Don't Miss!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕೆಂಡಸಂಪಿಗೆ' ನಾಯಕನ ಹೊಸ ಚಿತ್ರಕ್ಕೆ ಡೈರೆಕ್ಟರ್ ಯಾರು ಗೊತ್ತಾ?
'ಕೆಂಡಸಂಪಿಗೆ' ಚಿತ್ರದ ನಂತರ ನಾಯಕ ನಟ ವಿಕ್ಕಿ ಎಲ್ಲೂ ಕಾಣ್ತನೇ ಇಲ್ವಲ್ಲ ಅಂತ ಯೋಚನೆ ಮಾಡ್ತಿದ್ದವರಿಗೆ ಇಲ್ಲೊಂದು ಗುಡ್ ನ್ಯೂಸ್ ಸಿಕ್ಕಿದೆ.
ಹೌದು, 'ಕೆಂಡಸಂಪಿಗೆ' ನಾಯಕ ವಿಕ್ಕಿ ಸದ್ದಿಲ್ಲದೆ ಹೊಸ ಪ್ರಾಜೆಕ್ಟ್ ವೊಂದನ್ನ ಶುರು ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಮಾತುಕತೆ ಕೂಡ ಮುಗಿಸಿದ್ದು, ಕನ್ನಡದ ಯಶಸ್ವಿ ನಿರ್ದೇಶಕನ ಸಿನಿಮಾವನ್ನ ಒಪ್ಪಿಕೊಂಡಿದ್ದಾರಂತೆ.['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']
ವಿಕ್ಕಿ ಅಭಿನಯಿಸಲಿರುವ ಹೊಸ ಸಿನಿಮಾವನ್ನ ನಿರ್ದೇಶನ ಮಾಡಲಿರುವುದು 'ಅಲೆಮಾರಿ' ಖ್ಯಾತಿಯ ನಿರ್ದೇಶಕ ಸಂತು. ಸದ್ಯ, 'ಡವ್' ಚಿತ್ರದ ನಂತರ ಬೇರೆ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿರುವ ಸಂತು, ರೋರಿಂಗ್ ಸ್ಟಾರ್ ಶ್ರೀಮುರುಳಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿತ್ತು. ಆದ್ರೆ, ಅದು ಇನ್ನು ಮಾತುಕತೆಯ ಹಂತದಲ್ಲಿದ್ದು, ಈ ಮಧ್ಯೆ 'ಕೆಂಡಸಂಪಿಗೆ' ನಾಯಕ ವಿಕ್ಕಿ ಜೊತೆ ಸಿನಿಮಾ ಶುರು ಮಾಡುವ ತಯಾರಿ ನಡೆಸಿದ್ದಾರಂತೆ.[ದುನಿಯಾ ಸೂರಿ 'ಕೆಂಡಸಂಪಿಗೆ'ಗೆ ಸಿಕ್ತಾ ವಿಮರ್ಶಕರ ಜೈಕಾರ?]
ದುನಿಯಾ ಸೂರಿ ನಿರ್ದೇಶನ ಮಾಡಿದ್ದ 'ಕೆಂಡಸಂಪಿಗೆ', ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದಲ್ಲದೆ, ಶತದಿನ ಪೂರೈಸಿತ್ತು. ಅದಾದ ನಂತರ ಚಿತ್ರದ ನಟಿ ಮಾನ್ವಿತ ಹರೀಶ್ ದೊಡ್ಡ ಸ್ಟಾರ್ ಸಿನಿಮಾಗಳಲ್ಲಿ ಬ್ಯುಸಿಯಾದ್ರು. ಆದ್ರೆ, ವಿಕ್ಕಿ ಯಾಕೋ ಸೈಲಾಂಟ್ ಆಗಿದ್ರು. ಇದೀಗ, ಒಂದು ವಿರಾಮದ ನಂತರ ನಟ ವಿಕ್ಕಿ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಬ್ಯುಸಿಯಾಗುತ್ತಿದ್ದಾರೆ.
'ಅಲೆಮಾರಿ' ಸಂತು ಹಾಗೂ ಕೆಂಡಸಂಪಿಗೆ ನಟ ವಿಕ್ಕಿ ಕಾಂಬಿನೇಷನ್ ನ ಚಿತ್ರದ ಕಥೆ ಏನು? ಟೈಟಲ್ ಏನೂ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಸದ್ಯ, ಮಾತುಕತೆ ಮುಗಿಸಿರುವ ಚಿತ್ರತಂಡ ಆದಷ್ಟೂ ಬೇಗ ಅಧೀಕೃತವಾಗಿ ಘೋಷಣೆ ಮಾಡಲಿದೆ.