twitter
    For Quick Alerts
    ALLOW NOTIFICATIONS  
    For Daily Alerts

    'ಚಿರು' ಜತೆ ಮೊದಲ ಚಿತ್ರದಲ್ಲಿ ನಟಿಸಿದ್ದ ಕೃತಿ ಕರಬಂಧ ಭಾವುಕ ಮಾತು

    |

    ನಟಿ ಕೃತಿ ಕರಬಂಧ ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಗುರುತಿಸಿಕೊಂಡವರಾದರೂ, ಅವರಿಗೆ ಕ್ಯಾಮೆರಾ ಎದುರಿಸುವ ಮೂಲಕ ನಟಿಯಾಗಲು ಅವಕಾಶ ನೀಡಿದ್ದು ಕನ್ನಡ ಚಿತ್ರರಂಗ. ಮಹೇಶ್ ಬಾಬು ನಿರ್ದೇಶನದ 'ಚಿರು' ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗುವ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.

    Recommended Video

    ಚಿರಂಜೀವಿಯನ್ನು ನೋಡಿ ಭಾವುಕರಾದ ಯಶ್ | Chiranjeevi Sarja | Yash | | FILMIBEAT KANNADA

    ಇತ್ತೀಚೆಗೆ ಹಿಂದಿಯಲ್ಲಿ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದರೂ, ತಮ್ಮನ್ನು ನಟಿಯಾಗಿ ಬೆಳೆಸಿದ ಕನ್ನಡ ಚಿತ್ರರಂಗದ ನಂಟನ್ನು ಮರೆತಿಲ್ಲ ಎಂಬುದನ್ನು ಆಗಾಗ ತೋರಿಸಿಕೊಳ್ಳುವ ಕೃತಿ, ಚಿರಂಜೀವಿ ಸರ್ಜಾ ಹಠಾತ್ ನಿಧನದಿಂದ ಆಘಾತಗೊಂಡಿದ್ದಾರೆ. ಈಗಲೂ ಈ ಸುದ್ದಿಯನ್ನು ನಂಬಲು ಆಗುತ್ತಿಲ್ಲ ಎಂದು ಕೃತಿ ಹೇಳಿದ್ದಾರೆ. ಮುಂದೆ ಓದಿ...

    'ನಗುತಲಿರು..' ಎಂದು ಕೊನೆಯದಾಗಿ ಹೇಳಿದ್ದ ಚಿರು, ಅಳು ಉಳಿಸಿ ಹೋದರು'ನಗುತಲಿರು..' ಎಂದು ಕೊನೆಯದಾಗಿ ಹೇಳಿದ್ದ ಚಿರು, ಅಳು ಉಳಿಸಿ ಹೋದರು

    ಕೃತಿ ಕರಬಂಧ ಸಂತಾಪ

    ಕೃತಿ ಕರಬಂಧ ಸಂತಾಪ

    ಚಿರಂಜೀವಿ ಸರ್ಜಾ ನಿಧನದ ಸುದ್ದಿ ಕೇಳಿ ಭಾನುವಾರ ಶೋಕ ವ್ಯಕ್ತಪಡಿಸಿದ್ದ ಅವರು, ಸೋಮವಾರ ಮಧ್ಯಾಹ್ನ ಮತ್ತೊಂದು ಟ್ವೀಟ್ ಮಾಡಿದ್ದಾರೆ. ನಿಮ್ಮ ಬಗ್ಗೆ ನಾನು ಯೋಚಿಸಿದಾಗಲೆಲ್ಲಾ ನನ್ನ ಹೃದಯ ನೋಯುತ್ತದೆ ಮತ್ತು ಅಳುತ್ತದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೃತಿ ಹೇಳಿದ್ದಾರೆ.

    ನಂಬಲು ಆಗುತ್ತಿಲ್ಲ

    ನಂಬಲು ಆಗುತ್ತಿಲ್ಲ

    'ನನ್ನ ಮೊದಲ ಸಹನಟ, ಒಬ್ಬ ಅದ್ಭುತ ಮಾನವೀಯ ವ್ಯಕ್ತಿ, ಸಿಹಿಯಾದ ನಗುವಿನ ಮತ್ತು ಅತ್ಯುತ್ತಮ ಹೃದಯದ ಹುಡುಗ. ನೀವು ನಮ್ಮನ್ನು ಅಗಲಿದ್ದೀರಿ ಎಂಬುದನ್ನು ಈಗಲೂ ನಂಬಲು ಆಗುತ್ತಿಲ್ಲ' ಎಂದು ಕೃತಿ ನೋವು ಹಂಚಿಕೊಂಡಿದ್ದಾರೆ.

    ಸರ್ಜಾ ಕುಟುಂಬಕ್ಕೆ ಇದು ಮೂರನೆ ಆಘಾತ: ಈ ಹಿಂದೆಯೂ ಆಟವಾಡಿತ್ತು ವಿಧಿಸರ್ಜಾ ಕುಟುಂಬಕ್ಕೆ ಇದು ಮೂರನೆ ಆಘಾತ: ಈ ಹಿಂದೆಯೂ ಆಟವಾಡಿತ್ತು ವಿಧಿ

    ಕನಸು ಎಂದುಕೊಂಡಿದ್ದೆ

    ಕನಸು ಎಂದುಕೊಂಡಿದ್ದೆ

    ಹಿಂದಿನ ದಿನ ನಡೆದಿದ್ದು ಕೆಟ್ಟ ಕನಸು ಇರಬಹುದಷ್ಟೇ ಎಂದುಕೊಂಡಿದ್ದೆ. ಅದೇ ಭರವಸೆಯೊಂದಿಗೆ ಈ ದಿನ ಬೆಳಿಗ್ಗೆ ಎದ್ದೆ. ಆದರೆ ಈ ಕಹಿ ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕೃತಿ ಬರೆದುಕೊಂಡಿದ್ದಾರೆ. 'ಇದೊಂದು ಕನಸಾಗಿರಲಿದೆ ಎಂಬ ಭರವಸೆಯೊಂದಿಗೆ ಬೆಳಿಗ್ಗೆ ಎದ್ದೆ. ಈಗಲೂ ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ' ಎಂದು ಕೃತಿ ದುಃಖ ತೋಡಿಕೊಂಡಿದ್ದಾರೆ.

    ಶಕ್ತಿ ಸಿಗುವ ಭರವಸೆ

    ಶಕ್ತಿ ಸಿಗುವ ಭರವಸೆ

    'ಮೇಘನಾ, ಧ್ರುವ, ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಹೃದಯ ಮಿಡಿಯುತ್ತಿದೆ. ಈ ನಷ್ಟವನ್ನು ಭರಿಸುವ ಎಲ್ಲ ಶಕ್ತಿಯನ್ನೂ ಅವರು ಕಂಡುಕೊಳ್ಳುತ್ತಾರೆ ಎಂಬ ಭರವಸೆ ಹೊಂದಿದ್ದೇನೆ' ಎಂದು ಕೃತಿ ಹೇಳಿದ್ದಾರೆ.

    English summary
    Actress Kriti Kharbanda who made her debute in Kannada in Chiru movie with Chiranjeevi Sarja wrote an emotional note about his sad demaise.
    Monday, June 8, 2020, 14:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X