Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಡ್ಯ ಜನರ ಹೃದಯ ಸ್ಪರ್ಶಿಸಿದ ಅಭಿಷೇಕ್ ಕೆಲಸ
ತಮ್ಮ ಸಾಧನೆಯ ಮೂಲಕ ಮಂಡ್ಯ ಹೆಸರನ್ನು ಇಂಡಿಯಾದ ತುಂಬ ತಲುಪಿಸಿದ್ದ ಅಂಬರೀಶ್, ಸಾವಿನ ನಂತರವೂ ಮಂಡ್ಯದ ಮಣ್ಣಿನ ಋಣ ತೀರಿಸಿದ್ದಾರೆ.
ಮಂಡ್ಯದಲ್ಲಿ ಅಂಬರೀಶ್ ಮೃತ ದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಅಲ್ಲಿಂದ ಬೆಂಗಳೂರಿಗೆ ಪಾರ್ಥಿವ ಶರೀರ ರವಾನೆ ಮಾಡುವ ಮುನ್ನ ಮಂಡ್ಯದ ಮಣ್ಣಿನ ಸ್ಪರ್ಶವನ್ನ ಅವರ ದೇಹಕ್ಕೆ ಮಾಡಲಾಯಿತು.
ಪಂಚಭೂತಗಳಲ್ಲಿ ಲೀನರಾದ 'ಮಂಡ್ಯದ ಗಂಡು' ಅಮರ್ ನಾಥ್
ಅಂಬರೀಶ್ ಪುತ್ರ ಅಭಿಷೇಕ್ ಮಂಡ್ಯದ ಮಣ್ಣನ್ನು ತೆಗೆದುಕೊಂಡು ತಮ್ಮ ತಂದೆಯ ಹಣೆ, ಕಣ್ಣು ಮತ್ತು ತುಟಿಗಳಿಗೆ ಸವರಿದರು. ಇದರ ಸಾಂಕೇತಿಕ ಅರ್ಥ ಮಂಡ್ಯದ ಮಣ್ಣಿನ ಋಣ ತೀರಿಸಿದರು ಅಂತಲೇ ಅಥವಾ ಮಂಡ್ಯದ ಮಣ್ಣಿನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋದರು ಎಂತಲೋ ತಿಳಿದಿಲ್ಲ.
ಹೌದು, ಅಭಿಷೇಕ್ ಮನಸ್ಸಿನಲ್ಲಿ ಆ ವೇಳೆ ಏನಿತ್ತು ತಿಳಿಯಲಿಲ್ಲ. ಆದರೆ, ಅಭಿಷೇಕ್ ಅವರ ಈ ಕೆಲಸ ನಿಜಕ್ಕೂ ಮಂಡ್ಯ ಜನರ ಹೃದಯವನ್ನ ಸ್ಪರ್ಶಿಸಿತು.
ಅಪ್ಪ ಅಂಬಿಯಂತೆ ಮಾನವೀಯತೆ ಮೆರೆದ ಮಗ ಅಭಿಶೇಕ್
ಆ ಬಳಿಕ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಮೃತ ದೇಹದ ಅಂತ್ಯಕ್ರಿಯೆ ನಡೆಯಿತು. ಮಗ ಅಭಿಷೇಕ್, ತಮ್ಮ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ಅಂಬರೀಶ್ ಪಂಚಭೂತಗಳಲ್ಲಿ ಲೀನರಾದರು.