'ವಿಷ್ಣು ಸ್ಮಾರಕ' ಹೋರಾಟದಲ್ಲಿ ಕಿಚ್ಚನಿಗೆ ಮೊದಲ ಗೆಲುವು
ಕನ್ನಡ ಸಿನಿಮಾರಂಗದ ಸಾಹಸಸಿಂಹ ವಿಷ್ಣುವರ್ಧನ್ ಪುಣ್ಯಭೂಮಿ ವಿಚಾರವಾಗಿ ಒಂದು ವಾರದ ಹಿಂದೆಯಷ್ಟೇ ಕಿಚ್ಚ ಸುದೀಪ್ ಸಿ ಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಸ್ಮಾರಕ ನಿರ್ಮಾಣ ಮಾಡಲು ಇರುವ ಸಮಸ್ಯೆಗಳನ್ನು ಹಾಗೂ ಪರ್ಯಾಯವಾಗಿ ಏನು ಮಾಡಬಹುದು ಎನ್ನುವ ವಿಚಾರಗಳನ್ನ ಒಟ್ಟಿಗೆ ಕೂತು ಚರ್ಚೆ ಮಾಡಿದ್ದರು.
ಪುಣ್ಯಭೂಮಿ ಮಾಡಲು ಅವಕಾಶ ಕಲ್ಪಿಸಿ ಸ್ಮಾರಕವನ್ನ ಮೈಸೂರಿನಲ್ಲೇ ಮಾಡಿ ಎಂದು ಬೇಡಿಕೆ ಇಟ್ಟಿದ್ದ ಕಿಚ್ಚನ ಮನವಿಗೆ ಮೊದಲ ಗೆಲವು ಸಿಕ್ಕಿದೆ. ಮುಖ್ಯಮಂತ್ರಿಗಳ ಕಛೇರಿಯಿಂದ 'ವಿಷ್ಣು ಸ್ಮಾರಕ'ದ ವಿಚಾರ ನೀಡಿರುವ ಮನವಿಯನ್ನ ಪರಿಶೀಲಿಸಿ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಉತ್ತರವನ್ನ ನೀಡಿದ್ದಾರೆ.

ಮುಖ್ಯಮಂತ್ರಿಗಳ ಕಛೇರಿಯಿಂದ ಬಂದಿರುವ ಪತ್ರದ ಪ್ರತಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿರುವ ಕಿಚ್ಚ ಸುದೀಪ್ ಇದು ನಿಜಕ್ಕೂ ನಮ್ಮೆಲ್ಲರಿಗೂ ವಿಶೇಷವಾದ ಕ್ಷಣವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇಡೀ ಕನ್ನಡ ಚಿತ್ರರಂಗವೇ ಒಟ್ಟಿಗೆ ನಿಂತು ಹೋರಾಟ ಮಾಡುತ್ತಿರುವ 'ವಿಷ್ಣು ಪುಣ್ಯಭೂಮಿ' ವಿಚಾರದಲ್ಲಿ ಕಿಚ್ಚನಿಗೆ ಮೊದಲನೆಯ ಜಯ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ಸರ್ಕಾರ ಯಾವ ರೀತಿಯಲ್ಲಿ ಈ ಕೆಲಸವನ್ನ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.



Click it and Unblock the Notifications











