Don't Miss!
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- News ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೆ ಜನ ಒಪ್ಪಲ್ಲ: ಡಿ ಕೆ ಸುರೇಶ್ ಹೀಗೆ ಹೇಳಿದ್ದು ಯಾರಿಗೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನಸ್ತಾಪ ಮರೆತು ಒಂದಾದ ಸುದೀಪ್ ದಂಪತಿಗೆ ಶುಭ ಹಾರೈಸಿದ ಜಗ್ಗೇಶ್
ಎರಡು ವರ್ಷಗಳ ಹಿಂದೆ ವಿಚ್ಛೇದನ ಅರ್ಜಿ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನ ನಟ ಸುದೀಪ್ ಹಾಗೂ ಪತ್ನಿ ಪ್ರಿಯಾ ವಾಪಸ್ ಪಡೆದಿದ್ದಾರೆ. ಆ ಮೂಲಕ, ಸುದೀಪ್-ಪ್ರಿಯಾ ವಿಚ್ಛೇದನ ಪ್ರಕರಣ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಂದು ಸುಖಾಂತ್ಯ ಕಂಡಿದೆ.
ವಿಚ್ಛೇದನದ ಅರ್ಜಿಯನ್ನ ವಾಪಸ್ ಪಡೆದ ಸಂಗತಿಯನ್ನ ಸುದೀಪ್ ಪರ ವಕೀಲ ಖಚಿತ ಪಡಿಸುತ್ತಿದ್ದಂತೆಯೇ, ನಿಮ್ಮ 'ಒನ್ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ' ಈ ಕುರಿತು ''ಮಗಳಿಗಾಗಿ ಒಂದಾದ ಸುದೀಪ್ ದಂಪತಿ: ಕಿಚ್ಚನ ಫ್ಯಾನ್ಸ್ ಗೆ ಇದಕ್ಕಿಂತ ಸಿಹಿ ಸುದ್ದಿ ಬೇಕಾ.?!'' ಶೀರ್ಷಿಕೆ ಅಡಿ ವಿವರವಾಗಿ ವರದಿ ಪ್ರಕಟ ಮಾಡಿತ್ತು.
ಈ ವರದಿ ಟ್ವಿಟ್ಟರ್ ಮೂಲಕ ನಟ ಜಗ್ಗೇಶ್ ರವರಿಗೆ ತಲುಪಿದ ಹಾಗೆ, ಟ್ವಿಟ್ಟರ್ ಮೂಲಕವೇ ಸುದೀಪ್ ದಂಪತಿಗೆ ಶುಭ ಹಾರೈಸಿದ್ದಾರೆ.
ಸುಧಿ ನಿನ್ನ ಈನಿರ್ಣಯ ನನ್ನ ಹೃದಯತುಂಬಿ ಬಂತು!ವಿಶ್ವದಲ್ಲಿ ಇನ್ನುಮುಂದೆ ಯಾವಕಷ್ಟವು ನಿನ್ನಬಳಿ ಸುಳಿಯೊಲ್ಲಾ ರಾಯರಆಣೆ.ನೀನು ನನ್ನಶ್ರೇಷ್ಠ ವ್ಯೆಕ್ತಿಯಾಗಿಬಿಟ್ಟೆiloveu https://t.co/zDPoZX6dRB
— ನವರಸನಾಯಕ ಜಗ್ಗೇಶ್ (@Jaggesh2) August 24, 2017
''ಸುದೀಪ್ ನಿನ್ನ ನಿರ್ಣಯ ನನ್ನ ಹೃದಯ ತುಂಬಿ ಬಂತು. ವಿಶ್ವದಲ್ಲಿ ಇನ್ನು ಮುಂದೆ ಯಾವ ಕಷ್ಟವೂ ನಿನ್ನ ಬಳಿ ಸುಳಿಯಲ್ಲ. ರಾಯರ ಆಣೆ. ನೀನು ನನ್ನ ಶ್ರೇಷ್ಠ ವ್ಯಕ್ತಿಯಾಗಿಬಿಟ್ಟೆ. ಐ ಲವ್ ಯು'' ಎಂದು 'ಒನ್ಇಂಡಿಯಾ ಕನ್ನಡ' ಟ್ವೀಟ್ ಗೆ ರೀಟ್ವೀಟ್ ಮಾಡುವ ಮೂಲಕ ಕಿಚ್ಚ ಸುದೀಪ್ ರವರಿಗೆ ಜಗ್ಗೇಶ್ ಅಭಿನಂದಿಸಿದ್ದಾರೆ.
ಮನಸ್ತಾಪ ಮರೆತು ಸುದೀಪ್ ದಂಪತಿ ಒಂದಾಗಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ. ಸುದೀಪ್ ದಂಪತಿ ಸದಾ ನಗುನಗುತ್ತಿರಲಿ ಎನ್ನುವುದೇ ನಮ್ಮ ಆಶಯ ಕೂಡ.