Don't Miss!
- News ವೃದ್ಧರ ಗೌಪ್ಯ ಮತದಾನ ವೇಳೆ ಅಕ್ರಮ: ಸಿಪಿಎಂ ಏಜೆಂಟ್ ಹಸ್ತಕ್ಷೇಪ: Video Viral
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
''ಆಂಡಿ ಹಾಗೆಲ್ಲ ಮಾಡಲ್ಲ'' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ ಮುರಳಿ.!
'ಬಿಗ್ ಬಾಸ್' ಮುಗಿದ್ಮೇಲೂ ಆಂಡ್ರ್ಯೂ ಕಡೆಯಿಂದ ಕಿರುಕುಳ ತಪ್ಪಿಲ್ಲ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಮೇಲೂ ಆಂಡ್ರ್ಯೂ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ 'ಚಿನ್ನು' ಕವಿತಾ ಗೌಡ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.
''ಕವಿತಾಗೆ ಆಂಡ್ರ್ಯೂ ಕಿರುಕುಳ ಕೊಡ್ತಿರೋದು ನಿಜವೇ.? 'ಬಿಗ್ ಬಾಸ್' ಮುಗಿದ್ಮೇಲೂ ಆಂಡ್ರ್ಯೂ ನಡವಳಿಕೆ ಹಾಗೇ ಮುಂದುವರೆದಿದ್ಯಾ.?'' ಎಂದು ಮಾಧ್ಯಮದವರು 'ಒಗ್ಗರಣೆ ಡಬ್ಬಿ' ಮುರಳಿಗೆ ಪ್ರಶ್ನೆ ಮಾಡಿದರು. ಆಗ ಮುರಳಿ, ಆಂಡ್ರ್ಯೂ ಪರವಾಗಿಯೇ ಬ್ಯಾಟಿಂಗ್ ಆರಂಭಿಸಿದರು.
''ಬಿಗ್ ಬಾಸ್' ಮನೆಯಲ್ಲಿ ಇರುವಾಗ, ಆಟಕ್ಕಾಗಿ ಆಂಡ್ರ್ಯೂ ಆ ರೀತಿ ನಡೆದುಕೊಳ್ಳುತ್ತಿದ್ದ ಅಷ್ಟೇ. ನನಗೆ ಗೊತ್ತಿರುವ ಹಾಗೆ ಹೊರಗೆ ಬಂದ ಮೇಲೆ ಆಂಡಿ ಹಾಗೆಲ್ಲ ಮಾಡಲ್ಲ'' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಮುರಳಿ ಹೇಳಿಕೆ ನೀಡಿದ್ದಾರೆ. ಮುಂದೆ ಓದಿರಿ...
ಇದು ಸರಿಯಲ್ಲ.!
''ಕವಿತಾ-ಆಂಡಿ ಕೇಸ್ ನ 'ಬಿಗ್ ಬಾಸ್' ಮನೆಯಲ್ಲಿ ಹ್ಯಾಂಡಲ್ ಮಾಡಿದ್ದು ನಾನೇ. ಆ ಟಾಸ್ಕ್ ನಲ್ಲಿ ನಾನು ಜಡ್ಜ್ ಆಗಿದ್ದೆ. ನೀವು ಸರಿ ಮಾಡಿಕೊಳ್ಳಬಹುದು ಅಂತ ನಾನು ಇಬ್ಬರಿಗೂ ಹೇಳಿದ್ದೆ. ಆದರೆ ಅವರು ಸರಿ ಮಾಡಿಕೊಳ್ಳಲಿಲ್ಲ. ಯಾವತ್ತೋ ನಡೆದಿದ್ದನ್ನ ಇವತ್ತು ಮತ್ತೆ ತೆಗೆಯುವುದು ಸರಿಯಲ್ಲ'' ಎಂದಿದ್ದಾರೆ ಮುರಳಿ.
