Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಶ್ವ ಚಾಂಪಿಯನ್ ಜೊತೆ ಚೆಸ್ ಆಡಿದ ಸುದೀಪ್: 10 ಲಕ್ಷ ದೇಣಿಗೆ ಸಂಗ್ರಹ
ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಎದುರು ಕಿಚ್ಚ ಸುದೀಪ್ ಚೆಸ್ ಆಡಿದ್ದು, ಕಠಿಣ ಸ್ಪರ್ಧೆ ನೀಡಿದ್ದಾರೆ. ನಟನೆ, ನಿರ್ದೇಶನ, ನಿರೂಪಣೆ, ಕ್ರಿಕೆಟ್ನಲ್ಲಿ ಸೈ ಎನಿಸಿಕೊಂಡಿರುವ ಸುದೀಪ್ ಈಗ 'ಚೆಸ್ ಮಾಸ್ಟರ್' ಜೊತೆ ಆಟವಾಡಿ ತಮ್ಮ ಚಾಣಕ್ಷತನದ ಮೂಲಕ ಗಮನ ಸೆಳೆದರು.
Recommended Video
ಚೆಸ್ ಆಟಕ್ಕೆ ಸಂಬಂಧಿಸಿದ ಸಮುದಾಯಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಚೆಸ್.ಕಾಮ್ ಸಂಸ್ಥೆ 'ಚೆಕ್ಮೆಟ್ ಕೋವಿಡ್' ಎಂಬ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಬಂದ ಹಣದಿಂದ ಅನೇಕ ಕುಟುಂಬಗಳಿಗೆ ನೆರವು ನೀಡಲಾಗುವುದು ಎಂದು ತಿಳಿಸಿತ್ತು.
ವಿಶ್ವನಾಥ್ ಆನಂದ್ ಜೊತೆ ಚೆಸ್ ಆಡಲಿದ್ದಾರೆ ಅಮೀರ್ ಖಾನ್
ಭಾನುವಾರ ಸಂಜೆ ನಡೆದ ಸೆಲೆಬ್ರಿಟಿ ಆವೃತ್ತಿಯಲ್ಲಿ ನಟ ಸುದೀಪ್, ರಿತೇಶ್ದೇಶಮುಖ್, ಕ್ರಿಕೆಟಿಗ ಯಜುವೇಂದ್ರ ಚಹಾಲ್ ಸೇರಿದಂತೆ ಹಲವರು ಭಾಗವಹಿಸಿದ್ದರು. 30 ನಿಮಿಷಗಳ ಕಾಲ ವಿಶ್ವನಾಥನ್ ಆನಂದ್ ಅವರು ಈ ಸೆಲೆಬ್ರಿಟಿಗಳ ಜೊತೆ ಟೈಂಔಟ್ನಲ್ಲಿ ಏಕಕಾಲಕ್ಕೆ ಚೆಸ್ ಆಡಿದ್ದಾರೆ. ಮುಂದೆ ಓದಿ...
10 ಲಕ್ಷ ದೇಣಿಗೆ ಸಂಗ್ರಹ
ಚೆಸ್.ಕಾಮ್ ಆಯೋಜಿಸಿದ್ದ ಈ ಕಾರ್ಯಕ್ರಮ ಯಶಸ್ವಿಯಾಗಿದ್ದು 10 ಲಕ್ಷ ರೂಪಾಯಿ ಇದರಿಂದ ದೇಣಿಗೆ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ. ಈ ಮಹತ್ವದ ಕೆಲಸಕ್ಕೆ ಕೈ ಜೋಡಿಸಿದ ಎಲ್ಲರಿಗೂ ಚೆಸ್.ಕಾಮ್ ಸಂಸ್ಥೆ ಧನ್ಯವಾದ ತಿಳಿಸಿದೆ.
ದಿಗ್ಗಜರ ಜೊತೆ ಆಡಿದ್ದೇ ಅದೃಷ್ಟ
'ಯಾರು ಸೋಲುತ್ತಾರೆ ಯಾರು ಗೆಲ್ಲುತ್ತಾರೆ ಎನ್ನುವುದು ಮುಖ್ಯವಲ್ಲ. ಯಾರು ಹೆಚ್ಚು ಸಮಯ ವಿಶ್ವನಾಥ್ ಅವರೊಂದಿಗೆ ಕಣದಲ್ಲಿರುವ ಇರುತ್ತಾರೆ ಎನ್ನುವುದು ಮುಖ್ಯ. ಇಂತಹ ದಿಗ್ಗಜರ ಜೊತೆ ಆಟವಾಡಲು ಅವಕಾಶ ಸಿಕ್ಕಿದ್ದು ಖುಷಿ' ಎಂದು ನಟ ಸುದೀಪ್ ಆಟದ ಬಳಿಕ ನಡೆದ ಸಂವಾದದಲ್ಲಿ ತಿಳಿಸಿದರು.
ಸದುದ್ದೇಶಕ್ಕಾಗಿ ವಿಶ್ವವಿಜೇತನಿಗೆ ಕಿಚ್ಚ ಸುದೀಪ್ ಸವಾಲು
ಈ ಅನುಭವ ಜೀವನ ಪೂರ್ತಿ ಇರುತ್ತದೆ
'ನನಗೆ ಆನ್ಲೈನ್ ಚೆಸ್ ಬಗ್ಗೆ ಮಾಹಿತಿ ಇರಲಿಲ್ಲ. ಈ ಆಟದಲ್ಲಿ ಸೋಲಿನ ಭಯ ಇರಲಿಲ್ಲ. ಏಕಂದ್ರೆ ನಾವು ಆಡುತ್ತಿರುವುದು ವಿಶ್ವನಾಥ್ ಆನಂದ್ ಎದುರು. ಈ ಅನುಭವ ಜೀವನ ಪೂರ್ತಿ ನೆನಪಿನಲ್ಲಿ ಇರುತ್ತದೆ' ಎಂದು ಅಭಿನಯ ಚಕ್ರವರ್ತಿ ಸಂತಸ ಹಂಚಿಕೊಂಡಿದ್ದಾರೆ.
ಅಮೀರ್ ಖಾನ್ ಜೊತೆ ಚೆಸ್ ಮಾಸ್ಟರ್
ಬಾಲಿವುಡ್ ನಟ ಅಮೀರ್ ಜೊತೆಯೂ ವಿಶ್ವನಾಥ್ ಆನಂದ್ ಚೆಸ್ ಆಡಿದರು. ಈ ವೇಳೆ ಅಮೀರ್ ಖಾನ್ಗೆ ಪ್ರಶ್ನೆಯೊಂದು ಎದುರಾಯಿತು. ಆನಂದ್ ಕುರಿತು ಬಯೋಪಿಕ್ ಮಾಡಲು ಇಷ್ಪಪಡ್ತೀರಾ ಎಂದಿದ್ದಕ್ಕೆ, ''ಖಂಡಿತವಾಗಿಯೂ, ಅದಕ್ಕಾಗಿ ಎದುರು ನೋಡುತ್ತಿದ್ದೇನೆ'' ಎಂದು ಹೇಳಿದರು.