Don't Miss!
- News ಮೋದಿ, ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬರುತ್ತಾರೆ: ಸಿದ್ದರಾಮಯ್ಯ ಗರಂ
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡೈರೆಕ್ಟರ್ ಆದ 'ಕೆಜಿಎಫ್' ಡೈಲಾಗ್ ರೈಟರ್ ಚಂದ್ರಮೌಳಿ
'ಕೆಜಿಎಫ್' ಸಿನಿಮಾಗೆ ಪವರ್ ಫುಲ್ ಪದಗಳನ್ನು ತುಂಬಿಸಿದವರು ಸಂಭಾಷಣೆಕಾರ ಚಂದ್ರಮೌಳಿ. ಇಷ್ಟು ದಿನ ಡೈಲಾಗ್ ರೈಟರ್ ಆಗಿ ಹಾಗೂ ನಿರ್ದೇಶಕರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು ಈಗ ತಾವೇ ಒಂದು ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.
ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿರುವ ಚಂದ್ರಮೌಳಿ ಸಿನಿಮಾದ ವಿವರ ಹಂಚಿಕೊಂಡಿದ್ದಾರೆ. ಇದೇ ತಿಂಗಳ 18 ರಂದು ನಂದಿನಿ ಲೇ ಔಟ್ ನಲ್ಲಿರುವ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಅವರ ಮೊದಲ ಸಿನಿಮಾದ ಮುಹೂರ್ತ ನಡೆಯಲಿದೆ.
ಹೊಸ
ಹುಡುಗ
ರಾಮ್
ಚಿತ್ರದ
ನಾಯಕನಾಗಿದ್ದಾರೆ.
ಹೈದರಾಬಾದ್
ಹುಡುಗಿ
ಡಿಂಪಲ್
ಹಯಾತಿ
ಚಿತ್ರದ
ನಾಯಕಿ.
ಇದು
ಅವರ
ಮೂರನೇ
ಸಿನಿಮಾವಾಗಿದ್ದು,
ಕನ್ನಡದಲ್ಲಿ
ಮೊದಲ
ಚಿತ್ರ.
ಉಳಿದಂತೆ,
ನಟ
ಸಾಯಿ
ಕುಮಾರ್,
ಕಾಮಿಡಿ
ಕಿಲಾಡಿ
ಜಿಜಿ,
ರಘು,
ಅಶೋಕ್
ನಟಿಸುತ್ತಿದ್ದಾರೆ.
ವಿಶೇಷ ಅಂದರೆ, ಈ ಸಿನಿಮಾದ ಮೂಲಕ ತೆಲುಗಿನ 'ಅರ್ಜುನ್ ರೆಡ್ಡಿ' ಮ್ಯೂಸಿಕ್ ಡೈರೆಕ್ಟರ್ ರಾಧನ್ ಕನ್ನಡಕ್ಕೆ ಬರುತ್ತಿದ್ದಾರೆ. ಶ್ರೀಕಾಂತ್ (ಕೆಜಿಎಫ್) ಸಂಕಲನ, ವಿಕ್ರಮ್ ಮೊರ್ (ಕೆಜಿಎಫ್) ಸಾಹಸ ನಿರ್ದೇಶನ, ನೃತ್ಯ ನಿರ್ದೇಶನ ಮೋಹನ್ (ಕೆಜಿಎಫ್) ಮಾಡುತ್ತಿದ್ದಾರೆ. 'ದಿ ವಿಲನ್' ಹಾಗೂ 'ಭರಾಟೆ' ಸಿನಿಮಾಗಳ ಛಾಯಾಗ್ರಾಹಕ ಗಿರೀಶ್ ಈ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ.
ಈ ಹಿಂದೆ 'ಮಾಸ್ಟರ್ ಪೀಸ್', 'ರಥಾವರ', 'ಕೆಜಿಎಫ್' ಸೇರಿದಂತೆ ಇತರ ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಚಂದ್ರಮೌಳಿ ಈಗ ಸ್ವಾತಂತ್ರ್ಯ ನಿರ್ದೇಶಕರಾಗಿದ್ದಾರೆ. ಸಿನಿಮಾದ ಟೈಟಲ್ ಸದ್ಯದಲ್ಲಿಯೇ ರಿವೀಲ್ ಆಗಲಿದೆ.