Don't Miss!
- Automobiles ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎರಡು ದಿನಗಳ ಹಿಂದೆ ಉಪೇಂದ್ರ ಮಾಡಿದ್ದ ಟ್ವೀಟ್ ಹಿಂದಿನ ಮರ್ಮ ಏನು.?
ಇದಕ್ಕಿದ್ದಂತೆ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ'ಯಲ್ಲಿ ಒಡಕು ಮೂಡಿದೆ. ಕೆ.ಪಿ.ಜೆ.ಪಿ ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ಹಾಗೂ ರಾಷ್ಟ್ರೀಯ ಅಧ್ಯಕ್ಷ ಉಪೇಂದ್ರ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.
ಕೆ.ಪಿ.ಜೆ.ಪಿ ಪಕ್ಷದಲ್ಲಿ ಅಭ್ಯರ್ಥಿಗಳಿಗೆ ಬಿ-ಫಾರ್ಮ್ ಹಂಚುವ ವಿಚಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಜಗಜ್ಜಾಹೀರಾಗಿದ್ದೇ ಇಂದು ಮಧ್ಯಾಹ್ನ. ಆದ್ರೆ, ಎರಡು ದಿನಗಳ ಹಿಂದೆ ಉಪೇಂದ್ರ ಮಾಡಿರುವ ಒಂದು ಟ್ವೀಟ್ ನೋಡಿದ್ರೆ, ಗ್ಯಾರೆಂಟಿ ನಿಮ್ಮ ತಲೆಯಲ್ಲಿ ಅನುಮಾನದ ಹುಳ ಹರಿದಾಡುತ್ತದೆ.
ಎರಡು ದಿನಗಳ ಹಿಂದೆ, ಅಂದ್ರೆ ಮಾರ್ಚ್ 3 ರಂದು ''ಪ್ರಜಾಕೀಯ ಮತ್ತು ರಾಜಕೀಯದ ಬಹುದೊಡ್ಡ ಪರೀಕ್ಷೆ ಇದೇ ತಿಂಗಳು 6 ನೇ ತಾರೀಖು ಬಹಿರಂಗ ಆಗುತ್ತದೆ. ದಯವಿಟ್ಟು ಕಾದು ನೋಡಿ'' ಎಂದು ಉಪೇಂದ್ರ ಟ್ವೀಟ್ ಮಾಡಿದ್ದರು.
ಪ್ರಜಾಕೀಯ ಮತ್ತು ರಾಜಕೀಯದ ಬಹು ದೊಡ್ಡ ಪರೀಕ್ಷೆ ಇದೇ ತಿಂಗಳು 6 ನೇ ತಾರೀಖು ಬಹಿರಂಗ ಆಗುತ್ತದೆ ದಯವಿಟ್ಟು ಕಾದು ನೋಡಿ. ಉಪೇಂದ್ರ.
— Upendra (@nimmaupendra) March 3, 2018
ಆದ್ರೆ, ಮಾರ್ಚ್ 5 ನೇ ತಾರೀಖು... ಅಂದ್ರೆ ಇಂದು ಪ್ರಜಾಕೀಯ ಪಯಣದಲ್ಲಿ ಉಪೇಂದ್ರಗೆ ಬಹುದೊಡ್ಡ ಸಂಕಟ ಎದುರಾಗಿದೆ.
ಕೆಪಿಜೆಪಿ ವಿವಾದದ ಬಗ್ಗೆ ಉಪೇಂದ್ರ ಏನಂತಾರೆ.? ಸೈನಿಂಗ್ ಅಥಾರಿಟಿ ಯಾಕ್ಬೇಕು.?
'ಪ್ರಜಾಕೀಯ ಮತ್ತು ರಾಜಕೀಯದ ಬಹುದೊಡ್ಡ ಪರೀಕ್ಷೆ' ಎಂದು ಉಪೇಂದ್ರ ಉಲ್ಲೇಖಿಸಿದ್ದಾರೆ ಹೊರತು ಹೆಚ್ಚು ವಿವರಗಳನ್ನು ನೀಡಿಲ್ಲ. ಹೀಗಾಗಿ, ಅಂದಿನ ಈ ಟ್ವೀಟ್ ಗೂ ಹಾಗೂ ಇಂದಿನ ಬೆಳವಣಿಗೆಗೂ ಏನಾದರೂ ಲಿಂಕ್ ಇದ್ಯಾ ಅಂತ ಜನ ಯೋಜನೆ ಮಾಡ್ತಿದ್ದಾರೆ.
ಭಿನ್ನಮತ ಸ್ಫೋಟ: ಕೆಪಿಜೆಪಿ ಪಕ್ಷದಿಂದ ಹೊರಬರ್ತಾರಾ ಉಪೇಂದ್ರ.?
ಅಷ್ಟಕ್ಕೂ, ಮಾರ್ಚ್ 6 ನಾಳೆ. ಉಪೇಂದ್ರ ನುಡಿದಿರುವಂತೆ ನಾಳೆ ನಿಜಕ್ಕೂ ಪ್ರಜಾಕೀಯ ಹಾಗೂ ರಾಜಕೀಯದ ಬಹುದೊಡ್ಡ ಪರೀಕ್ಷೆ ಬಹಿರಂಗ ಆಗಲಿದ್ಯಾ.? ಎಲ್ಲದಕ್ಕೂ ಉತ್ತರ ನಾಳೆ ಸಿಗಲಿದೆ. ಕಾದು ನೋಡಿ...