Don't Miss!
- News ರಾಜ್ಯದ ವಿವಿಧೆಡೆ ವರುಣದೇವನ ಆರ್ಭಟ; ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟು ?
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Finance ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳ ಪರೀಕ್ಷೆಗೆ ಮುಂದಾದ FSSAI
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕುರುಕ್ಷೇತ್ರ ಹೊಸ ಟೀಸರ್: ಕರ್ಣ, ಅರ್ಜುನ, ದ್ರೌಪದಿ, ಕೃಷ್ಣಾವತಾರ ದರ್ಶನ
ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಕುರುಕ್ಷೇತ್ರ ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿದೆ. ದರ್ಶನ್ ಮತ್ತು ನಿಖಿಲ್ ಅವರ ಎರಡು ಟೀಸರ್ ಈ ಹಿಂದೆ ರಿಲೀಸ್ ಆಗಿತ್ತು. ಈಗ ಮೂರನೇ ಟೀಸರ್ ಬಂದಿದ್ದು, ಬಹುತೇಕ ಎಲ್ಲ ಪಾತ್ರಗಳ ಅನಾವರಣ ಆಗಿದೆ.
ಇಷ್ಟು ದಿನ ದುರ್ಯೋಧನ ದರ್ಶನ್ ಮತ್ತು ಅಭಿಮನ್ಯು ನಿಖಿಲ್ ಪಾತ್ರಗಳಷ್ಟೇ ಅಧಿಕೃತವಾಗಿ ಅನಾವರಣವಾಗಿತ್ತು. ಈಗ ಭೀಷ್ಮ, ಕರ್ಣ, ಅರ್ಜುನ, ಧರ್ಮರಾಯ, ಕುಂತಿ, ದ್ರೌಪದಿ, ಕೃಷ್ಣ, ಶಕುನಿ ಪಾತ್ರಗಳ ದರ್ಶನವಾಗಿದೆ.
'ಕುರುಕ್ಷೇತ್ರ' ಸುದ್ದಿಗೋಷ್ಠಿಗೆ ದರ್ಶನ್-ನಿಖಿಲ್ ಬರಲಿಲ್ಲ: ಮುನಿರತ್ನ ಕೊಟ್ಟ ಕಾರಣವೇನು?
ದುರ್ಯೋಧನನ ಇನ್ನೊಂದು ಝಲಕ್ ಈ ಟೀಸರ್ ನಲ್ಲಿ ಸಿಕ್ಕಿದೆ. ಅರ್ಜುನನಿಗೆ (ಸೋನು ಸೂದ್) ಸಾರಥಿಯಾಗಿ ಕೃಷ್ಣ (ರವಿಚಂದ್ರನ್), ರಣರಂಗದಲ್ಲಿ ಕರ್ಣ (ಅರ್ಜುನ್ ಸರ್ಜಾ) ಹಾಗೂ ಭೀಷ್ಮ (ಅಂಬರೀಶ್) ಅವರ ಗೆಟಪ್ ಬಹಿರಂಗವಾಗಿದೆ.
ಇವರ ಜೊತೆಯಲ್ಲಿ ಶಕುನಿ (ರವಿಶಂಕರ್) ದ್ರೌಪದಿ (ಸ್ನೇಹ), ಕುಂತಿ (ಭಾರತಿ ವಿಷ್ಣುವರ್ಧನ್), ಧರ್ಮರಾಯ (ಶಶಿಕುಮಾರ್) ಲುಕ್ ಕೂಡ ಅನಾವರಣವಾಗಿದೆ.
'ಕುರುಕ್ಷೇತ್ರ'ದ ಟಿವಿ ಹಕ್ಕು ಖರೀದಿ ಮಾಡಿದ ಜೀ ಕನ್ನಡ: ಎಷ್ಟು ಕೋಟಿ ಗೊತ್ತಾ?
ಮುನಿರತ್ನ ನಿರ್ಮಿಸಿ, ನಾಗಣ್ಣ ನಿರ್ದೇಶನ ಮಾಡಿರುವ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9 ರಂದು ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ವಿಶ್ವಾದ್ಯಂತ ತೆರೆಕಾಣುತ್ತಿದೆ.