ಪಕ್ಕಾ ಆಯ್ತು 'ಕೆಂಡಸಂಪಿಗೆ' ನಾಯಕನ 2ನೇ ಚಿತ್ರ
ಮೊನ್ನೆ ಮೊನ್ನೆಯಷ್ಟೇ 'ಕೆಂಡಸಂಪಿಗೆ' ನಾಯಕ ವಿಕ್ಕಿಯ ಹೊಸ ಪ್ರಾಜೆಕ್ಟ್ ಬಗ್ಗೆ ನಾವೇ ಹೇಳಿದ್ವಿ. 'ಅಲೆಮಾರಿ' ಖ್ಯಾತಿಯ ನಿರ್ದೇಶಕ ಸಂತು ಜೊತೆ ತಮ್ಮ ಎರಡನೇ ಸಿನಿಮಾ ಮಾಡಲಿದ್ದಾರೆ ಎಂಬುದನ್ನ ಖಚಿತಪಡಿಸಿದ್ವಿ. ಆದ್ರೆ, ಅದು ಇನ್ನೂ ಮಾತುಕತೆಯ ಹಂತದಲ್ಲಿತ್ತು. ಇದೀಗ ಈ ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸಿನಿಮಾ ಶುರು ಮಾಡಲಿದ್ದಾರಂತೆ.
'ಡವ್' ಚಿತ್ರದ ನಂತರ ಬೇರೆ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿದ್ದ ನಿರ್ದೇಶಕ ಸಂತು, ಮೊದಲು ರೋರಿಂಗ್ ಸ್ಟಾರ್ ಶ್ರೀಮುರುಳಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿತ್ತು. ಅದು ಇನ್ನು ಮಾತುಕತೆಯ ಹಂತದಲ್ಲಿದ್ದು, ಈ ಮಧ್ಯೆ 'ಕೆಂಡಸಂಪಿಗೆ' ನಾಯಕ ವಿಕ್ಕಿ ಜೊತೆ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ.['ಕೆಂಡಸಂಪಿಗೆ' ನಾಯಕನ ಹೊಸ ಚಿತ್ರಕ್ಕೆ ಡೈರೆಕ್ಟರ್ ಯಾರು ಗೊತ್ತಾ?]

ಇನ್ನೂ ಈ ಚಿತ್ರವನ್ನ ಮುತ್ತಪ್ಪ ರೈ ಬ್ಯಾನರ್ ಅಡಿಯಲ್ಲಿ, 'ಜಾನ್ ಜಾನಿ ಜನಾರ್ಧನ್' ಚಿತ್ರದ ನಿರ್ಮಾಪಕರೊಬ್ಬರು ನಿರ್ಮಾಣ ಮಾಡುತ್ತಿದ್ದಾರೆ.

ಸದ್ಯ, ವಿಕ್ಕಿ ಹಾಗೂ ಸಂತು ಕಾಂಬಿನೇಷನ್ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಈ ಚಿತ್ರದ ಟೈಟಲ್ ಏನೂ ? ಚಿತ್ರದ ಕಥೆ ಏನು? ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಉಳಿದ ಕಲಾವಿದರ ಆಯ್ಕೆ ಮುಗಿಯುತ್ತಿದ್ದಂತೆ ಶೂಟಿಂಗ್ ಶುರು ಮಾಡಲಿದೆಯಂತೆ ಚಿತ್ರತಂಡ.


Click it and Unblock the Notifications











