ಸಂಭಾಷಣೆಕಾರ ಕುಣಿಗಲ್ ನಾಗಭೂಷಣ್ ಬೆಳ್ಳಿಹೆಜ್ಜೆ

ಕರ್ನಾಟಕ ಚಲನಚಿತ್ರ ಅಕಾಡೆಮಿ ಸುಸೂತ್ರವಾಗಿ ನಡೆಸುಕೊಂಡು ಬರುತ್ತಿರುವ 'ಬೆಳ್ಳಿಹೆಜ್ಜೆ' ಕಾರ್ಯಕ್ರಮಕ್ಕೆ ಈ ಬಾರಿಯ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಅಕಾಡೆಮಿ ನಡೆಸಿಕೊಡುತ್ತಿರುವ 33ನೇ ಬೆಳ್ಳಿಹೆಜ್ಜೆ ಕಾರ್ಯಕ್ರಮ ಇದಾಗಿದೆ.
ಇದೇ ಆಗಸ್ಟ್ 25ರಂದು ಸಂಜೆ 5 ಗಂಟೆಗೆ ಬೆಂಗಳೂರು ಜೆಸಿ ರಸ್ತೆಯ ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಅವರನ್ನು ತೆರೆಯ ಮೇಲೆ ನೋಡಿರುವ, ಅವರ ಅದೆಷ್ಟೋ ಸಂಭಾಷಣೆಗಳನ್ನು ಕೇಳಿರುವವರು ಅವರೊಂದಿಗೆ ಅಂದು ಮುಖಾಮುಖಿಯಾಗಬಹುದು.
'ನಾಂದಿ' ಚಿತ್ರದ ಮೂಲಕ ಸಹನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಾಗಭೂಷಣ ಅವರು 'ಸಿಂಹ ಜೋಡಿ' ಮೂಲಕ ಚಿತ್ರ ಸಂಭಾಷಣೆ ರಚಿಸಲು ಮೊದಲಿಟ್ಟರು. ಜೊತೆಗೆ ಬಣ್ಣ ಹಚ್ಚಲೂ ಆರಂಭಿಸಿದರು. ಜನಪ್ರಿಯ ಸಂಭಾಷಣೆಕಾರರಾಗಿ ರೂಪುಗೊಂಡ ಕುಣಿಗಲ್ ನಾಗಭೂಷಣ್ ಇದುವರೆಗೂ 200ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ಹೆಣೆದಿದ್ದಾರೆ.
ರಾಜ್ಯ ಸರ್ಕಾರದಿಂದ ಎರಡು ಬಾರಿ ಅತ್ಯುತ್ತಮ ಸಂಭಾಷಣಾ ಕರ್ತೃ ಪ್ರಶಸ್ತಿ (ಗೌರಿ ಗಣೇಶ, ಯಾರಿಗೂ ಹೇಳ್ಬೇಡಿ) ಪಡೆದಿದ್ದಾರೆ. ಆಶೀರ್ವಾದ ಹಾಗೂ ಬಾಳು ಜೇನು ಚಿತ್ರಗಳು ಅವರ ನಿರ್ದೇಶನಲ್ಲಿ ಬಂದಂತಹ ಚಿತ್ರಗಳು. ಚಲನಚಿತ್ರರಂಗದ ಜೊತೆಗೆ ಕಿರುತೆರೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗಣೇಶನ ಮದುವೆ, ಗೋಲ್ ಮಾಲ್ ರಾಧಾಕೃಷ್ಣ. (ಒನ್ ಇಂಡಿಯಾ ಕನ್ನಡ)


Click it and Unblock the Notifications