ಆಂಡ್ರ್ಯೂ-ಕವಿತಾಗೆ ನಾಚಿಕೆ ಆಗಬೇಕು ಎಂದ 'ಒಗ್ಗರಣೆ ಡಬ್ಬಿ' ಮುರಳಿ.!
ಆಂಡಿ ಹಾಗೆಲ್ಲ ಮಾಡಲ್ಲ.!
''ನನಗೆ ಗೊತ್ತಿರುವ ಹಾಗೆ, 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ ಆಂಡಿ ಹಾಗೆಲ್ಲ ಮಾಡುವವನಲ್ಲ. ಅವನು ತುಂಬಾ ಬುದ್ಧಿವಂತ. ಆಟಕ್ಕಾಗಿ ಅವನು ಹಾಗೆ ಆಡುತ್ತಿದ್ದ ಅಷ್ಟೇ. ಮಜಾ ಟಾಕೀಸ್ ನಲ್ಲಿ ಏನು ನಡೆಯಿತು ಅನ್ನೋದು ನನಗೆ ಗೊತ್ತಿಲ್ಲ. ಆದ್ರೆ, ಆಂಡಿ ಹಾಗೆಲ್ಲ ಮಾಡಲ್ಲ ಅನ್ನೋದು ನನ್ನ ಬಲವಾದ ನಂಬಿಕೆ'' ಅಂತಾರೆ ಮುರಳಿ.
'ಬಿಗ್ ಬಾಸ್' ಮುಗಿದ್ಮೇಲೂ ತೊಂದರೆ ತಪ್ಪಿಲ್ಲ: ಆಂಡ್ರ್ಯೂ ವಿರುದ್ಧ ಮಹಿಳಾ ಆಯೋಗಕ್ಕೆ ಕವಿತಾ ದೂರು.!
ಸಾಯಿಸಿಬಿಡ್ತಾರೆ ನನ್ನನ್ನ.?
''ನಾನು ಕಾಮನ್ ಮ್ಯಾನ್. ಸುದೀಪ್ ಸರ್ ಕಡೆಯಿಂದ ನಾನು ಎಷ್ಟೋ ಪಾಠ ಕಲಿತಿದ್ದೇನೆ. ನಾನು ಎಷ್ಟೊಂದು ಚೇಂಜ್ ಆಗಿದ್ದೇನೆ. ಆದರೂ ನನ್ನನ್ನ ನನ್ನ ಪಾಡಿಗೆ ಇರಲು ಬಿಡುತ್ತಿಲ್ಲ. ಸಾಯಿಸಿಬಿಡ್ತಾರೆ ನನ್ನನ್ನ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಮೇಲೆ ನಾನು ಅವರ ಬಳಿ ಮಾತೇ ಆಡಿಲ್ಲ'' ಎನ್ನುತ್ತಾರೆ ಆಂಡ್ರ್ಯೂ.
ಮಹಿಳಾ ಆಯೋಗಕ್ಕೆ ಕವಿತಾ ದೂರು: ಆಂಡ್ರ್ಯೂ ಹೇಳಿದ್ದೇನು.?
ಕವಿತಾ ಕೊಟ್ಟಿರುವ ದೂರು ಏನು.?
''ಬಿಗ್ ಬಾಸ್' ಮನೆಯಲ್ಲಿ ಆಂಡ್ರ್ಯೂ ಕಿರುಕುಳ ಕೊಟ್ಟಿದ್ದಾರೆ. ಹೊರಗೆ ಬಂದ್ಮೇಲೂ ಅದನ್ನೇ ಮುಂದುವರೆಸಿದ್ದಾರೆ. ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ನನ್ನ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ'' ಎಂದು ಆರೋಪಿಸಿ ನಟಿ ಕವಿತಾ ಗೌಡ ಮಹಿಳಾ ಆಯೋಗದ ಮೆಟ್ಟಿಲೇರಿದ್ದರು.