Don't Miss!
- Automobiles ರಾಂಗ್ ರೂಟ್ನಲ್ಲಿ ಬಂದು ಪ್ರಶ್ನಿಸಿದ ಬೈಕ್ ಸವಾರನಿಗೆ ಥಳಿಸಿದ ಕಾರು ಚಾಲಕ: ವಿಡಿಯೋ
- News CAA: ಸಿಎಎ ಜಾರಿ ಪ್ರಶ್ನಿಸಿ 230ಕ್ಕೂ ಹೆಚ್ಚು ಅರ್ಜಿ: ಸುಪ್ರೀಂಕೋರ್ಟ್ನಲ್ಲಿ ಮಹತ್ವದ ವಿಚಾರಣೆ
- Finance ಆಧಾರ್ ಉಚಿತ ಅಪ್ಡೇಟ್ ದಿನಾಂಕ ಜೂ.14ರವರೆಗೆ ವಿಸ್ತರಣೆ: ಆನ್ಲೈನ್ನಲ್ಲಿ ಹೀಗೆ ನವೀಕರಿಸಿ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Sports IPL 2024: ಮುಂಬೈ ನಾಯಕನಿಗೆ ಪತ್ರಕರ್ತರಿಂದ ಬೌನ್ಸರ್: ಉತ್ತರಿಸದೆ ಮೌನಕ್ಕೆ ಶರಣಾದ ಹಾರ್ದಿಕ್ ಪಾಂಡ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿ ಎಂ ಕುಮಾರ ಸ್ವಾಮಿ ಇಂದಿಗೂ ಹೆದರೋದು ಇವರೊಬ್ಬರಿಗೆ !
Recommended Video
ಹೆಚ್ ಡಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ.. ಕುಮಾರಸ್ವಾಮಿ ಅವರೆಂದರೆ ಎಲ್ಲರಿಗೂ ಗೌರವ, ಪ್ರೀತಿ ಇದ್ದೇ ಇರುತ್ತದೆ. ಇನ್ನು ಅವರ ಸುತ್ತಾ ಮುತ್ತ ಇರುವ ಅನೇಕರಿಗೆ ಇವರೆಂದರೆ ಭಯ ಕೂಡ ಇದೆ. ಆದರೆ ಕುಮಾರಸ್ವಾಮಿ ಮಾತ್ರ ಇವರೊಬ್ಬರಿಗೆ ಹೆದರುತ್ತಾರಂತೆ. ಈ ಮಾತನ್ನು ಖುದ್ದು ಸಿ ಎಂ ಅವರೇ ಹೇಳಿದ್ದಾರೆ.
ಹೌದು.. ಕುಮಾರಸ್ವಾಮಿ ಅವರು ತಮ್ಮ ಮಗ ನಿಖಿಲ್ ಕುಮಾರ್ ಅವರಿಗೆ ಹೆದರುತ್ತಾರಂತೆ. ಕಾರಣ ಏನೆಂದರೆ ನಿಖಿಲ್ ಸಿನಿಮಾ ವಿಚಾರ ಬಂದರೆ ತಾವೇ ಸ್ವಂತ ನಿರ್ಧಾರ ತೆಗೆದುಕೊಳ್ಳುತ್ತಾರಂತೆ. ಯಾರು ಏನೇ ಹೇಳಿದರು ಅವರಿಗೆ ಕಥೆ ಇಷ್ಟವಾಗಿ, ಅದನ್ನು ತಾನು ಮಾಡಬಹುದು ಎನ್ನುವ ನಂಬಿಕೆ ಬಂದರೆ ಮಾತ್ರ ಒಪ್ಪಿಕೊಳ್ಳುತ್ತಾರಂತೆ.
ರಾಮನಗರ ಕರಗದಲ್ಲಿ 'ಸೀತಾರಾಮ ಕಲ್ಯಾಣ' ಟೀಸರ್ ರಿಲೀಸ್
ಹಾಗಾಗಿ ಸ್ವತಃ ಕುಮಾರ ಸ್ವಾಮಿ ಅವರೇ ಇಂತಹ ಚಿತ್ರದಲ್ಲಿ ಅಭಿನಯ ಮಾಡಲೇ ಬೇಕು ಎಂದು ಹೇಳುವುದಿಲ್ಲವಂತೆ. ಹಾಗೇನಾದರೂ ತುಂಬಾ ಇಷ್ಟವಾಗುವ ಕತೆ ಕೇಳಿದರೇ ಮಾತ್ರ ಒಳ್ಳೆ ಸಿನಿಮಾ ಅಭಿನಯ ಮಾಡು ಎಂದು ಸಲಹೆ ನೀಡುತ್ತಾರಂತೆ.
ಈ ವಿಚಾರವನ್ನು ಇತ್ತೀಚಿಗಷ್ಟೆ ನಡೆದ 'ಸೀತಾರಾಮ ಕಲ್ಯಾಣ' ಚಿತ್ರದ ಸುದ್ದಿಗೋಷ್ಟಿಯಲ್ಲಿ ಸಿ ಎಂ ಕುಮಾರಸ್ವಾಮಿ ಅವರು ಹೇಳಿಕೊಂಡಿದ್ದಾರೆ. ಒಟ್ಟಾರೆ ಇನ್ನು ಮುಂದೆ ನಿಖಿಲ್ ಅಭಿನಯ ಮಾಡುವ ಚಿತ್ರಗಳ ಆಯ್ಕೆ ನಿಖಿಲ್ ಅವರದ್ದೇ ಆಗಿರುತ್ತೆ.