ಬಾಲ್ಯದಲ್ಲೇ ಹಿರಣ್ಣಯ್ಯರಿಗೆ ಡೈರೆಕ್ಷನ್ ಮಾಡಿದ್ರು ಕಿಶನ್
ರಂಗಭೂಮಿಯ ಕಲಾ ತಪಸ್ವಿ, ಕಲಾ ಚತುರ ಮಾಸ್ಟರ್ ಹಿರಣ್ಣಯ್ಯ ಅವರು ಇಂದು ವಿಧಿವಶರಾಗಿದ್ದಾರೆ. ಹಿರಣ್ಣಯ್ಯರ ಜೊತೆ ಕಳೆದ ಸಮಯವನ್ನು ನೆನಪು ಮಾಡಿಕೊಳ್ಳುವ ಮೂಲಕ ಸ್ಯಾಂಡಲ್ ವುಡ್ ಕಲಾವಿದರು ಅವರಿಗೆ ಸಂತಾಪ ಸೂಚಿಸುತ್ತಿದ್ದಾರೆ.
ನಟ, ನಿರ್ದೇಶಕ ಮಾಸ್ಟರ್ ಕಿಶನ್ ಕೂಡ ಮಾಸ್ಟರ್ ಹಿರಣ್ಣಯ್ಯ ರವರ ಜೊತೆಗೆ ಕಳೆದ ಸಮಯವನ್ನು ನೆನಪು ಮಾಡಿಕೊಂಡಿದ್ದಾರೆ. ಇನ್ನು ಬಾಲ್ಯದಲ್ಲಿಯೇ ಮಾಸ್ಟರ್ ಹಿರಣ್ಣಯ್ಯ ಅವರಿಗೆ ನಿರ್ದೇಶನ ಮಾಡುವ ಅದ್ಭುತ ಅವಕಾಶವನ್ನು ಕಿಶನ್ ಪಡೆದಿದ್ದರು.

''ಮಾಸ್ಟರ್ ಹಿರಣ್ಣಯ್ಯ ತಾತ ಅಧ್ಬುತ ವ್ಯಕ್ತಿ. ಪಾಪಾ ಪಾಂಡು ಧಾರಾವಾಹಿಯಿಂದ ಹಿಡಿದು, ಕೇರ್ ಆಫ್ ಪುಟ್ ಬಾತ್ 2 ಸಿನಿಮಾದಲ್ಲಿಯೂ ಅವರ ಜೊತೆಗೆ ಕೆಲಸಮಾಡುವ ಅವಕಾಶ ನನಗೆ ಸಿಕ್ಕಿತ್ತು. ನನ್ನ ಹೆಸರಿನಲ್ಲಿಯೂ 'ಮಾಸ್ಟರ್' ಎಂದು ಇರುವುದರಿಂದ ಅವರು ನಮ್ಮ ತಾತ ಎಂದು ಅನೇಕರು ಎಂದು ಕೊಂಡಿದ್ದರು. ನಾನು ನಿಮ್ಮ 12th ಜನರೇಶನ್ ತಾತ ಹೇಳುತ್ತಿದ್ದರು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.'' ಎಂದು ಟ್ವೀಟ್ ಮಾಡಿದ್ದಾರೆ.
ನಟ ಸುದೀಪ್, ದರ್ಶನ್, ಗಣೇಶ್, ರಮೇಶ್ ಅರವಿಂದ್, ಸೇರಿದಂತೆ ಸಾಕಷ್ಟು ಕಲಾವಿದರು ಟ್ವಿಟರ್ ನಲ್ಲಿ ಮಾಸ್ಟರ್ ಹಿರಣ್ಣಯ್ಯರಿಗೆ ಸಂತಾಪ ಸೂಚಿಸಿದ್ದಾರೆ.


Click it and Unblock the Notifications











