Don't Miss!
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಳೆ ಕೆಜಿಎಫ್ ರಿಲೀಸ್ ಆಗೇ ಆಗುತ್ತೆ: ನಿರ್ಮಾಪಕ ವಿಜಯ್
ಕೆಜಿಎಫ್ ಚಿತ್ರ ನಾಳೆ ಬಿಡುಗಡೆಯಾಗಬಾರದು ಎಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆ ನೀಡಿದೆ. ವೆಂಕಟೇಶ್ ಎಂಬುವವರು ಚಿತ್ರಕ್ಕೆ ತಡೆ ತಂದಿದ್ದು, ನಾಳೆ ಸಿನಿಮಾ ಬಿಡುಗಡೆ ಬಹುತೇಕ ಅನುಮಾನ ಎಂದು ಹೇಳಲಾಗ್ತಿದೆ.
ಈ ಬಗ್ಗೆ ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಸ್ಪಷ್ಟನೆ ನೀಡಿದ್ದು, ''ನಾಳೆ ಸಿನಿಮಾ ರಿಲೀಸ್ ಆಗೇ ಆಗುತ್ತೆ, ಯಾವುದೇ ಸಂಶಯ ಬೇಡ'' ಎಂದು ಸ್ಪಷ್ಟಪಡಿಸಿದ್ದಾರೆ.
'ಕೆಜಿಎಫ್' ಬಿಡುಗಡೆಗೆ ಬ್ರೇಕ್ ಹಾಕಿದ ವೆಂಕಟೇಶ್ ಯಾರು? ಬೇಡಿಕೆ ಏನು?
''ಕೋರ್ಟ್ ಆದೇಶದ ಬಗ್ಗೆ ನಾನು ಟಿವಿಯಲ್ಲಿ ನೋಡಿದ್ದು, ನನಗೆ ಯಾವುದೇ ನೋಟಿಸ್ ಬಂದಿಲ್ಲ. ನಾವು ಈಗಾಗಲೇ ವಿತರಕರಿಗೆ ಹೇಳಿ ಆಗಿದೆ. ನಮಗೆ ಯಾವುದೇ ಆತಂಕವಿಲ್ಲ'' ಎಂದಿದ್ದಾರೆ. ಮುಂದೆ ಓದಿ.
'ತಂಗಂ'ಗೂ ನಮಗೂ ಸಂಬಂಧವಿಲ್ಲ
ಕೆಜಿಎಫ್ ಚಿತ್ರದಲ್ಲಿ ರೌಡಿ ತಂಗಂ ಕುರಿತಾದ ಯಾವುದೇ ಸಂಬಂಧವಿಲ್ಲ. ನಾನು ಈ ಬಗ್ಗೆ ಯಾರ ಜೊತೆಯೂ ಮಾತನಾಡಿಲ್ಲ. ಇದು ರೌಡಿ ತಂಗಂ ಕಥೆಯೂ ಅಲ್ಲ. ಇಡೀ ವಿಶ್ವದಲ್ಲಿ ಸಿನಿಮಾ ರಿಲೀಸ್ ಆಗುತ್ತೆ'' ಎಂದು ವಿಜಯ್ ಕಿರಗಂದೂರ್ ಸ್ಪಷ್ಟಪಡಿಸಿದ್ದಾರೆ.
'ಕೆ.ಜಿ.ಎಫ್' ಬಿಡುಗಡೆ ಆಗುತ್ತಾ? ಇಲ್ವಾ? ಅಭಿಮಾನಿಗಳಲ್ಲಿ ಗೊಂದಲ!
ವೆಂಕಟೇಶ್ ಯಾರು ಎಂದು ಗೊತ್ತಿಲ್ಲ
ವೆಂಕಟೇಶ್ ಅವರ ವಕೀಲರು ಹೇಳಿರುವ ಪ್ರಕಾರ, ಕೆಜಿಎಫ ಚಿತ್ರತಂಡದ ಜೊತೆ ಈ ಬಗ್ಗೆ ವರ್ಷಗಳ ಹಿಂದೆಯೇ ಮಾತನಾಡಿದ್ವಿ. ಆದ್ರೆ, ಅವರು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ ಎಂದು ಹೇಳಿದ್ದರು. ಆದ್ರೆ, ವಿಜಯ್ ಕಿರಗಂದೂರ್ ಈ ಬಗ್ಗೆ ಮಾತನಾಡಿದ್ದು, ''ವೆಂಕಟೇಶ್ ಯಾರು ಎಂದು ಗೊತ್ತೇ ಇಲ್ಲ. ನಮ್ಮ ಬಳಿ ಯಾರು ಮಾತನಾಡಿಲ್ಲ'' ಎಂದು ಹೇಳಿದ್ದಾರೆ.
ಹೈ ಕೋರ್ಟ್ ಗೆ ಹೋಗುವ ಸಾಧ್ಯತೆ
ಸದ್ಯದ ಮಾಹಿತಿ ಪ್ರಕಾರ, ಸಿಟಿ ಸಿವಿಲ್ ಕೋರ್ಟ್ ನೀಡಿರುವ ಆದೇಶವನ್ನ ಪ್ರಶ್ನಿಸಿ, ಕೆಜಿಎಫ್ ಚಿತ್ರತಂಡ ಇಂದು ತಡರಾತ್ರಿಯೇ ಹೈಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದಾರಂತೆ. ನಾಳೆ ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್ ನಿಲ್ಲಬಾರದು ಎಂಬ ಉದ್ದೇಶದಲ್ಲಿ ಚಿತ್ರತಂಡವಿದೆ.
'ಕೆಜಿಎಫ್' ರಿಲೀಸ್ ಗೆ ತಡೆ: ಸಿವಿಲ್ ಕೋರ್ಟ್ ಆದೇಶ
ಯಾರೂ ಆತಂಕಪಡಬೇಕಿಲ್ಲ
ಜನರು ಟಿಕೆಟ್ ಎಲ್ಲ ಬುಕ್ ಮಾಡಿದ್ದಾರೆ. ಯಾರೂ ಆತಂಕ ಪಡುವಂತಿಲ್ಲ. ಯಶ್ ಬಳಿಯೂ ನಾನು ಮಾತನಾಡಿದೆ. ಎಲ್ಲವೂ ಓಕೆ. ಸಿನಿಮಾ ನಾಳೆ ನೋಡಬಹುದು ಎಂದು ನಿರ್ಮಾಪಕರು ಖಚಿತ ಪಡಿಸಿದ್ದಾರೆ.