twitter
    For Quick Alerts
    ALLOW NOTIFICATIONS  
    For Daily Alerts

    'ವಿಷ್ಣು ಸ್ಮಾರಕ' ಹೋರಾಟದಲ್ಲಿ ಕಿಚ್ಚನಿಗೆ ಮೊದಲ ಗೆಲುವು

    By Pavithra
    |

    ಕನ್ನಡ ಸಿನಿಮಾರಂಗದ ಸಾಹಸಸಿಂಹ ವಿಷ್ಣುವರ್ಧನ್ ಪುಣ್ಯಭೂಮಿ ವಿಚಾರವಾಗಿ ಒಂದು ವಾರದ ಹಿಂದೆಯಷ್ಟೇ ಕಿಚ್ಚ ಸುದೀಪ್ ಸಿ ಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಸ್ಮಾರಕ ನಿರ್ಮಾಣ ಮಾಡಲು ಇರುವ ಸಮಸ್ಯೆಗಳನ್ನು ಹಾಗೂ ಪರ್ಯಾಯವಾಗಿ ಏನು ಮಾಡಬಹುದು ಎನ್ನುವ ವಿಚಾರಗಳನ್ನ ಒಟ್ಟಿಗೆ ಕೂತು ಚರ್ಚೆ ಮಾಡಿದ್ದರು.

    ಸುದೀಪ್ ಮೇಲೆ ಭಾರತಿ ವಿಷ್ಣುವರ್ಧನ್ ಅಸಮಾಧಾನಗೊಂಡ್ರಾ?ಸುದೀಪ್ ಮೇಲೆ ಭಾರತಿ ವಿಷ್ಣುವರ್ಧನ್ ಅಸಮಾಧಾನಗೊಂಡ್ರಾ?

    ಪುಣ್ಯಭೂಮಿ ಮಾಡಲು ಅವಕಾಶ ಕಲ್ಪಿಸಿ ಸ್ಮಾರಕವನ್ನ ಮೈಸೂರಿನಲ್ಲೇ ಮಾಡಿ ಎಂದು ಬೇಡಿಕೆ ಇಟ್ಟಿದ್ದ ಕಿಚ್ಚನ ಮನವಿಗೆ ಮೊದಲ ಗೆಲವು ಸಿಕ್ಕಿದೆ. ಮುಖ್ಯಮಂತ್ರಿಗಳ ಕಛೇರಿಯಿಂದ 'ವಿಷ್ಣು ಸ್ಮಾರಕ'ದ ವಿಚಾರ ನೀಡಿರುವ ಮನವಿಯನ್ನ ಪರಿಶೀಲಿಸಿ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಉತ್ತರವನ್ನ ನೀಡಿದ್ದಾರೆ.

    Kiccha Sudeep received by the letter from CM office

    ಸಿದ್ಧರಾಮಯ್ಯ ಭೇಟಿ ಬೆನ್ನಲ್ಲೆ ರಾಜಕೀಯ ಪ್ರವೇಶ ಸುದ್ದಿ ಬಗ್ಗೆ ಸುದೀಪ್ ಮಾತು!ಸಿದ್ಧರಾಮಯ್ಯ ಭೇಟಿ ಬೆನ್ನಲ್ಲೆ ರಾಜಕೀಯ ಪ್ರವೇಶ ಸುದ್ದಿ ಬಗ್ಗೆ ಸುದೀಪ್ ಮಾತು!

    ಮುಖ್ಯಮಂತ್ರಿಗಳ ಕಛೇರಿಯಿಂದ ಬಂದಿರುವ ಪತ್ರದ ಪ್ರತಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿರುವ ಕಿಚ್ಚ ಸುದೀಪ್ ಇದು ನಿಜಕ್ಕೂ ನಮ್ಮೆಲ್ಲರಿಗೂ ವಿಶೇಷವಾದ ಕ್ಷಣವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    Kiccha Sudeep received by the letter from CM office

    ಇಡೀ ಕನ್ನಡ ಚಿತ್ರರಂಗವೇ ಒಟ್ಟಿಗೆ ನಿಂತು ಹೋರಾಟ ಮಾಡುತ್ತಿರುವ 'ವಿಷ್ಣು ಪುಣ್ಯಭೂಮಿ' ವಿಚಾರದಲ್ಲಿ ಕಿಚ್ಚನಿಗೆ ಮೊದಲನೆಯ ಜಯ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ಸರ್ಕಾರ ಯಾವ ರೀತಿಯಲ್ಲಿ ಈ ಕೆಲಸವನ್ನ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

    Kiccha Sudeep received by the letter from CM office

    English summary
    Kannada actor Kiccha Sudeep received by the letter of Vishnuvardhan memorial controversy from CM office, The letter says that we will take action as soon as possible. Sudeep tweet about this.
    Friday, December 22, 2017, 17:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X