Don't Miss!
- News ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಮನ್ಸ್ ಜಾರಿ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Exclusive: 'ಬಿಲ್ಲ ರಂಗ ಭಾಷಾ' 2 ಪಾರ್ಟ್ಗಳಲ್ಲಿ ಬರುತ್ತೆ: 'ವಿಕ್ರಾಂತ್ ರೋಣ' ಕಥೆಯೇನು?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. 'ಕೆಜಿಎಫ್ 2', '777 ಚಾರ್ಲಿ' ಬಳಿಕ ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತಾಗಿದೆ. ಈಗ ಮತ್ತೊಂದು ಸಿನಿಮಾ 'ವಿಕ್ರಾಂತ್ ರೋಣ' ಹೊಸ ದಾಖಲೆ ಬರೆಯುವುದಕ್ಕೆ ತುದಿಗಾಲಲ್ಲಿ ನಿಂತಿದೆ.
ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಕಾಂಬಿನೇಷನ್ ಸಿನಿಮಾಗಾಗಿ ಇಡೀ ಚಿತ್ರರಂಗವೇ ಕಾದು ಕೂತಿದೆ. ಈ ಸಿನಿಮಾ ಹೇಗಿರುತ್ತೋ? ಅದ್ಯಾವ ಮಟ್ಟಿಗೆ ಮೋಡಿ ಮಾಡುತ್ತೋ ? ಅದ್ಯಾವ ದಾಖಲೆ ಬರೆಯುತ್ತೋ? ಅಂತ ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಇದೇ ಕಾಂಬಿನೇಷನ್ನ ಮತ್ತೊಂದು ಸಿನಿಮಾ ಬಗ್ಗೆ ಈಗಾಗಲೇ ಟಾಕ್ ಶುರುವಾಗಿದೆ.
Vikrant Rona Trailer : ಗುಮ್ಮ ಗುಮ್ಮ ಗುಮ್ಮ ಬಂದ: 'ವಿಕ್ರಾಂತ್ ರೋಣ' ಟ್ರೈಲರ್ ರಿಲೀಸ್
'ವಿಕ್ರಾಂತ್ ರೋಣ' ಇದೇ ತಿಂಗಳು 28ನೇ ತಾರೀಕು ಪ್ಯಾನ್ ವರ್ಲ್ಡ್ನಲ್ಲಿ ಬಿಡುಗಡೆಯಾಗುತ್ತಿದೆ. ಕೇವಲ ಭಾರತದಲ್ಲಿ ಅಷ್ಟೇ ಅಲ್ಲ. ವಿಶ್ವದ ಹಲವು ಭಾಷೆಗಳಲ್ಲಿ ಈ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ಗೆ ರೆಡಿಯಾಗಿದೆ. ಈ ಮಧ್ಯೆ ಸುದೀಪ್ ಹಾಗೂ ಅನುಪ್ ಭಂಡಾರಿಯ 'ಬಿಲ್ಲ ರಂಗ ಭಾಷಾ' ಬಗ್ಗೆ ಸಖತ್ ಇಂಟ್ರೆಸ್ಟಿಂಗ್ ಸ್ಟೋರಿಯೊಂದು ಹೊರಬಿದ್ದಿದೆ. ಅದೇನು ಅಂತ ತಿಳಿಯಲು ಮುಂದೆ ಓದಿ.
'ಬಿಲ್ಲ ರಂಗ ಭಾಷಾ' ಎರಡು ಪಾರ್ಟ್
ಪ್ಯಾನ್ ಇಂಡಿಯಾ ಸಿನಿಮಾಗಳು ಎರಡೆರಡು ಪಾರ್ಟ್ಗಳಲ್ಲಿ ರಿಲೀಸ್ ಆಗುತ್ತಿವೆ. ಆದರೆ, 'ವಿಕ್ರಾಂತ್ ರೋಣ' ಮಾತ್ರ ಯಾಕಿಲ್ಲ ಅಂತ ಕಿಚ್ಚನ ಫ್ಯಾನ್ಸ್ ಕೊಚ್ಚ ಬೇಜಾರಾಗಿರಬಹುದು. ಆದರೆ, ಸುದೀಪ್ ಅಭಿಮಾನಿಗಳಿಗೆ ಖುಷಿ ಪಡಿಸುವ ಸುದ್ದಿಯೊಂದಿದೆ. ಅದುವೇ 'ಬಿಲ್ಲ ರಂಗ ಭಾಷಾ'. 'ವಿಕ್ರಾಂತ್ ರೋಣ' ಸಿನಿಮಾ ಬಳಿಕ ಅನುಪ್ ಭಂಡಾರಿ ಜೊತೆನೇ ಮತ್ತೊಂದು ಸಿನಿಮಾ ಮಾಡುತ್ತಿರೋದಾಗಿ ಈಗಾಗಲೇ ಸುದೀಪ್ ಅನೌನ್ಸ್ ಮಾಡಿದ್ದಾರೆ. 'ವಿಕ್ರಾಂತ್ ರೋಣ'ದಷ್ಟೇ ಇಂಟ್ರೆಸ್ಟಿಂಗ್ ವಿಷಯಯೊಂದಿದೆ. ಅದೇನೆಂದರೆ 'ಬಿಲ್ಲ ರಂಗ ಭಾಷಾ' ಎರಡು ಭಾಗಗಳಲ್ಲಿ ರಿಲೀಸ್ ಆಗಲಿದೆ.
