ಸುದೀಪ್ ಹುಷಾರಾದರು.! 'ಹೆಬ್ಬುಲಿ' ಶೂಟಿಂಗ್ ಈ ವಾರ ಶುರು.!
ಕಿಚ್ಚ ಸುದೀಪ್ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಗ್ಯಾಸ್ಟ್ರಿಕ್ (ಅಸಿಡಿಟಿ) ಸಮಸ್ಯೆಯಿಂದ ಬಳಲುತ್ತಿದ್ದ ಸುದೀಪ್ ಇದೀಗ ಚೇತರಿಸಿಕೊಂಡಿದ್ದಾರೆ.
ಕಳೆದ ವಾರದಿಂದ ಮನೆಯಲ್ಲೇ ಇದ್ದು ಸಂಪೂರ್ಣ ವಿಶ್ರಾಂತಿ ಪಡೆದಿದ್ದ ಸುದೀಪ್ ಇವಾಗ ಫುಲ್ ಫಿಟ್ ಅಂಡ್ ಫೈನ್.! ಪರಿಣಾಮ ಇದೇ ವಾರ 'ಹೆಬ್ಬುಲಿ' ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಸುದೀಪ್ ಗೆ ಏನಾಗಿತ್ತು.?
ಕೆಲಸದ ಒತ್ತಡದಿಂದಾಗಿ ಸರಿಯಾಗಿ ನಿದ್ದೆ ಇಲ್ಲದೆ, ಊಟ-ತಿಂಡಿ ಮಾಡದ ಸುದೀಪ್ ಗೆ ಗ್ಯಾಸ್ಟ್ರಿಕ್ ಪ್ರಾಬ್ಲಂ ಇತ್ತು. ಕಳೆದ ಶನಿವಾರ ಅತೀವ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ, ಅವರನ್ನ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ['ಹೆಬ್ಬುಲಿ' ಸುದೀಪ್ ಗೆ ಅನಾರೋಗ್ಯ: ಅಪೋಲೋ ಆಸ್ಪತ್ರೆಗೆ ದಾಖಲು]
ಒಂದು ವಾರ ರೆಸ್ಟ್.!
ಚಿಕಿತ್ಸೆ ನಂತರ ಮನೆಯಲ್ಲಿ ರೆಸ್ಟ್ ಮಾಡಿ ಈಗ ಮೊದಲಿನ ಹಾಗೆ ಲವಲವಿಕೆಯಿಂದ ಇರುವ ಸುದೀಪ್ ಟ್ವಿಟ್ಟರ್ ನಲ್ಲೂ ಆಕ್ಟೀವ್ ಆಗಿದ್ದಾರೆ. [ಟ್ವಿಟ್ಟರ್ ನಲ್ಲಿ ಸುದೀಪ್-ರಕ್ಷಿತ್ ಶೆಟ್ಟಿ ಮಧ್ಯೆ ಮಾತಿನ ಸಮರ, ಸಮರ್ಥನೆ.!]
'ಜಿಗರ್ ಥಂಡ' ಚಿತ್ರದ ಪ್ರಮೋಷನ್ಸ್ ಕೆಲಸದಲ್ಲೂ ತೊಡಗಿರುವ ಸುದೀಪ್ ಇದೇ ವಾರದಲ್ಲಿ 'ಗಜಕೇಸರಿ' ಖ್ಯಾತಿಯ ಕೃಷ್ಣ ನಿರ್ದೇಶನದ 'ಹೆಬ್ಬುಲಿ' ಚಿತ್ರದ ಶೂಟಿಂಗ್ ಸ್ಪಾಟ್ ಗೆ ಹಾಜರಾಗುತ್ತಾರೆ.


Click it and Unblock the Notifications











