twitter
    For Quick Alerts
    ALLOW NOTIFICATIONS  
    For Daily Alerts

    ಎರಡು ದಿನಗಳ ಹಿಂದೆ ಉಪೇಂದ್ರ ಮಾಡಿದ್ದ ಟ್ವೀಟ್ ಹಿಂದಿನ ಮರ್ಮ ಏನು.?

    By Harshitha
    |

    ಇದಕ್ಕಿದ್ದಂತೆ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ'ಯಲ್ಲಿ ಒಡಕು ಮೂಡಿದೆ. ಕೆ.ಪಿ.ಜೆ.ಪಿ ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ಹಾಗೂ ರಾಷ್ಟ್ರೀಯ ಅಧ್ಯಕ್ಷ ಉಪೇಂದ್ರ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.

    ಕೆ.ಪಿ.ಜೆ.ಪಿ ಪಕ್ಷದಲ್ಲಿ ಅಭ್ಯರ್ಥಿಗಳಿಗೆ ಬಿ-ಫಾರ್ಮ್ ಹಂಚುವ ವಿಚಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಜಗಜ್ಜಾಹೀರಾಗಿದ್ದೇ ಇಂದು ಮಧ್ಯಾಹ್ನ. ಆದ್ರೆ, ಎರಡು ದಿನಗಳ ಹಿಂದೆ ಉಪೇಂದ್ರ ಮಾಡಿರುವ ಒಂದು ಟ್ವೀಟ್ ನೋಡಿದ್ರೆ, ಗ್ಯಾರೆಂಟಿ ನಿಮ್ಮ ತಲೆಯಲ್ಲಿ ಅನುಮಾನದ ಹುಳ ಹರಿದಾಡುತ್ತದೆ.

    ಎರಡು ದಿನಗಳ ಹಿಂದೆ, ಅಂದ್ರೆ ಮಾರ್ಚ್ 3 ರಂದು ''ಪ್ರಜಾಕೀಯ ಮತ್ತು ರಾಜಕೀಯದ ಬಹುದೊಡ್ಡ ಪರೀಕ್ಷೆ ಇದೇ ತಿಂಗಳು 6 ನೇ ತಾರೀಖು ಬಹಿರಂಗ ಆಗುತ್ತದೆ. ದಯವಿಟ್ಟು ಕಾದು ನೋಡಿ'' ಎಂದು ಉಪೇಂದ್ರ ಟ್ವೀಟ್ ಮಾಡಿದ್ದರು.

    ಆದ್ರೆ, ಮಾರ್ಚ್ 5 ನೇ ತಾರೀಖು... ಅಂದ್ರೆ ಇಂದು ಪ್ರಜಾಕೀಯ ಪಯಣದಲ್ಲಿ ಉಪೇಂದ್ರಗೆ ಬಹುದೊಡ್ಡ ಸಂಕಟ ಎದುರಾಗಿದೆ.

    ಕೆಪಿಜೆಪಿ ವಿವಾದದ ಬಗ್ಗೆ ಉಪೇಂದ್ರ ಏನಂತಾರೆ.? ಸೈನಿಂಗ್ ಅಥಾರಿಟಿ ಯಾಕ್ಬೇಕು.?ಕೆಪಿಜೆಪಿ ವಿವಾದದ ಬಗ್ಗೆ ಉಪೇಂದ್ರ ಏನಂತಾರೆ.? ಸೈನಿಂಗ್ ಅಥಾರಿಟಿ ಯಾಕ್ಬೇಕು.?

    'ಪ್ರಜಾಕೀಯ ಮತ್ತು ರಾಜಕೀಯದ ಬಹುದೊಡ್ಡ ಪರೀಕ್ಷೆ' ಎಂದು ಉಪೇಂದ್ರ ಉಲ್ಲೇಖಿಸಿದ್ದಾರೆ ಹೊರತು ಹೆಚ್ಚು ವಿವರಗಳನ್ನು ನೀಡಿಲ್ಲ. ಹೀಗಾಗಿ, ಅಂದಿನ ಈ ಟ್ವೀಟ್ ಗೂ ಹಾಗೂ ಇಂದಿನ ಬೆಳವಣಿಗೆಗೂ ಏನಾದರೂ ಲಿಂಕ್ ಇದ್ಯಾ ಅಂತ ಜನ ಯೋಜನೆ ಮಾಡ್ತಿದ್ದಾರೆ.

     KPJP Crisis: What did Upendra tweet 2 days ago.?

    ಭಿನ್ನಮತ ಸ್ಫೋಟ: ಕೆಪಿಜೆಪಿ ಪಕ್ಷದಿಂದ ಹೊರಬರ್ತಾರಾ ಉಪೇಂದ್ರ.?ಭಿನ್ನಮತ ಸ್ಫೋಟ: ಕೆಪಿಜೆಪಿ ಪಕ್ಷದಿಂದ ಹೊರಬರ್ತಾರಾ ಉಪೇಂದ್ರ.?

    ಅಷ್ಟಕ್ಕೂ, ಮಾರ್ಚ್ 6 ನಾಳೆ. ಉಪೇಂದ್ರ ನುಡಿದಿರುವಂತೆ ನಾಳೆ ನಿಜಕ್ಕೂ ಪ್ರಜಾಕೀಯ ಹಾಗೂ ರಾಜಕೀಯದ ಬಹುದೊಡ್ಡ ಪರೀಕ್ಷೆ ಬಹಿರಂಗ ಆಗಲಿದ್ಯಾ.? ಎಲ್ಲದಕ್ಕೂ ಉತ್ತರ ನಾಳೆ ಸಿಗಲಿದೆ. ಕಾದು ನೋಡಿ...

    English summary
    KPJP Crisis: What did Upendra tweet 2 days ago.? Have a look at Upendra's tweet.
    Monday, March 5, 2018, 19:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X