Don't Miss!
- Automobiles Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಚ್ಚ ಸುದೀಪ್ ಅವರಿಂದ ಕೇಸ್ ರೀ ಓಪನ್
ಕಿಚ್ಚ ಸುದೀಪ್ ಆ ಕೇಸ್ ನ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಿದ್ರು. ಅದು ಈಗ ರೀ ಓಪನ್ ಆಗ್ತಾ ಇದೆ. ಅದೇ ಕೇಸ್ ನಂ18/9. ಅವತ್ತು ರೇಣುಕಾಂಬ ಸ್ಟುಡಿಯೋದಲ್ಲಿ ಕೇಸ್ ನಂ 18/9 ಸಿನಿಮಾ ನೋಡಿದ್ದ ಸುದೀಪ್ ಭಾವುಕರಾಗಿದ್ದರು.
ಸಿನಿಮಾ ಇಷ್ಟು ಚೆನ್ನಾಗಿದೆ. ನಾನಂತೂ ಫ್ಯಾಮಿಲಿ ಸಮೇತ ಸಿನಿಮಾ ನೋಡ್ತೀನಿ ಅಂದಿದ್ರು. ದೊಡ್ಡ ದೊಡ್ಡ ಸಿನಿಮಾಗಳ ನಡುವೆ ಸಿಕ್ಕಿ ಈ ಸಿನಿಮಾ ಎಲ್ಲೋ ಕಳೆದುಹೋಯ್ತು ಅನ್ನಿಸುತ್ತೆ ಅನ್ನೋ ಜೊತೆಗೆ ಈ ಒಂದನ್ನು ಮಾತನ್ನೂ ಸೇರಿಸಿದ್ರು. ಅವತ್ತು ಸುದೀಪ್ ಹೇಳಿದ್ದು ಈ ಸಿನಿಮಾ ರೀರಿಲೀಸ್ ಆಗ್ಬೇಕು ಅನ್ನೋದು.
ಈಗ ಆ ಮಾತು ಸತ್ಯ ಆಗ್ತಿದೆ. ಅವತ್ತು ಸಿಂಧು ಲೋಕನಾಥ್, ನಿರಂಜನ್ ಅಭಿನಯದ ಚಿತ್ರಕ್ಕೆ ಹೊಸ ಭರವಸೆ ಬಂದಿತ್ತು. ಈಗ ಚಿತ್ರ ರೀರಿಲೀಸಾಗೋದು ಕನ್ಫರ್ಮ್ ಆಗಿದೆ. ಇಷ್ಟಕ್ಕೂ ಕೇಸ್ ನಂ 18/9 ಚಿತ್ರ ರಿಲೀಸಾದಾಗ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿದ್ದವು.
ಪ್ರೇಕ್ಷಕರು, ವಿಮರ್ಶಕರು ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ರು. ಆದ್ರೆ ಗೂಗ್ಲಿ, ವಿಕ್ಟರಿ, ಜಯಮ್ಮನ ಮಗ ಈ ಮೂರು ಚಿತ್ರಗಳ ನಡುವೆ ಸಿಕ್ಕ ಕೇಸ್ ನಂ 18/9 ಕಳೆದುಹೋಗಿತ್ತು. ಈಗ ರೀ-ರಿಲೀಸ್ ಭಾಗ್ಯ ಕಾಣುತ್ತಿದೆ.
ಈಗ ದೊಡ್ಡ ಸಿನಿಮಾಗಳು ರಿಲೀಸಾಗಿವೆ. ಬೃಂದಾವನ ಬಂದಿದ್ದಾಗಿದೆ. ದೊಡ್ಡ ಸ್ಟಾರ್ ಗಳ ಸಿನಿಮಾಗಳು ಸದ್ಯಕ್ಕಿಲ್ಲ. ಹೆಣ್ಣುಮಕ್ಕಳು ನೋಡಲೇಬೇಕಾದ ಚಿತ್ರವಾಗಿರೋ ಕೇಸ್ ನಂ 18/9 ಸದ್ಯದಲ್ಲೇ ಮತ್ತೆ ಥಿಯೇಟರ್ಗಳಿಗೆ ಲಗ್ಗೆ ಇಡಲಿದೆ.