twitter
    For Quick Alerts
    ALLOW NOTIFICATIONS  
    For Daily Alerts

    ಡಾ.ವಿಷ್ಣು ಸ್ಮಾರಕ ಸಂಬಂಧ ಸಿಎಂ ಅವರನ್ನ ಭೇಟಿ ಮಾಡಿದ ಸುದೀಪ್

    By Bharath Kumar
    |

    Recommended Video

    ಸಿ ಎಂ ಸಿದ್ದರಾಮಯ್ಯನವರನ್ನ ಭೇಟಿ ಮಾಡಿದ ನಟ ಸುದೀಪ್ | Filmibeat Kannada

    ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಇಂದು (ಡಿಸೆಂಬರ್ 11) ಬೆಳಿಗ್ಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಧಿಡೀರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ಸಿಎಂ ಅವರ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿಯನ್ನ ಭೇಟಿ ಮಾಡಿದ ಸುದೀಪ್, ಡಾ ವಿಷ್ಣುವರ್ಧನ್ ಅವರ ಸ್ಮಾರಕ ವಿಚಾರಕ್ಕೆ ಸಂಬಂಧಿಸಿದಂತೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದಿದ್ದಾರೆ.

    'ಹೃದಯವಂತ' ಡಾ.ವಿಷ್ಣುವರ್ಧನ್ ಬಗ್ಗೆ ಸುದೀಪ್ ಮನದ ಮಾತು'ಹೃದಯವಂತ' ಡಾ.ವಿಷ್ಣುವರ್ಧನ್ ಬಗ್ಗೆ ಸುದೀಪ್ ಮನದ ಮಾತು

    kiccha Sudeep met CM Siddaramaiah

    ಈಗಾಗಲೇ ಮೈಸೂರಿನಲ್ಲಿ ಸರ್ಕಾರ ಗುರುತಿಸಿರುವ ಸ್ಥಳದಲ್ಲಿಯೇ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಲಿ. ಆದ್ರೆ, ಅಂತ್ಯ ಸಂಸ್ಕಾರವಾದ ಅಭಿಮಾನ್ ಸ್ಟುಡಿಯೋದಲ್ಲಿ 1 ಎಕೆರೆ ಜಾಗವನ್ನ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ಎಂದು ಘೋಷಿಸಿ ಎಂದು ಮನವಿ ಮಾಡಿದ್ದಾರೆ.

    'ವಿಷ್ಣುವರ್ಧನ್ ಅವರ ಸ್ಥಾನ ತುಂಬಿದ ನಟ ಸುದೀಪ್' ಅಂದಿದ್ದು ಯಾರು?'ವಿಷ್ಣುವರ್ಧನ್ ಅವರ ಸ್ಥಾನ ತುಂಬಿದ ನಟ ಸುದೀಪ್' ಅಂದಿದ್ದು ಯಾರು?

    ಒಂದು ವೇಳೆ ಎರಡು ಕಡೆ ಅಭಿವೃದ್ದಿ ಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲವೆಂದ್ರೆ ಒಂದು ಎಕರೆ ಜಾಗವನ್ನ ಮಾತ್ರವನ್ನ ನೀಡಿ, ಆ ಸ್ಥಳವನ್ನ ಅಭಿಮಾನಿಗಳು ಅಭಿವೃದ್ದಿ ಪಡಿಸುತ್ತೇವೆ ಎಂದು ಸುದೀಪ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಕೋರಿಕೆ ಇಟ್ಟಿದ್ದಾರೆ. ಈ ವೇಳೆ ಡಾ ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷರು ವೀರಕಪುತ್ರ ಶ್ರೀನಿವಾಸ ಅವರ ಕೂಡ ಭಾಗಿಯಾಗಿದ್ದರು.

    kiccha Sudeep met CM Siddaramaiah

    English summary
    Kannada Actor Sudeep met chief minister Siddaramaiah at the CM residence.
    Monday, December 11, 2017, 13:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X