Don't Miss!
- News ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ನಾಯಕನೇ ಇಲ್ಲ: ಪ್ರಧಾನಿ ಮೋದಿ!
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲೈಂಗಿಕ ಕಿರುಕುಳದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಕೃಷಿ ತಾಪಂಡ
Recommended Video
ಒಂದಾದ ಮೇಲೆ ಒಂದರಂತೆ ಸಿನಿಮಾರಂಗದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮಾತುಗಳು ಕೇಳಿ ಬರುತ್ತಲೇ ಇದೆ. ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಅಕ್ಕ -ಪಕ್ಕದ ಸಿನಿಮಾರಂಗದಲ್ಲಿಯೂ ಕಾಸ್ಟಿಂಗ್ ಕೌಚ್ ವಿಚಾರದ ಸದ್ದು ಜೋರಾಗಿಯೇ ಇದೆ.
ಕಳೆದ ಎರಡು ಮೂರು ತಿಂಗಳ ಹಿಂದೆ ನಟಿ ಶೃತಿ ಹರಿಹರನ್ ಕಾರ್ಯಕ್ರಮವೊಂದರಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದರು. ಇದಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ತದ ನಂತರ ಕನ್ನಡ ಚಿತ್ರ ನಟಿಯರೇ ನಾನು ಸ್ಟ್ರಾಂಗ್ ಆಗಿ ಇದ್ದರೆ ನಮಗ್ಯಾವುದೇ ಭಯವಿಲ್ಲ. ಸಾಕಷ್ಟು ವರ್ಷಗಳಿಂದ ನಾವು ಚಿತ್ರರಂಗದಲ್ಲಿ ಇದ್ದೇವೆ ನಮಗೆ ಈ ಅನುಭವ ಆಗಿಲ್ಲ ಎಂದು ಕಡ್ಡಿ ಮುರಿದಂತೆ ಮಾತನಾಡಿದ್ದರು.
ಬಾಲಿವುಡ್ ಹಿರಿಯ ನಟಿಗೆ ಲೈಂಗಿಕ ಕಿರುಕುಳ: ಮುಂಬೈನಲ್ಲಿ ಉದ್ಯಮಿ ಬಂಧನ
ಸಿನಿಮಾರಂಗದಲ್ಲಿ ಇರುವ ಲೈಂಗಿಕ ಕಿರುಕುಳದ ಬಗೆಗಿನ ಸುದ್ದಿ ತಣ್ಣಗಾಯ್ತು ಎನ್ನುವಾಗಲೇ ನಟಿ ಕೃಷಿ ತಾಪಂಡ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಈ ರೀತಿಯ ಅನುಭವ ನನಗಾಗಿದೆ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಹಾಗಾದರೆ ಕೃಷಿ ಲೈಂಗಿಕ ಕಿರುಕುಳದ ಬಗ್ಗೆ ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ. ಮುಂದೆ ಓದಿ
ಲೈಂಗಿಕ ಕಿರುಕುಳದ ಬಗ್ಗೆ ಕೃಷಿ ಮಾತು
ಅಕಿರ, ಎರಡು ಕನಸು ಸಿನಿಮಾಗಳಲ್ಲಿ ಅಭಿನಯಿಸ ಕನ್ನಡ ಸಿನಿಮಾರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವ ನಟಿ ಕೃಷಿ ತಾಪಂಡ ಸಿನಿಮಾರಂಗದಲ್ಲಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.
ಕಾಸ್ಟಿಂಗ್ ಕೌಚ್ ಪ್ರವೃತ್ತಿ ಇದೆ ಎಂದ ಕೃಷಿ
ಸ್ಯಾಂಡಲ್ ವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಪ್ರವೃತಿ ಇದೆ. ಕಾಂಪ್ರಮೈಸ್ ಗೆ ಒಪ್ಪಿಲ್ಲ ಅನ್ನೋ ಕಾರಣಕ್ಕೆ ಸಾಕಷ್ಟು ಪ್ರಾಜೆಕ್ಟ್ ತಪ್ಪಿ ಹೋಗಿವೆ. ನನಗೂ ಈ ಅನುಭವ ಆಗಿದೆ ಎಂದಿದ್ದಾರೆ ನಟಿ ಕೃಷಿ.
ಅವಕಾಶ ಕಳೆದುಕೊಂಡಿದ್ದೇನೆ
ತಮಿಳಿನಿಂದ ಕೃಷಿ ಅವರಿಗೆ ಸಾಕಷ್ಟು ಅವಕಾಶ ಬಂದಿತ್ತಂತೆ. ಆದರೆ ಅಲ್ಲಿ ಲೈಂಗಿಕ ಕಿರುಕುಳ ಹೆಚ್ಚಾಗಿದೆ ಎನ್ನುವುದನ್ನ ತಿಳಿದ ನಂತರ ಕೃಷಿ ತಾವೇ ಬಂದ ಆಫರ್ ಅನ್ನು ರಿಜೆಕ್ಟ್ ಮಾಡಿದ್ರಂತೆ.
ಇತ್ತೀಚಿನ ಅನುಭವದ ಬಗ್ಗೆ ಮಾತು
ನಟಿ ಕೃಷಿ ತಾಪಂಡಗೆ ಮೂರು ದಿನಗಳ ಹಿಂದಷ್ಟೇ ಇಂಥ ಒಂದು ಎಕ್ಸ್ ಪೀರಿಯನ್ಸ್ ಆಗಿತ್ತಂತೆ. ಈ ಬಗ್ಗೆಯೂ ಕೃಷಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಾವು ಕಲಾವಿದರು ನಮ್ಮ ಪ್ರತಿಭೆಗೆ ಬೆಲೆ ಕೊಡಬೇಕು ದೇಹಕಲ್ಲ, ಇಲ್ಲವಾದರೆ ನಾವು ಕಲಾವಿದರಾಗಿ ಉಳಿಯಲ್ಲ ಸೆಕ್ಸ್ ಟಾಯ್ ಗಳಂತಾಗಿ ಬಿಡ್ತೀವಿ
ಈ ಬಗ್ಗೆ ಯಾರು ಸಹಿಸಿಕೊಳ್ಳ ಬಾರದು ಓಪನ್ ಅಪ್ ಆಗ ಬೇಕು, ಹತ್ತು ಜನ ಇದನ್ನ ವಿರೋಧಿಸಿದ್ರೆ ಸಾಕು ಎಂದಿದ್ದಾರೆ.