ಪ್ಯಾನ್ ಇಂಡಿಯಾ ಸಿನಿಮಾ ಬಂದಿದ್ದಕ್ಕೆ ನಾವು ಈ ಸಿನಿಮಾ ಮಾಡಿಲ್ಲ: ಮುಂಬೈನಲ್ಲಿ 'ವಿಕ್ರಾಂತ್ ರೋಣ' ರಣ ಕಹಳೆ
'ವಿಕ್ರಾಂತ್ ರೋಣ' ಬಳಿಕ ಅನುಪ್ಗೆ ರೆಸ್ಟ್
ಕಳೆದ ಮೂರು ವರ್ಷಗಳಿಂದ 'ವಿಕ್ರಾಂತ್ ರೋಣ' ಸಿನಿಮಾ ಬಗ್ಗೆನೇ ನಿರ್ದೇಶಕ ಅನುಪ್ ಭಂಡಾರಿ ಕೆಲಸ ಮಾಡಿದ್ದಾರೆ. ಹೀಗಾಗಿ 'ವಿಕ್ರಾಂತ್ ರೋಣ' ರಿಲೀಸ್ ಬಳಿಕ ಅನುಪ್ ಭಂಡಾರಿ ಕೊಂಚ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಫ್ಯಾಮಿಲಿ ಜೊತೆ ಲಾಂಗ್ ಬ್ರೇಕ್ ತೆಗೆದುಕೊಂಡ ಬಳಿಕ 'ಬಿಲ್ಲ ರಂಗ ಭಾಷಾ' ಸಿನಿಮಾಗೆ ಕೂರಲಿದ್ದಾರೆ. ಅಷ್ಟರೊಳಗೆ ಸುದೀಪ್ ಬೇರೊಂದು ಸಿನಿಮಾ ಮಾಡಿ ಮತ್ತೆ 'ಬಿಲ್ಲ ರಂಗ ಭಾಷಾ'ಗೆ ಮರಳಬಹುದು. ಅಥವಾ ಅನುಪ್ ಸ್ಕ್ರಿಪ್ಟ್ ಜೊತೆ ರೆಡಿಯಿದ್ದರೆ, 'ಬಿಲ್ಲ ರಂಗ ಭಾಷಾ'ನೇ ಸೆಟ್ಟೇರಬಹುದು ಎಂದು ಆಪ್ತ ಮೂಲಗಳು ತಿಳಿಸಿವೆ.
'ವಿಕ್ರಾಂತ್ ರೋಣ'ಗಿಂತ ವಿಭಿನ್ನ ಸಿನಿಮಾ
'ಬಿಲ್ಲ ರಂಗ ಭಾಷಾ' ಈ ಹಿಂದೆನೇ ಸೆಟ್ಟೇರಬೇಕಿತ್ತು. ಆದರೆ, ಅದಕ್ಕೆ ಸಾಕಷ್ಟು ಸಮಯ ಬೇಕಿದ್ದರಿಂದ ಅದಕ್ಕೂ ಮುನ್ನ 'ವಿಕ್ರಾಂತ್ ರೋಣ' ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡಲಾಗಿತ್ತು. ಈಗ ಜುಲೈ 28ರಂದು 'ವಿಕ್ರಾಂತ್ ರೋಣ' ಗ್ರ್ಯಾಂಡ್ ರಿಲೀಸ್ ಆಗಲಿದೆ. ಸಿನಿಮಾ ಬಿಡುಗಡೆ ಆದ್ಮೇಲೆ ಅನುಪ್ 'ಬಿಲ್ಲ ರಂಗ ಭಾಷಾ' ಕೈಗೆತ್ತಿಗೊಳ್ಳಲಿದ್ದಾರೆ. 'ವಿಕ್ರಾಂತ್ ರೋಣ'ಗಿಂತಲೂ 'ಬಿಲ್ಲ ರಂಗ ಭಾಷಾ' ವಿಭಿನ್ನ ಸಿನಿಮಾ ಆಗಿರುತ್ತೆ. ಕ್ರಿ.ಶ. 2209ರ ಕಥೆಯಾಗಿರುತ್ತೆ. ಈ ಕಾರಣಕ್ಕೆ ಈ ಸಿನಿಮಾನೂ ವಿಶಿಷ್ಟ ಅನುಭವ ನೀಡಲಿದೆ ಎನ್ನಲಾಗಿದೆ.
ರೀ ಅನುಪ್ ಭಂಡಾರಿ, ಸುದೀಪ್ ನನ್ನ ಮಗರೀ.. ಅವನಿಗ್ಯಾಕೆ ಭಯ?- ರವಿಚಂದ್ರನ್
'ವಿಕ್ರಾಂತ್ ರೋಣ 2' ಬರಬಹುದು!
'ವಿಕ್ರಾಂತ್ ರೋಣ' ಸಿನಿಮಾವನ್ನು ಜನರು ಹೇಗೆ ಮೆಚ್ಚಿಕೊಳ್ಳುತ್ತಾರೆ ಅನ್ನೋದನ್ನು ಇಡೀ ಎದುರು ನೋಡುತ್ತಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಈ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕರೆ, 'ವಿಕ್ರಾಂತ್ ರೋಣ 2' ಬಗ್ಗೆನೂ ಚಿತ್ರತಂಡ ಆಲೋಚನೆ ಮಾಡಬಹುದು ಎನ್ನಲಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾಗೆ ಸಿಗುವ ರೆಸ್ಪಾನ್ಸ್ ಮುಂದೆ ಎಲ್ಲವೂ ನಿಂತಿದೆ ಎನ್ನಲಾಗಿದೆ.