Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿ ಎಂ ಕುಮಾರ ಸ್ವಾಮಿ ಇಂದಿಗೂ ಹೆದರೋದು ಇವರೊಬ್ಬರಿಗೆ !
Recommended Video
ಹೆಚ್ ಡಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ.. ಕುಮಾರಸ್ವಾಮಿ ಅವರೆಂದರೆ ಎಲ್ಲರಿಗೂ ಗೌರವ, ಪ್ರೀತಿ ಇದ್ದೇ ಇರುತ್ತದೆ. ಇನ್ನು ಅವರ ಸುತ್ತಾ ಮುತ್ತ ಇರುವ ಅನೇಕರಿಗೆ ಇವರೆಂದರೆ ಭಯ ಕೂಡ ಇದೆ. ಆದರೆ ಕುಮಾರಸ್ವಾಮಿ ಮಾತ್ರ ಇವರೊಬ್ಬರಿಗೆ ಹೆದರುತ್ತಾರಂತೆ. ಈ ಮಾತನ್ನು ಖುದ್ದು ಸಿ ಎಂ ಅವರೇ ಹೇಳಿದ್ದಾರೆ.
ಹೌದು.. ಕುಮಾರಸ್ವಾಮಿ ಅವರು ತಮ್ಮ ಮಗ ನಿಖಿಲ್ ಕುಮಾರ್ ಅವರಿಗೆ ಹೆದರುತ್ತಾರಂತೆ. ಕಾರಣ ಏನೆಂದರೆ ನಿಖಿಲ್ ಸಿನಿಮಾ ವಿಚಾರ ಬಂದರೆ ತಾವೇ ಸ್ವಂತ ನಿರ್ಧಾರ ತೆಗೆದುಕೊಳ್ಳುತ್ತಾರಂತೆ. ಯಾರು ಏನೇ ಹೇಳಿದರು ಅವರಿಗೆ ಕಥೆ ಇಷ್ಟವಾಗಿ, ಅದನ್ನು ತಾನು ಮಾಡಬಹುದು ಎನ್ನುವ ನಂಬಿಕೆ ಬಂದರೆ ಮಾತ್ರ ಒಪ್ಪಿಕೊಳ್ಳುತ್ತಾರಂತೆ.
ರಾಮನಗರ ಕರಗದಲ್ಲಿ 'ಸೀತಾರಾಮ ಕಲ್ಯಾಣ' ಟೀಸರ್ ರಿಲೀಸ್
ಹಾಗಾಗಿ ಸ್ವತಃ ಕುಮಾರ ಸ್ವಾಮಿ ಅವರೇ ಇಂತಹ ಚಿತ್ರದಲ್ಲಿ ಅಭಿನಯ ಮಾಡಲೇ ಬೇಕು ಎಂದು ಹೇಳುವುದಿಲ್ಲವಂತೆ. ಹಾಗೇನಾದರೂ ತುಂಬಾ ಇಷ್ಟವಾಗುವ ಕತೆ ಕೇಳಿದರೇ ಮಾತ್ರ ಒಳ್ಳೆ ಸಿನಿಮಾ ಅಭಿನಯ ಮಾಡು ಎಂದು ಸಲಹೆ ನೀಡುತ್ತಾರಂತೆ.
ಈ ವಿಚಾರವನ್ನು ಇತ್ತೀಚಿಗಷ್ಟೆ ನಡೆದ 'ಸೀತಾರಾಮ ಕಲ್ಯಾಣ' ಚಿತ್ರದ ಸುದ್ದಿಗೋಷ್ಟಿಯಲ್ಲಿ ಸಿ ಎಂ ಕುಮಾರಸ್ವಾಮಿ ಅವರು ಹೇಳಿಕೊಂಡಿದ್ದಾರೆ. ಒಟ್ಟಾರೆ ಇನ್ನು ಮುಂದೆ ನಿಖಿಲ್ ಅಭಿನಯ ಮಾಡುವ ಚಿತ್ರಗಳ ಆಯ್ಕೆ ನಿಖಿಲ್ ಅವರದ್ದೇ ಆಗಿರುತ್ತೆ.