Don't Miss!
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹಿಳಾ ಆಯೋಗಕ್ಕೆ ಕವಿತಾ ದೂರು: ಆಂಡ್ರ್ಯೂ ಹೇಳಿದ್ದೇನು.?
Recommended Video
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಕವಿತಾ ಮತ್ತು ಆಂಡ್ರ್ಯೂ ನಡುವೆ ಆದ ವಾದ-ವಿವಾದ-ಜಗಳಗಳೆಲ್ಲವನ್ನೂ ನೀವು ಕಣ್ತುಂಬಿಕೊಂಡಿದ್ದೀರಾ. 'ಬಿಗ್ ಬಾಸ್' ಮುಗಿದ್ಮೇಲೂ ಇಬ್ಬರ ನಡುವಿನ ಮನಸ್ತಾಪ, ಭಿನ್ನಾಭಿಪ್ರಾಯಕ್ಕೆ ಫುಲ್ ಸ್ಟಾಪ್ ಬಿದ್ದ ಹಾಗೆ ಕಾಣುತ್ತಿಲ್ಲ.
'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿರುವಾಗ, ತಮ್ಮ ಬಗ್ಗೆ ಆಂಡ್ರ್ಯೂ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ... 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೂ ಆಂಡ್ರ್ಯೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳಾ ಆಯೋಗಕ್ಕೆ ಕವಿತಾ ದೂರು ಕೊಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಆಂಡ್ರ್ಯೂ, ''ನನಗೆ ಶಾಕ್ ಆಗಿದೆ. ನನ್ನನ್ನ ನನ್ನ ಪಾಡಿಗೆ ಇರಲು ಬಿಡುತ್ತಿಲ್ಲ. ಸಾಯಿಸಿಬಿಡುತ್ತಾರೆ ನನ್ನನ್ನ. ನನ್ನನ್ನ ಬೆಳೆಯಲು ಬಿಡಬಾರದು ಅಂತ ಹೀಗೆಲ್ಲ ಮಾಡುತ್ತಿದ್ದಾರೆ'' ಎಂದಿದ್ದಾರೆ. ಮುಂದೆ ಓದಿರಿ...
ಶಾಕ್ ಆಗಿದೆ.!
''ನನಗೆ ಫುಲ್ ಶಾಕ್ ಆಗಿದೆ. 'ಬಿಗ್ ಬಾಸ್' ಮನೆಯಿಂದ ಆಚೆ ಬಂದ್ಮೇಲೆ ನಾನು ಕವಿತಾ ರನ್ನ ಭೇಟಿ ಮಾಡಿಲ್ಲ. ಅವರ ಬಳಿ ಮಾತನಾಡಿಲ್ಲ. ಅವರ ಫೋನ್ ನಂಬರ್ ಕೂಡ ನನ್ನ ಬಳಿ ಇಲ್ಲ. ಒಂದು ಮೆಸೇಜ್ ಮಾಡಿಲ್ಲ. ಸಂಪರ್ಕ ಅನ್ನೋದು ಇಲ್ಲವೇ ಇಲ್ಲ. ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಿದ್ದೆ. ನನ್ನ ಮೇಲೆ ಯಾಕೆ ಕಂಪ್ಲೇಂಟ್ ಕೊಟ್ಟಿದ್ದಾರೆ ಅನ್ನೋದೇ ನನಗೆ ಗೊತ್ತಿಲ್ಲ'' ಅಂತಾರೆ ಆಂಡ್ರ್ಯೂ.
'ಬಿಗ್ ಬಾಸ್' ಮುಗಿದ್ಮೇಲೂ ತೊಂದರೆ ತಪ್ಪಿಲ್ಲ: ಆಂಡ್ರ್ಯೂ ವಿರುದ್ಧ ಮಹಿಳಾ ಆಯೋಗಕ್ಕೆ ಕವಿತಾ ದೂರು.!
ತಂಗಿ ತರಹ ಎಂದಿದ್ದೆ.!
''ಬಿಗ್ ಬಾಸ್' ಮನೆಯಲ್ಲಿ ಏನಾಯ್ತು ಅನ್ನೋದು ಎಲ್ಲರಿಗೂ ಗೊತ್ತಿದೆ. ಟಾಸ್ಕ್ ನಲ್ಲಿ ಅವರೇ ನನಗೆ ಹತ್ತು ನಿಮಿಷ ಕೊಡ್ತೀನಿ ಅಂತ ಹೇಳಿದ್ರು. ಆಮೇಲೆ ಕೊಡಲ್ಲ ಎಂದರು. 'ಬಿಗ್ ಬಾಸ್' ಮನೆಯಿಂದ ಹೊರಗೆ ಬರುವಾಗ 'ಫೋನ್ ಮಾಡ್ತೀನಿ' ಅಂತ ಅವರೇ ನನಗೆ ಹೇಳಿದರು. ಪ್ರಥಮ್ ಬಂದಾಗ, ತಂಗಿ ತರಹ ಅಂತ ಒಪ್ಪಿಕೊಂಡಿದ್ದೇನೆ'' - ಆಂಡ್ರ್ಯೂ
ಚಿತ್ರಹಿಂಸೆ ನೀಡಿದ 'ವಿಲನ್' ಆಂಡಿ ವಿರುದ್ಧ ಪೊಲೀಸ್ ಕಂಪ್ಲೇಂಟ್.!
ಸಾಯಿಸಿಬಿಡ್ತಾರೆ ನನ್ನನ್ನ.?
