Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರ್ಷಗಳ ಬಳಿಕ ಕೋಮಲ್ ಕಮ್ ಬ್ಯಾಕ್ : ತಮ್ಮನಿಗೆ ಜೈ ಎಂದ ಜಗ್ಗೇಶ್
ಹಾಸ್ಯ ನಟರು ಹೀರೋ ಆಗುವುದು ಕಮಾನ್. ಆದರೆ, ಆ ರೀತಿ ಹೀರೋ ಆದ ಮೇಲೆ ಹೆಚ್ಚು ಉಳಿದುಕೊಂಡ ನಟರು ತೀರ ಕಡಿಮೆ. ಕನ್ನಡದಲ್ಲಿಯೂ ಅನೇಕ ಹಾಸ್ಯ ನಟರು ನಾಯಕ ನಟನಾಗಿ ಅದೃಷ್ಟ ಪರೀಕ್ಷೆ ಮಾಡಿದ್ದಾರೆ.
ಕಾಮಿಡಿ ನಟರಾಗಿದ್ದ ಕೋಮಲ್ ಹೀರೋ ಆದರು. ನಾಯಕನಾಗಿ ಕಾಣಿಸಿಕೊಂಡ ಕೆಲ ಸಿನಿಮಾಗಳು ಹಿಟ್ ಆದರೆ, ಅನೇಕ ಸಿನಿಮಾಗಳು ಫ್ಲಾಪ್ ಆದವು. ಇತ್ತೀಚೆಗೆ ಕೋಮಲ್ ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ.
ವಿದ್ಯಾವಂತ ಕೋಮಲ್ ಚಿತ್ರರಂಗಕ್ಕೆ ಕಾಲಿಡಲು ಕಾರಣ ಒಂದೇ ಒಂದು ಮಾತು.!
ಹೀಗಿರುವಾಗ, ಕೋಮಲ್ ಎಲ್ಲಿ ಎಂದು ಹುಡುಕುತ್ತಿದ್ದವರಿಗೆ ಈಗ ಕೋಮಲ್ ಕಮ್ ಬ್ಯಾಕ್ ಮಾಡಿದ್ದಾರೆ. ವಾಪಸ್ ಬಂದಿರುವ ತಮ್ಮನಿಗೆ ಅಣ್ಣ ಜಗ್ಗೇಶ್ ಆಶೀರ್ವಾದ ಸಿಕ್ಕಿದೆ.
'ಕೆಂಪೇಗೌಡ 2' ಸಿನಿಮಾ ಅಪ್ ಡೇಟ್ಸ್
ಕೋಮಲ್ 'ಕೆಂಪೇಗೌಡ 2' ಹೆಸರಿನ ಸಿನಿಮಾ ಮಾಡುತ್ತಿದ್ದರು. ಅದೇ ರೀತಿ ಸಿನಿಮಾದ ಒಂದು ಟೀಸರ್ ಕೂಡ ಬಂದಿತ್ತು. ಆದರೆ, ವರ್ಷಗಳು ಕಳೆದರು ಆ ಸಿನಿಮಾ ಏನಾಗುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ. ಹೀಗಿರುವಾಗ, 'ಕೆಂಪೇಗೌಡ 2' ಚಿತ್ರದ ಅಪ್ ಡೇಟ್ಸ್ ಈಗ ಬಂದಿದೆ.
ನಾಳೆ 'ಕೆಂಪೇಗೌಡ 2' ಟ್ರೇಲರ್
ಕೋಮಲ್ ಅಭಿನಯದ 'ಕೆಂಪೇಗೌಡ 2' ಸಿನಿಮಾದ ಟ್ರೇಲರ್ ನಾಳೆ ಬಿಡುಗಡೆಯಾಗುತ್ತಿದೆ. ಬೆಳಗ್ಗೆ 9 ಗಂಟೆಗೆ ಯೂ ಟ್ಯೂಬ್ ನಲ್ಲಿ ಟ್ರೇಲರ್ ರಿಲೀಸ್ ಆಗುತ್ತಿದೆ. ಈ ಮೂಲಕ ಮತ್ತೆ ಕೋಮಲ್ ತಮ್ಮ ಇರುವಿಕೆಯನ್ನು ಸಾಭೀತು ಮಾಡುತ್ತಿದ್ದಾರೆ.
'ಕೆಂಪೇಗೌಡ-2' ಟ್ರೈಲರ್ ರಿಲೀಸ್: ಸುದೀಪ್ ಫ್ಯಾನ್ಸ್ ಗೆ ಶಾಕ್!
|
ಅಣ್ಣನ ಆರ್ಶೀವಾದ
ತಮ್ಮನ ಸಿನಿಮಾ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ''ಕೆಂಪೇಗೌಡ 2' ಸ್ವಮೇಕ್ ಚಿತ್ರ. ಕೋಮಲ್ 2 ವರ್ಷದ ಶ್ರಮ ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ಅನಾವರಣ.
ಒಬ್ಬ ಅಣ್ಣನಾಗಿ ಈ ಚಿತ್ರ ನೋಡಿ ಹೃದಯ ಉಬ್ಬಿತು. ಹರಸಿ ಹಾರೈಸಿದರೆ ಸ್ವಾಭಿಮಾನದಿಂದ ಕನ್ನಡಿಗರು ಇಂದಿನ ಯುವ ಪೀಳಿಗೆಯನ್ನ ರಾಷ್ಟ್ರ ತಿರುಗಿ ನೋಡುವ ಕೃತಿ ನೀಡುತ್ತಾರೆ..ಶುಭಮಸ್ತು" ಎಂದು ಶುಭ ಹಾರೈಸಿದ್ದಾರೆ.
ಶಂಕರ್ ಗೌಡ ನಿರ್ದೇಶನ
'ಕೆಂಪೇಗೌಡ' ಸಿನಿಮಾದಲ್ಲಿ ನಟ ಸುದೀಪ್ ಕಾಣಿಸಿಕೊಂಡಿದ್ದರು. ಈ ಸಿನಿಮಾವನ್ನು ಶಂಕರ್ ಗೌಡ ನಿರ್ಮಾಣ ಮಾಡಿದ್ದರು. ಆದರೆ, ಈಗ ಶಂಕರ್ ಗೌಡ 'ಕೆಂಪೇಗೌಡ 2' ಚಿತ್ರವನ್ನು ತಾವೇ ನಿರ್ದೇಶನ ಮಾಡುತ್ತಿದ್ದಾರೆ. ವಿನೋದ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ಕೋಮಲ್ ಪೊಲೀಸ್ ಪಾತ್ರ ಮಾಡುತ್ತಿದ್ದಾರೆ.
ಸಲ್ಮಾನ್ ಮುಂದೆ ಕನ್ನಡದ 'ಕೆಂಪೇಗೌಡ' ಚಿತ್ರದ ಬಗ್ಗೆ ಮಾತನಾಡಿದ ಶ್ರೀಶಾಂತ್.!