Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತದಾನ ಮಾಡದೆ ಇರುವವರಿಗೆ ಕಿಚ್ಚನ ಬುದ್ಧಿ ಮಾತು
ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಚಿತ್ರರಂಗದ ಬಹುತೇಕರು ಇಂದು ಮತದಾನ ಮಾಡಿದ್ದಾರೆ.
ಜೆ ಪಿ ನಗರದಲ್ಲಿ ಮತದಾನ ಮಾಡಿದ ನಟ ಸುದೀಪ್ ''ಮತದಾನ ಮಾಡುವುದು ನನ್ನ ಕರ್ತವ್ಯ. ನಾವು ಅದನ್ನು ಮಾಡಲೇಬೇಕು. ಅದರಿಂದ ನಾವು ದೂರ ಹೋಗಲು ಆಗುವುದಿಲ್ಲ. ಎಲ್ಲರಿಗೂ ಕೆಲಸ ಇದ್ದೆ ಇರುತ್ತದೆ. ಅದನ್ನು ಬಿಟ್ಟು ಮತದಾನ ಮಾಡಬೇಕು.'' ಎಂದರು.
RR ನಗರದಲ್ಲಿ ವೋಟ್ ಮಾಡಿದ 'ಜೋಡೆತ್ತು' ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ
''ಒಬ್ಬ ಒಳ್ಳೆಯ ವ್ಯಕ್ತಿ ಅಧಿಕಾರಕ್ಕೆ ಬಂದರೆ, ಒಳ್ಳೆಯದು ಆಗುತ್ತದೆ ಎಂಬ ಕಾರಣಕ್ಕೆ ಮತ ಹಾಕಬೇಕು. ಸ್ಟಾರ್ ಗಿರಿ ಅಲ್ಲ, ಒಬ್ಬ ಸಾಮಾನ್ಯನಾಗಿ ಮತ ಹಾಕಿದ್ದೇನೆ.'' ಎಂದು ಮತದಾನ ಮಹತ್ವ ತಿಳಿಸಿದರು.
ಮತದಾನ ನಿರ್ಲಕ್ಷಾ ಮಾಡುವವರ ಕುರಿತು ''ಯಾರಾದರೂ ಇನ್ನು ಮತದಾನ ಮಾಡಿಲ್ಲ ಅಂದರೆ ಅದರ ಬಗ್ಗೆ ಹೇಳುವ ವಿಷಯ ಅಲ್ಲ. ಅದು ಅವರ ಜವಾಬ್ದಾರಿ. ಮತದಾನ ಮಾಡದೆ ಮನೆಯಲ್ಲಿ ಇದ್ದರೆ ಚೆನ್ನಾಗಿ ಇರಲಿ'' ಎಂದು ಮಾತಿನ ಮೂಲಕ ಪೆಟ್ಟು ನೀಡಿದ್ದಾರೆ ಸುದೀಪ್.
ಇಂದು ಜೆಪಿನಗರದ ಮತಗಟ್ಟೆಯಲ್ಲಿ ಮತದಾನ ಮಾಡಿದ ನಮ್ಮ ಕಿಚ್ಚ ಸುದೀಪ್ ಅಣ್ಣ😍@KicchaSudeep #Karnataka #Elections2019 #LokSabhaElections2019 pic.twitter.com/v9CTanEJIr
— Kicchana Hudugru (@KicchanHudugru) April 18, 2019
ನಟ ಸುದೀಪ್, ದರ್ಶನ್, ಶಿವರಾಜ್ ಕುಮಾರ್, ಜಗ್ಗೇಶ್, ಅಜಯ್ ರಾವ್, ಪ್ರೇಮ್, ರಮೇಶ್, ಅರ್ಜುನ್ ಸರ್ಜಾ, ಗಣೇಶ್, ಉಪೇಂದ್ರ, ಧನಂಜಯ್ ಸೇರಿದಂತೆ ಬಹುತೇಕರು ವೋಟ್ ಮಾಡಿದ್ದಾರೆ.