವರಲ್ಲಿ ಇದ್ದಹಾಗಿದೆ. ಆದರೆ ನಮ್ಮ ಹಬ್ಬಗಳ ಹೆಸರನ್ನು ಉತ್ತರ ಭಾರತದ ಪ್ರಭಾವಕ್ಕೆ ಸಿಲುಕಿ ಅಪಭ್ರಂಶಗೊಳಿಸುವುದನ್ನು ಕೆಲವರು ಖಂಡಿಸುತ್ತಲೇ ಬಂದಿದ್ದಾರೆ. ಅದರಲ್ಲಿ ಸಿನಿಮಾ ಸಾಹಿತಿ ಕವಿರಾಜ್ ಸಹ ಒಬ್ಬರು.
ಅಭಿಪ್ರಾಯ ನಿರ್ಭಿಡೆಯಿಂದ ದಾಖಲಿಸುವ ಕವಿರಾಜ್
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ, ಪ್ರಸ್ತುತ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ನಿರ್ಭಿಡೆಯಿಂದ ದಾಖಲಿಸುವ ಕವಿರಾಜ್, ಈಗ ಕನ್ನಡಿಗರೇ ನಮ್ಮ ಹಬ್ಬದ ಹೆಸರುಗಳನ್ನು ತಪ್ಪಾಗಿ ಬರೆಯುವ, ಉಚ್ಛರಿಸುವುದರ ಬಗ್ಗೆ ಆಕ್ರೋಶದ ಪೋಸ್ಟ್ ಒಂದನ್ನು ಹಾಕಿದ್ದಾರೆ.
ಇದ್ಯಾವುದ್ರಿ ದುಸೆರಾ, ದಿವಾಲಿ: ಕವಿರಾಜ್
'ಹುಟ್ಟಿದಾಗಿನಿಂದಲೂ ಎಷ್ಟು ಸವಿಯಾಗಿ , ಸರಳವಾಗಿ, ಸಹಜವಾಗಿ , ಅರ್ಥಗರ್ಭಿತವಾಗಿ 'ದೀಪಾವಳಿ' 'ದಸರಾ' ಅನ್ಕೊಂಡು, ಆಚರಿಸ್ಕೊಂಡು ಬಂದಿದೀವಿ. ಇದ್ಯಾವುದು ಈಗ ಕರ್ಮಾ, ದುಸೆರಾ, ದಿವಾಲಿ ? ನಮ್ಮದು ಅಂತಾ ಒಂದು ಮೆದುಳಿದೆ ಅಲ್ಲವೇ? ಅದನ್ನ ಉಪಯೋಗಿಸೋದೇ ಇಲ್ವಾ?' ಎಂದು ಪ್ರಶ್ನಿಸಿದ್ದಾರೆ ಕವಿರಾಜ್.
'ಕೊತ್ಮೀರಿ ಸೊಪ್ಪು' ಟ್ರೋಲ್: ಗಮನಿಸಬೇಕಾದ ಕವಿರಾಜ್ ಅಭಿಪ್ರಾಯ
'ಕಸ ತಂದು ಮೆದುಳಿಗೆ ಬಿಸಾಡಿ ಕೈಗೊಂಬೆ ಮಾಡಿಕೊಳ್ಳಬಹುದೇ?'
'ಯಾರು ಬೇಕಾದರೂ ಏನು ಬೇಕಾದರೂ ಕಸ ತಂದು ನಮ್ಮ ಮೆದುಳಿಗೆ ಬಿಸಾಡಿ ನಮ್ಮನ್ನ ಇಷ್ಟು ಹೀನಾಯವಾಗಿ ಅವರ ಕೈ ಗೊಂಬೆ ಆಗಿಸಿಕೊಳ್ಳಬಹುದಾದಷ್ಟು ಟೊಳ್ಳು ವ್ಯಕ್ತಿತ್ವಗಳ ನಾವು? ಎಂದು ಪ್ರಶ್ನೆಯ ಮೇಲೆ ಪ್ರಶ್ನೆ ಎಸೆದಿದ್ದಾರೆ ಕವಿರಾಜ್.
Recommended Video
ಗುಲಾಮಗಿರಿಯನ್ನು ತೆವಲಾಗಿಸಿಕೊಂಡಿದ್ದೇವಾ? ಕವಿರಾಜ್ ಪ್ರಶ್ನೆ
'ಏನು ಸಾಧಿಸೋಕ್ ಹೋಗ್ತಿದ್ದೀವಿ ಎಲ್ಲದ್ದರಲ್ಲೂ ಇನ್ನ್ಯಾರನೋ ಅನುಕರಿಸುವ ಗುಲಾಮಗಿರಿಯನ್ನೇ ತೆವಲಾಗಿಸಿಕೊಂಡು ? ನಮ್ಮತನಗಳನ್ನೆಲ್ಲಾ ತೊರೆಯುತ್ತಾ ತೊರೆಯುತ್ತಾ ಕೊನೆಗೆ ಏನಾಗ ಹೊರಟಿದ್ದೀವಿ?' ಎಂದಿದ್ದಾರೆ ಸಿನಿಮಾ ಸಾಹಿತಿ ಕವಿರಾಜ್.
'ಇರುವುದೆಲ್ಲವ ಬಿಟ್ಟು...': ಚಿರು ಸಾವಿನ ಬೆನ್ನಲ್ಲೇ ಹೃದಯ ಕಲಕುವ ಘಟನೆ ಹಂಚಿಕೊಂಡ ಕವಿರಾಜ್