''ನಾನು ಕಾಮನ್ ಮ್ಯಾನ್. ಸುದೀಪ್ ಸರ್ ಕಡೆಯಿಂದ ನಾನು ಎಷ್ಟೋ ಪಾಠ ಕಲಿತಿದ್ದೇನೆ. ನಾನು ಎಷ್ಟೊಂದು ಚೇಂಜ್ ಆಗಿದ್ದೇನೆ. ಆದರೂ ನನ್ನನ್ನ ನನ್ನ ಪಾಡಿಗೆ ಇರಲು ಬಿಡುತ್ತಿಲ್ಲ. ಸಾಯಿಸಿಬಿಡ್ತಾರೆ ನನ್ನನ್ನ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಮೇಲೆ ನಾನು ಅವರ ಬಳಿ ಮಾತೇ ಆಡಿಲ್ಲ'' - ಆಂಡ್ರ್ಯೂ
ಕವಿತಾ ಗೌಡಗೆ 'ಡರ್ಟಿಯೆಸ್ಟ್ ಸೆಲೆಬ್ರಿಟಿ' ಎಂದ ಆಂಡ್ರ್ಯೂ
ಕೆರಿಯರ್ ಹಾಳಾಗುತ್ತಿದೆ
''ನನಗೆ ನಿಜವಾಗಿಯೂ ಗಾಬರಿ ಆಗಿದೆ. ಕಷ್ಟಪಟ್ಟು ಮಜಾ ಭಾರತ ಪ್ರೋಗ್ರಾಂ ಮಾಡುತ್ತಿದ್ದೇನೆ. ನನಗೆ ಕೆರಿಯರ್ ಮುಖ್ಯ. ಇಡೀ ಮೈಂಡ್ ಬ್ಲಾಂಕ್ ಆಯ್ತು. ಹೀಗೆಲ್ಲ ಆದರೆ ನನ್ನ ಕೆರಿಯರ್ ಹಾಳಾಗುತ್ತದೆ'' - ಆಂಡ್ರ್ಯೂ
ಸೇಡು ತೀರಿಸಿಕೊಂಡ ಕವಿತಾ: ಕ್ಯಾಪ್ಟನ್ ಆಗದ ಆಂಡಿ.!
ಓಪನ್ ವಾರ್ನಿಂಗ್ ಕೊಟ್ಟಿದ್ದ ಕವಿತಾ
''ಬಿಗ್ ಬಾಸ್' ಮನೆಯ ಪಾರ್ಟಿಯಲ್ಲಿ ''ನೀನು ಮಾಡಿದ್ದೆಲ್ಲಾ ನಾನು ಮರೆಯೋದಿಲ್ಲ. ನಿನಗೆ ಮುಂದಕ್ಕೆ ಇಟ್ಟಿದ್ದೇನೆ'' ಅಂತ ನನಗೆ ಕವಿತಾ ಹೇಳಿದ್ದರು. ಆಮೇಲೆ 'ಆಟೋಗ್ರಾಫ್' ಮಾಡುವಾಗಲೂ ಇದೇ ಮಾತನ್ನ ಎರಡು ಬಾರಿ ಹೇಳಿ ಓಪನ್ ವಾರ್ನಿಂಗ್ ಕೊಟ್ಟಿದ್ದರು. ಇದು ಪಬ್ಲಿಸಿಟಿ ಸ್ಟಂಟಾ.?'' ಅಂತ ಪ್ರಶ್ನಿಸುತ್ತಾರೆ ಆಂಡ್ರ್ಯೂ.
ಆಗಲೇ ಯಾಕೆ ಕಂಪ್ಲೇಂಟ್ ಮಾಡಲಿಲ್ಲ.?
''ನನ್ನಿಂದ ಅಷ್ಟೊಂದು ತೊಂದರೆ ಆಗಿದ್ದರೆ, 'ಬಿಗ್ ಬಾಸ್' ಮನೆಯಲ್ಲಿ ಇರುವಾಗಲೇ ವಾಹಿನಿಯವರಿಗೆ ಕಂಪ್ಲೇಂಟ್ ಮಾಡಬೇಕಿತ್ತು. ಆದರೆ ಯಾಕೆ ಮಾಡಲಿಲ್ಲ.? ನನ್ನಿಂದ ಹೆಡ್ ಮಸಾಜ್ ಕೂಡ ಮಾಡಿಸಿಕೊಂಡಿದ್ದಾರೆ. ಆಗ ಯಾಕೆ ಯಾವುದೇ ಪ್ರಾಬ್ಲಂ ಇರಲಿಲ್ಲ.?'' - ಆಂಡ್ರ್ಯೂ
ಪ್ಲಾನ್ ಮಾಡಿದ್ದಾರಾ ಕವಿತಾ.?
''ನಾನು ಕವಿತಾ ವಿರುದ್ಧ ದೂರು ಕೊಡಲ್ಲ. ಜನರ ಮುಂದೆ ಸುದೀಪ್ ಸರ್ ಮುಂದೆ ಕ್ಷಮೆ ಕೇಳಿದ್ದೇನೆ. ಈ ಆರೋಪಗಳೆಲ್ಲಾ ಸುಳ್ಳು. ನನ್ನನ್ನ ಬೆಳೆಯಲು ಬಿಡಬಾರದು, ತುಳಿದು ಸಾಯಿಸಿಬಿಡಬೇಕು ಅಂತ ಪ್ಲಾನ್ ಮಾಡಿದ್ದಾರಾ.? ನನಗೆ ಗೊತ್ತಿಲ್ಲ'' -ಆಂಡ್ರ್ಯೂ