ಪತ್ನಿ, ನಿರ್ಮಾಪಕಿ ಸ್ವಪ್ನ ಟ್ವೀಟ್ ಗೆ ಸ್ಪಷ್ಟನೆ ನೀಡಿದ ಕೃಷ್ಣ
Recommended Video
'ಪೈಲ್ವಾನ್' ಸಿನಿಮಾದ ಪೈರಸಿ ವಿಷಯವಾಗಿ ನಿರ್ಮಾಪಕಿ ಸ್ವಪ್ನ ಕೃಷ್ಣ ಟ್ವೀಟ್ ಮಾಡಿದ್ದರು. ''ಎಲ್ಲ ಅಭಿಮಾನಿಗಳಿಗೆ ಸಿಹಿ ಸುದ್ದಿ. ಬೆದರಿಕೆಗೆ ಜಗ್ಗೊನಲ್ಲ ನಮ್ಮ ಪೈಲ್ವಾನ. ಪೈಲ್ವಾನ್ ನ ಕಾಲ್ ಏಳೋಕೆ ಬಂದವರ ಸ್ಥಾನ ಕಾಲ್ ಕೆಳಗೆನೇ'' ಎನ್ನುವುದು ಸ್ವಪ್ನ ಹೇಳಿಕೆಯಾಗಿತ್ತು.
ನಿರ್ಮಾಪಕಿ ಸ್ವಪ್ನ ಟ್ವೀಟ್ ಅನ್ನು ಬೇರೆ ಬೇರೆ ಅರ್ಥಗಳು ಕಲ್ಪಿಸಲಾಗಿತ್ತು. ಇದು ನಟ ದರ್ಶನ್ ಗೆ ಮಾಡಿರುವ ಟ್ವೀಟ್ ಎನ್ನುವ ಆರೋಪ ಬಂದಿತ್ತು. ಆದರೆ, ಈ ಬಗ್ಗೆ ನಿರ್ದೇಶಕ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
''ಪೈರಸಿ ಮಾಡುವವರಿಗೆ, ಸಿನಿಮಾವನ್ನು ಸೋಲಿಸಬೇಕು ಎನ್ನುವವರಿಗೆ ಆ ಮಾತುಗಳನ್ನು ಹೇಳಿದ್ದು.'' ಎಂದು ಪತ್ನಿ ಟ್ವೀಟ್ ಗೆ ಕೃಷ್ಣ ಸ್ಪಷ್ಟನೆ ನೀಡಿದ್ದಾರೆ.

''ಒಬ್ಬ ಟೆಕ್ನಿಷಿಯನ್ ಆಗಿ ಬಂದು, ಒಂದು ದೊಡ್ಡ ಸಿನಿಮಾವನ್ನು ನಿರ್ಮಾಣ ಮಾಡುತ್ತೇವೆ ಎಂದಾಗ ನಮಗೂ ನೋವಾಗುತ್ತೆ. ಇದರಲ್ಲಿ ಯಾರಿಗೂ ಟಾರ್ಗೆಟ್ ಮಾಡಿಲ್ಲ. ಈ ರೀತಿ ಘಟನೆ ನಡೆದಾಗ ಸಿನಿಮಾ ಮಾಡಿರುವ ನಿರ್ಮಾಪಕನಿಗೆ ನೋವಾಗುತ್ತದೆ. ಆ ನೋವನ್ನು ಅವರು ಹೇಳಿಕೊಂಡಿದ್ದಾರೆ ಅಷ್ಟೇ.'' ಎಂದು ಕೃಷ್ಣ ತಿಳಿಸಿದ್ದಾರೆ.
''ಯಾರೂ ಏನೋ ಮಾಡಿದರೂ ಸಿನಿಮಾ ಗೆದ್ದಿದೆ. ಹೀಗಾಗಿ, ಅವರ ಟ್ವೀಟ್ ಅನ್ನು ಬೇರೆ ಅರ್ಥದಲ್ಲಿ ಕಲ್ಪಿಸಿಕೊಳ್ಳುವ ಅಗತ್ಯ ಇಲ್ಲ.'' ಎಂದು ಕೃಷ್ಣ ಹೇಳಿಕೆ ನೀಡಿದ್ದಾರೆ.


Click it and Unblock the Notifications











